ರಾಜ್ಯ

ಬೆಂಗಳೂರು: ಸೋದರ ಸಂಬಂಧಿ ಸಾವಿನಿಂದ ಮನನೊಂದು ಮಹಿಳೆ ಆತ್ಮಹತ್ಯೆ

Shilpa D

ಬೆಂಗಳೂರು: ಸೋದರ ಸಂಬಂಧಿ ಆತ್ಮಹತ್ಯೆಯಿಂದ ಮನನೊಂದಿದ್ದ ಮಹಿಳೆಯೊಬ್ಬರು ತಾವು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಾಗಡಿ ಮುಖ್ಯರಸ್ತೆಯ ರಾಜೀವ್ ಗಾಂಧಿ ನಗರದಲ್ಲಿ ನಡೆದಿದೆ.

ಮೃತರನ್ನು ಏಳುಮಲೈ ಅಜಿತ್ (23) ಮತ್ತು ಆತನ ಸೋದರತ್ತೆ ವನಿತಾ (32) ಎಂದು ಗುರುತಿಸಲಾಗಿದೆ. ಅಜಿತ್  ಪೋಷಕರು ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ನೆಲೆಸಿದ್ದಾರೆ.

ಅಜಿತ್ ಬಾಲ್ಯದಿಂದಲೂ ವನಿತಾ ಅವರ ಮನೆಯಲ್ಲಿಯೇ ಇದ್ದನು. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಆತ ಭಾನುವಾರ ಮಧ್ಯಾಹ್ನ ನೇಣು ಹಾಕಿಕೊಂಡು ಸಾವನ್ನಪ್ಪಿದ್ದ. ಮರುದಿನ ಬೆಳಗ್ಗೆ ಅಜಿತ್‌ನ ಸಾವಿನಿಂದ ಮನನೊಂದಿದ್ದ ಆಕೆ, ಮನೆಯಲ್ಲಿ ಅಂತ್ಯ ಸಂಸ್ಕಾರದ ವಿಧಿವಿಧಾನಗಳು ನಡೆಯುತ್ತಿದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ವ್ಯಾಪ್ತಿಯ ಪೊಲೀಸರು ಅಸಹಜ ಸಾವಿನ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

SCROLL FOR NEXT