ರಾಜ್ಯ

ಕಲಬುರಗಿ: ದೇವರ ಹರಕೆ ತೀರಿಸಲು ಹೋಗಿದ್ದ ಮೂವರು ಅಪಘಾತದಲ್ಲಿ ದುರ್ಮರಣ

Sumana Upadhyaya

ಕಲಬುರಗಿ : ದೇವರ ದರ್ಶನಕ್ಕೆ ಹೋದವರು ಅಪಘಾತದಲ್ಲಿ ದೇವರ ಪಾದ ಸೇರಿದ ಘಟನೆಗಳು ಹಿಂದೆ ಆಗಿವೆ. ನಿನ್ನೆ ಕಲಬುರಗಿಯಲ್ಲಿ ಕೂಡ ಅಂತಹದ್ದೇ ಘಟನೆಯಾಗಿದೆ. ದೇವರ ಹರಕೆ ತೀರಿಸಲು ಹೋಗಿದ್ದ ಮೂವರು ಅಪಘಾತದಲ್ಲಿ ದುರ್ಮರಣ ಹೊಂದಿರುವ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ನಾವದಗಿ ಗ್ರಾಮದ ಬಳಿ ನಡೆದಿದೆ.

ಕಮಲಾಪುರ ತಾಲ್ಲೂಕಿನ ಗೋಗಿ ತಾಂಡಾ ನಿವಾಸಿಗಳಾದ ದೀಪಕ್ (45ವ), ಯುವರಾಜ್ (17ವ)  ರಾಹುಲ್ (17ವ) ಮೃತರು. 

ನಿನ್ನೆ ಗೋಗಿ ತಾಂಡಾದಿಂದ ಸಾವಳಗಿ ತಾಂಡಾಗೆ  ದೇವರ ಹರಕೆ ತೀರಿಸಲು ಕುಟುಂಬ ಸಮೇತ ಹೋಗಿದ್ದರು. ದೇವರ ಹರಕೆ ತೀರಿಸಿದ ಬಳಿಕ ಕುಟುಂಬಸ್ಥರು ಕ್ರೂಸರ್ ವಾಹನದಲ್ಲಿ ವಾಪಸ್ ಆಗಿದ್ದರು. ದೀಪಕ್, ಯುವರಾಜ್ ಮತ್ತು ರಾಹುಲ್ ಮೂವರು ಬೈಕಿನಲ್ಲಿ ತ್ರಿಬಲ್ ರೈಡಿಂಗ್ ಮಾಡಿಕೊಂಡು ವಾಪಸ್ ಊರಿಗೆ ಬರುತ್ತಿದ್ದಾಗ, ನಾವದಗಿ ಬಳಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿದ್ದಾರೆ. 

ಘಟನೆ ಕುರಿತಂತೆ ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT