ಆದಿತ್ಯ ಬಾಲ್ 
ರಾಜ್ಯ

ನಟ-ಚೆಫ್ ಆದಿತ್ಯ ಬಾಲ್ ಗೆ ಸೈಬರ್ ಅಪರಾಧಿಗಳಿಂದ 99 ಸಾವಿರ ರೂ. ವಂಚನೆ

ಕೋವಿಡ್‌ನಿಂದ ಬಳಲುತ್ತಿರುವ ತನ್ನ ಸ್ನೇಹಿತನ ತಾಯಿಗೆ ಬಿ-ನೆಗೆಟಿವ್ ರಕ್ತಕ್ಕಾಗಿ ಆನ್‌ಲೈನ್‌ನಲ್ಲಿ ಹುಡುಕುತ್ತಿರುವಾಗ 'ದಿ ಚಖ್ ಲೆ ಇಂಡಿಯಾ - ಕುಕ್‌ಬುಕ್' ಲೇಖಕ, ಮಾಡೆಲ್, ನಟ ಮತ್ತು ಖ್ಯಾತ ಚೆಫ್ ಆದಿತ್ಯ ಬಾಲ್ ಅವರು...

ಬೆಂಗಳೂರು: ಕೋವಿಡ್‌ನಿಂದ ಬಳಲುತ್ತಿರುವ ತನ್ನ ಸ್ನೇಹಿತನ ತಾಯಿಗೆ ಬಿ-ನೆಗೆಟಿವ್ ರಕ್ತಕ್ಕಾಗಿ ಆನ್‌ಲೈನ್‌ನಲ್ಲಿ ಹುಡುಕುತ್ತಿರುವಾಗ 'ದಿ ಚಖ್ ಲೆ ಇಂಡಿಯಾ - ಕುಕ್‌ಬುಕ್' ಲೇಖಕ, ಮಾಡೆಲ್, ನಟ ಮತ್ತು ಖ್ಯಾತ ಚೆಫ್ ಆದಿತ್ಯ ಬಾಲ್ ಅವರು ಸೈಬರ್ ವಂಚನೆಗೆ ಒಳಗಾಗಿದ್ದಾರೆ.

ತಾವು ಬ್ಲಡ್ ಬ್ಯಾಂಕ್ ನವರು ಎಂದು ಹೇಳಿಕೊಂಡ ಆರೋಪಿ, ಆಸ್ಪತ್ರೆ ದಾಖಲಾತಿ ಶುಲ್ಕವಾಗಿ 5 ರೂ. ನೀಡುವಂತೆ ಕೇಳಿಕೊಂಡಿದ್ದಾರೆ. ನಂತರ ನಡೆದ ಎರಡು ವಹಿವಾಟುಗಳಲ್ಲಿ ಯುಪಿಐ ಹಣ ವರ್ಗಾವಣೆ ಮೂಲಕ ಬಾಲ್ ಅವರು 99,000 ಕಳೆದುಕೊಂಡಿದ್ದಾರೆ. ಘಟನೆ ನಡೆದಾಗ ಅವರು ಬಿದರಹಳ್ಳಿಯ ಬೂದಿಗೆರೆ ಕ್ರಾಸ್ ಬಳಿಯ ಹಳೆ ಮದ್ರಾಸ್ ರಸ್ತೆಯ ಪ್ರೆಸ್ಟೀಜ್ ಗ್ಲೆನ್‌ವುಡ್ ಅಪಾರ್ಟ್‌ಮೆಂಟ್‌ನಲ್ಲಿದ್ದರು.

ದೆಹಲಿಯಿಂದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜತೆ ಮಾತನಾಡಿದ ಚೆಫ್, ನಾನು ಯಾವುದೇ OTP ಅಥವಾ ಇತರ ವಿವರಗಳನ್ನು ಹಂಚಿಕೊಳ್ಳದ ಕಾರಣ ಹಣ ಹೇಗೆ ಹೋಯಿತು ಎಂದು ನಿಖರವಾಗಿ ತಿಳಿದಿಲ್ಲ ಎಂದಿದ್ದಾರೆ. ಆರಂಭದಲ್ಲಿ 5 ರೂ. ವರ್ಗಾವಣೆ ಮಾಡಲು ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ ಆರೋಪಿಯು ತನ್ನ UPI ವಿಂಡೋಗೆ ಪ್ರವೇಶ ಪಡೆದಿರಬಹುದು ಎಂದು ಅವರು ಶಂಕಿಸಿದ್ದಾರೆ. ಈ ಸಂಬಂಧ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

“ಕೋಲ್ಕತ್ತಾದಲ್ಲಿರುವ ನನ್ನ ಸ್ನೇಹಿತನ ವಯಸ್ಸಾದ ತಾಯಿ, ಕೋವಿಡ್‌ನಿಂದ ಬಳಲುತ್ತಿದ್ದು, ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ತುರ್ತಾಗಿ ಬಿ ನೆಗೆಟಿವ್ ರಕ್ತದ ಅವಶ್ಯಕತೆ ಇದ್ದುದರಿಂದ ನಾನು ಸಹಾಯ ಮಾಡುತ್ತಿದ್ದೆ ಎಂದು ಬಾಲ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods|ಮೃತರ ಸಂಖ್ಯೆ 165ಕ್ಕೆ ಏರಿಕೆ; ನಾಪತ್ತೆಯಾದವರಲ್ಲಿ 133 ಮಂದಿ ಭಾರತೀಯರು

Iran ಸರ್ವೋಚ್ಚ ನಾಯಕ Mojtaba Khamenei ಸತ್ತಿಲ್ಲ, ಗಂಭೀರವಾಗಿ ಗಾಯಗೊಂಡಿದ್ದಾರೆ: ಹಳೇ Vidoe ಬಿಡುಗಡೆ ಬೆನ್ನಲ್ಲೇ ಅಸಲಿಯತ್ತು ಬಿಚ್ಚಿಟ್ಟ Donald Trump..!

Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ