ಸುಬೇದಾರ್ ಮೇಜರ್ ಸಿಂಗ್ 
ರಾಜ್ಯ

ಕಮಾಂಡೊ ಸುಬೇದಾರ್ ಮೇಜರ್ ಸಿಂಗ್ ನಾಪತ್ತೆ ಪ್ರಕರಣ: ತಂಡ ರಚಿಸಿ, ಹುಡುಕಾಟ ತೀವ್ರಗೊಳಿಸಿದ ಪೊಲೀಸರು

ಜೂನ್ 11 ರಂದು ಬೆಳಗಾವಿಯಿಂದ ನಿಗೂಢವಾಗಿ ನಾಪತ್ತೆಯಾಗಿರುವ ಕಮಾಂಡೋ ಸುಬೇದಾರ್ ಮೇಜರ್ ಸಿಂಗ್ ಪತ್ತೆಗೆ ಪೊಲೀಸರು ತಂಡ ರಚಿಸಿದ್ದು, ಹುಡುಕಾಟ ತೀವ್ರಗೊಳಿಸಿದ್ದಾರೆ.

ಬೆಳಗಾವಿ: ಜೂನ್ 11 ರಂದು ಬೆಳಗಾವಿಯಿಂದ ನಿಗೂಢವಾಗಿ ನಾಪತ್ತೆಯಾಗಿರುವ ಕಮಾಂಡೋ ಸುಬೇದಾರ್ ಮೇಜರ್ ಸಿಂಗ್ ಪತ್ತೆಗೆ ಪೊಲೀಸರು ತಂಡ ರಚಿಸಿದ್ದು, ಹುಡುಕಾಟ ತೀವ್ರಗೊಳಿಸಿದ್ದಾರೆ.

ಸುಬೇದಾರ್ ಎಂಎಲ್ಐಆರ್'ಸಿ ಬೆಳಗಾವಿಯ ಕಮಾಂಡೋ ವಿಂಗ್‌'ಗೆ ಸೇರಿದವರಾಗಿದ್ದು, ಪಂಜಾಬ್'ನ ಗುರುದಾಸ್ ಪುರ ಜಿಲ್ಲೆಯ ಮೂಲದವರಾಗಿದ್ದಾರೆ. ಫೋನ್ ರಿಪೇರಿ ಮಾಡಿಸಲೆಂದು ಸುಬೇದಾರ್ ಅವರು ಜೂನ್.11 ರಂದು ಓಲ್ಡ್ ಸಿಟಿಗೆ ಬಂದಿದ್ದಾರೆ.

ಕೇಳ್ಕರ್ ಬಾಗ್‌ನಲ್ಲಿರುವ ವೈಶಾಲಿ ಕಿಚನ್ ಬಳಿ ಸುಬೇದಾರ್ ಅವರು ತಮ್ಮ ಸೈಕಲ್ ಪಾರ್ಕ್ ಮಾಡಿರುವುದು ಕಂಡು ಬಂದಿದೆ. ಸಾಕಷ್ಟು ಸಮಯವಾದರೂ ಸುಬೇದಾರ್ ಬಾರದ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಸುಬೇದಾರ್ ಜೊತೆಗೆ ಕೆಲಸ ಮಾಡುತ್ತಿದ್ದ ಇತರೆ ಯೋಧರು ಹುಡುಕಾಡಿದ್ದಾರೆ. ಆದರೆ, ಎಲ್ಲಿಯೂ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.

ವೈಶಾಲಿ ಕಿಚನ್ ಬಳಿಕ ಸುಬೇದಾರ್ ಅವರ ಸೈಕಲ್ ಪತ್ತೆಯಾಗಿದೆ. ಸುಬೇದಾರ್ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರು ಚಿಂತಿತರಾಗಿದ್ದಾರೆ. ಇವರ ಬಗ್ಗೆ ಯಾರಿಗೇ ಮಾಹಿತಿ ಸಿಕ್ಕರೂ 9899217518 ಈ ಮೊಬೈಲ್ ಸಂಖ್ಯೆಗೆ ಕರೆ ಮಾಡುವಂತೆ ಅಧಿಕಾರಿಗಳು ತಿಳಿಸಿದ್ದಾರೆ.

ಉಪ ಪೊಲೀಸ್ ಆಯುಕ್ತ ಪಿವಿ ಸ್ನೇಹಾ ಅವರು ಮಾತನಾಡಿ, ಸುಬೇದಾರ್ ನಾಪತ್ತೆ ಕುರಿತು ತನಿಖೆ ಆರಂಭಿಸಲಾಗಿದೆ. ಆವರ ಬಗ್ಗೆ ಮಾಹಿತಿ ನೀಡಿದವರಿಗೆ ರೂ.50,000 ಬಹುಮಾನ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಿರಿಯ ನಾಯಕರೊಂದಿಗಿನ ಚರ್ಚೆ ಬಳಿಕ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ: ದೆಹಲಿಗೆ ತೆರಳುವ ಮುನ್ನ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ

ಹೃದಯ ಛಿದ್ರವಾಗಿದೆ: ಆಫ್ರಿಕಾ ವಿರುದ್ಧದ ಸರಣಿ ಹೀನಾಯ ಸೋಲಿನ ನಂತರ ಇಡೀ ದೇಶದ ಕ್ಷಮೆಯಾಚಿಸಿದ ರಿಷಭ್ ಪಂತ್!

WPL Auction 2026: ಬರೋಬ್ಬರಿ 3.2 ಕೋಟಿ ರೂ. ಗೆ ಆಲ್ ರೌಂಡರ್ ದೀಪ್ತಿ ಶರ್ಮಾ ಸೋಲ್ಡೌಟ್‌! ಸ್ಟನ್ ಆದ ಗಂಗೂಲಿ

ತಮಿಳುನಾಡು-ಆಂಧ್ರ ತೀರಕ್ಕೆ ದಿತ್ವಾ ಚಂಡಮಾರುತ: ಬೆಂಗಳೂರು ಸೇರಿ ಕರ್ನಾಟಕದಲ್ಲಿ 4 ದಿನ ಭಾರೀ ಮಳೆ ಸಾಧ್ಯತೆ; IMD ಎಚ್ಚರಿಕೆ

ಸ್ಮೃತಿ ಮಂಧಾನ 'ಮದುವೆ' ಮುಂದೂಡಿಕೆ: ಮಹತ್ವದ ನಿರ್ಧಾರ ತೆಗೆದುಕೊಂಡ ಜೆಮಿಮಾ ರೊಡ್ರಿಗಸ್!

SCROLL FOR NEXT