ಬೆಂಗಳೂರು: ಬಾಗ್ಮನೆ ಡೆವಲಪ್ಮೆಂಟ್ಸ್ ಪ್ರೈವೇಟ್ ಲಿಮಿಟೆಡ್ನ ಟೆಕ್ ಪಾರ್ಕ್ನ ಕಾಂಪೌಂಡ್ ಗೋಡೆಯನ್ನು ಕೆಡವುವ ಕುರಿತು ಬಲವಂತದ ಕ್ರಮ ಕೈಗೊಳ್ಳದಂತೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ನಿರ್ದೇಶನ ನೀಡಿದೆ.
ಮೊದಲಿಗೆ ಸರ್ವೆ ನಡೆಸಿ, ಸಮೀಕ್ಷೆಯ ವರದಿಯ ಪ್ರತಿಯನ್ನು ನೀಡಿ ಮತ್ತು ಅರ್ಜಿದಾರರಾದ ಬಾಗ್ಮನೆ ಡೆವಲಪ್ಮೆಂಟ್ಸ್ ಪ್ರೈವೇಟ್ ಲಿಮಿಟೆಡ್ನ ವಿಚಾರಣೆಯನ್ನು ಆಲಿಸಿ ನಂತರ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯವು ಬಿಬಿಎಂಪಿಗೆ ಸೂಚಿಸಿದೆ.
ಇದನ್ನೂ ಓದಿ: 23 ಕೆರೆಗಳನ್ನು ನುಂಗಿ ನೀರು ಕುಡಿದ ಬಿಡಿಎ: ಕೆರೆ ಮುಚ್ಚಿದ ಜಾಗದಲ್ಲಿ 3,530 ನಿವೇಶನ, ಇಲ್ಲಿದೆ ಸಂಪೂರ್ಣ ಮಾಹಿತಿ!
ಬಿಬಿಎಂಪಿ ಸೆಪ್ಟೆಂಬರ್ 10ರಂದು ನೀಡಿದ್ದ ಮೌಖಿಕ ಸಂದೇಶವನ್ನು ಪ್ರಶ್ನಿಸಿ ಬಿಲ್ಡರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಈ ಆದೇಶ ನೀಡಿದ್ದಾರೆ.