ರಾಜ್ಯ

ಪ್ರತ್ಯೇಕ ಅವಘಡ: ಕಣ್ವ ನದಿಗೆ ಬಿದ್ದು ದಂಪತಿ ದುರ್ಮರಣ; ನೀರಿನಲ್ಲಿ ಮುಳುಗಿ ಯುವಕ ಸಾವು!

Vishwanath S

ರಾಮನಗರ/ಕಾರವಾರ: ಹಸುವನ್ನು ಹಿಡಿಯಲು ಹೋಗಿ ಆಕಸ್ಮಿಕವಾಗಿ ಕಣ್ವ ನದಿಗೆ ಬಿದ್ದು ದಂಪತಿ ಸಾವನ್ನಪ್ಪಿದ ಘಟನೆ ಚನ್ನಪಟ್ಟಣ ತಾಲೂಕಿನ ಕೂಡ್ಲೂರು ಗ್ರಾಮದಲ್ಲಿ ನಡೆದಿದೆ. 

ಮೃತರನ್ನು 55 ವರ್ಷದ ವೆಂಕಟೇಶ್‌, 50 ಕಾಳಮ್ಮ ಎಂದು ಗುರುತಿಸಲಾಗಿದೆ. ಹಸುವಿನ ಹಗ್ಗ ಹಿಡಿಯಲು ಹೋಗಿ ಕಾಳಮ್ಮ ನದಿಗೆ ಬಿದ್ದಿದ್ದಾರೆ. ಈ ವೇಳೆ ಪತ್ನಿಯನ್ನು ರಕ್ಷಿಸಲು ಹೋಗಿ ಪತಿ ವೆಂಕಟೇಶ್ ಕೂಡ ನೀರುಪಾಲಾಗಿದ್ದಾರೆ. ಚನ್ನಪಟ್ಟಣ ಗ್ರಾಮಾಂತರ ‌ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಸಂತೆಗುಳಿ ಗ್ರಾಮದಲ್ಲಿ ಸ್ನಾನ ಮಾಡಲು ಹಳ್ಳಕ್ಕೆ ಇಳಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಮೃತನನ್ನು 19 ವರ್ಷದ ಶಾಬಾಜ್ ಮೊಹಮ್ಮದ್ ಹನೀಷ್ ತೋಟಗೇರ್ ಎಂದು ಗುರುತಿಸಲಾಗಿದೆ. ಹುಬ್ಬಳ್ಳಿ ಮೂಲದ ಹನೀಫ್ ತಂದೆ ಜೊತೆ ಪೇಂಟಿಂಗ್ ಕೆಲಸಕ್ಕೆಂದು ಕಾರವಾರಕ್ಕೆ ಬಂದಿದ್ದರು.

SCROLL FOR NEXT