ರಾಜ್ಯ

ಬೆಂಗಳೂರು: ಹೆಂಡತಿ ಚಿನ್ನಾಭರಣ ಕದ್ದಿದ್ದಾಳೆ, ದೂರು ದಾಖಲಿಸಿದ 70 ವರ್ಷದ ಪತಿ!

Shilpa D

ಬೆಂಗಳೂರು: 70ರ ಹರೆಯದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಆಭರಣಗಳನ್ನು ಕದ್ದಿದ್ದಾಳೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾನೆ.  ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನಿರ್ದೇಶನದ ಮೇರೆಗೆ ವಿವಿ ಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯನಗರ 2ನೇ ಹಂತದ ನಿವಾಸಿ ಎಂ.ರಘು ಕಾರ್ಯಪ್ಪ ಅವರ ಪತ್ನಿ ಜಾಸ್ಮಿನ್ ಆರ್.ಕಾರ್ಯಪ್ಪ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಐದು ವರ್ಷಗಳಿಂದ  ಪತ್ನಿ ತಮಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದು ಕರಿಯಪ್ಪ ದೂರಿನಲ್ಲಿ ತಿಳಿಸಿದ್ದಾರೆ. ಏಪ್ರಿಲ್ 15, 2022 ರಂದು, ತಮ್ಮ ಗೋಕುಲಂ 3 ನೇ ಹಂತದ ನಿವಾಸಕ್ಕೆ ಸ್ನಾನ ಮಾಡಲು ಹೋದಾಗ, ಅವರ ಪತ್ನಿ ಅಲ್ಮೇರಾದಲ್ಲಿ ಇರಿಸಲಾಗಿದ್ದ ಅವರ ಚಿನ್ನದ ಉಂಗುರ, ಚಿನ್ನದ ಬಳೆ, ನಾಲ್ಕು ಚಿನ್ನದ ಉಂಗುರಗಳು, ಎರಡು ಚಿನ್ನದ ನಾಣ್ಯಗಳು ಮತ್ತು ಸರವನ್ನು ಕದ್ದಿದ್ದಾರೆ. ಕಾಣೆಯಾದ ಚಿನ್ನದ ವಸ್ತುಗಳ ಬಗ್ಗೆ ಪ್ರಶ್ನಿಸಿದಾಗ ಆಕೆ ಆತನಿಗೆ ಬೆದರಿಕೆ ಹಾಕಿದ್ದಾಳೆ.

ಏಪ್ರಿಲ್ 16ರಂದು ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಜೂನ್ 16 ರಂದು ಅವರ ಪತ್ನಿಗೆ ನೋಟಿಸ್ ನೀಡಲಾಗಿತ್ತು. ಚಿನ್ನಾಭರಣ ವಾಪಸ್ ನೀಡುವುದಾಗಿ ಜೂ.22ರಂದು ಉತ್ತರಿಸಿದ್ದಳು. ಆದರೆ ಕರಿಯಪ್ಪ ಆಕೆ ನೀಡಿದ್ದ  ಭರವಸೆಯ ಪ್ರಕಾರ ತಮ್ಮ ಚಿನ್ನಾಭರಣಗಳನ್ನು ಹಿಂದಿರುಗಿಸಲಿಲ್ಲ. ಹೀಗಾಗಿ  ವಿವಿ ಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

SCROLL FOR NEXT