ರಾಜ್ಯ

ಎಂಬಿಬಿಎಸ್ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸುವ ಯಾವುದೇ ಚಿಂತನೆಗಳಿಲ್ಲ: ರಾಜ್ಯ ಸರ್ಕಾರ

Manjula VN

ಬೆಂಗಳೂರು: ಎಂಬಿಬಿಎಸ್ ಪುಸ್ತಕಗಳನ್ನು ಕನ್ನಡ ಭಾಷೆಗೆ ಅನುವಾದಿಸುವ ಯಾವುದೇ ಚಿಂತನೆಗಳಿಲ್ಲ ಎಂದು ರಾಜ್ಯ ಸರ್ಕಾರ ಶನಿವಾರ ಹೇಳಿದೆ.

ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕಿ ಡಾ.ಬಿ.ಎಲ್.ಸುಜಾತಾ ರಾಥೋಡ್ ಮಾತನಾಡಿ, ಈ ನಿಟ್ಟಿನಲ್ಲಿ ಇಲಾಖೆಯು ಉನ್ನತ ಶಿಕ್ಷಣ ಇಲಾಖೆಯಿಂದ ಯಾವುದೇ ನಿರ್ದೇಶನ ಅಥವಾ ಸಲಹೆಗಳು ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಎಂಬಿಬಿಎಸ್ ಪುಸ್ತಕಗಳನ್ನು ಮಧ್ಯಪ್ರದೇಶ ಸರ್ಕಾರ ಹಿಂದಿಗೆ ಭಾಷೆಗೆ ಅನುವಾದಿಸಿದ್ದು, ಇದರ ಬೆನ್ನಲ್ಲೇ ಕನ್ನಡದಲ್ಲೂ ಪುಸ್ತಕಗಳ ಅನುವಾದಿಸುವ ಕುರಿತು ಮಾತುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರ ಸ್ಪಷ್ಟನೆ ನೀಡಿದೆ.

ಪ್ರಸ್ತುತ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿರುವ ಕೆಲ ವೈದ್ಯರು, ಸರ್ಕಾರವು ಇಂತಹ ಪ್ರಸ್ತಾವನೆಯನ್ನು ಪರಿಗಣಿಸಿದ್ದೇ ಆದರೆ, ವೈದ್ಯರು ತಮ್ಮ ಪ್ರದೇಶಗಳಿಗೆ ಸೀಮಿತರಾಗುವುದರಿಂದ ಮಹತ್ವಾಕಾಂಕ್ಷೆಗಳನ್ನು ಹೊಂದಿರುವ ವೈದ್ಯರಿಗೆ ಅವಕಾಶಗಳನ್ನು ಕಡಿಮೆ ಮಾಡಿದಂತಾಗುತ್ತದೆ ಎಂದು ಹೇಳಿದ್ದಾರೆ.

ಕೆಸಿ ಜನರಲ್ ಆಸ್ಪತ್ರೆಯ ಡಾ.ಸಂಜೀವ್ ಕುಮಾರ್ ಮಾತನಾಡಿ, ವಿದ್ಯಾರ್ಥಿಯು ವೈದ್ಯಕೀಯ ಕಲಿಯುವಾಗ ಅನೇಕ ಅಂಶಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಪ್ರತಿ ತಾಂತ್ರಿಕ ವಿವರಗಳನ್ನು ಭಾಷಾಂತರಿಸುವಾಗ ನಿಖರತೆ ಮಾಡುವುದು ಕಷ್ಟಕರವಾಗಿರುತ್ತದೆ ಎಂದಿದ್ದಾರೆ.

ಫೆಡರೇಶನ್ ಆಫ್ ಆಲ್ ಇಂಡಿಯಾ ಮೆಡಿಕಲ್ ಅಸೋಸಿಯೇಷನ್ ​​ಮಾತನಾಡಿ, ವೈದ್ಯಕೀಯ ಪಠ್ಯಕ್ರಮವು ವಿಶಾಲವಾಗಿದ್ದು, ಇದು ಕಾಲ ಕ್ರಮೇಣ ವಿಶ್ವಾದ್ಯಂತ ಬದಲಾಗುತ್ತಿರುತ್ತದೆ. ಆದ್ದರಿಂದ ಸಾರ್ವತ್ರಿಕವಾಗಿ ಮಾತನಾಡುವ ಮತ್ತು ಅರ್ಥಮಾಡಿಕೊಳ್ಳುವ ಭಾಷೆಯಲ್ಲಿ ಕೋರ್ಸ್ ಅನ್ನು ಅಧ್ಯಯನ ಮಾಡುವುದು ಉತ್ತಮ ಎಂದು ಹೇಳಿದೆ.

ಪ್ರಸ್ತುತ ಹಿಂದಿ ಭಾಷಾಂತರಗಳು ಸಮಸ್ಯೆಗಳನ್ನು ಹೊಂದಿದ್ದು, ವೈದ್ಯಕೀಯ ಪದಗಳ ಪ್ರಮಾಣೀಕರಣವು ಅವರ ಪ್ರಾಥಮಿಕ ಕಾಳಜಿಯಾಗಿದೆ ಎಂದು ತಿಳಿಸಿದೆ.

SCROLL FOR NEXT