ರಾಜ್ಯ

ಸಿಮೆಂಟ್ ಸಂಸ್ಥೆಯಿಂದ ಡೀಲರ್ಸ್ ಗೆ ಪ್ರವಾಸ: ಚಿನ್ನ ಕಳ್ಳ ಸಾಗಣೆ ಮಾಡುತ್ತಿದ್ದವನ ಬಂಧನ!

Nagaraja AB

ಬೆಂಗಳೂರು: ಸಿಮೆಂಟ್ ಕಂಪನಿಯೊಂದು ತನ್ನ ಪ್ರಮುಖ ಡೀಲರ್‌ಗಳಿಗಾಗಿ ಬೆಂಗಳೂರಿನಿಂದ ಬ್ಯಾಂಕಾಕ್‌ಗೆ ಆಯೋಜಿಸಿದ್ದ ವಾರದ ಪ್ರವಾಸದ ಸಂದರ್ಭದಲ್ಲಿ ಒಬ್ಬರು ಚಿನ್ನವನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸಿ ಸಿಕ್ಕಿ ಬಿದ್ದಿದ್ದಾರೆ.

ರಾಯಚೂರು ಮೂಲದ ವ್ಯಕ್ತಿ 619 ಗ್ರಾಂ ತೂಕದ ಚಿನ್ನವನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ್ದಾರೆ. ಇವರಲ್ಲದೇ ಸುಮಾರು 2 ಕೆಜಿ ತೂಕದ ಚಿನ್ನದ ಸರಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರು ಮಲೇಷ್ಯಾ ಪ್ರಜೆಗಳೂ ಶುಕ್ರವಾರ ಮುಂಜಾನೆ ಸಿಕ್ಕಿಬಿದ್ದಿದ್ದಾರೆ. ವಶಕ್ಕೆ ಪಡೆಯಲಾದ ಒಟ್ಟು ಚಿನ್ನದ ಮೌಲ್ಯ  ಸುಮಾರು 1.57 ಕೋಟಿ ರೂಪಾಯಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂವರ ವಿರುದ್ಧ ಕಸ್ಟಮ್ಸ್ ಕಾಯ್ದೆ ಸೆಕ್ಷನ್ 110 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಥಾಯ್ ಏರ್‌ವೇಸ್ ಇಂಟರ್‌ನ್ಯಾಶನಲ್ (TG 235) ರಾತ್ರಿ 11.35 ಕ್ಕೆ ಟರ್ಮಿನಲ್ 1 ಗೆ ಬಂದಾಗ ಮಹಾರಾಷ್ಟ್ರ ಮೂಲದವರು ಬ್ಯಾಂಕಾಕ್‌ಗೆ ಕಳುಹಿಸಲಾದ 60 ಜನರ ಗುಂಪಿನಿಂದ ಮೊದಲ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಯಿತು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ಜನರನ್ನು ವಿಚಾರಿಸಿದಾಗ, ತಮ್ಮ ಗುರಿ ಸಾಧಿಸಿದ್ದಕ್ಕಾಗಿ ಬಹುಮಾನ ಪಡೆದ ವಿತರಕರು ಎಂದು ತಿಳಿದುಬಂದಿದೆ. ಸರಾಸರಿಗಿಂತ ಮೇಲ್ಪಟ್ಟ ಪ್ರದರ್ಶಕರಿಗೆ ಕುಟುಂಬದ ಸದಸ್ಯರನ್ನು ಕರೆತರಲು ಅವಕಾಶ ನೀಡಲಾಗುತ್ತದೆ.

ಮಧ್ಯರಾತ್ರಿಯ ನಂತರ ದೈಹಿಕ ತಪಾಸಣೆ ನಡೆಸಿದಾಗ ಒಬ್ಬ ಪ್ರಯಾಣಿಕನು ತನ್ನ ತೋಳಿನ ಮೇಲೆ 419 ಗ್ರಾಂ ತೂಕದ ದಪ್ಪವಾದ, ಬೆಳ್ಳಿಯ ಬಣ್ಣದ ಕಡಗ ಧರಿಸಿರುವುದು ಕಂಡುಬಂದಿತ್ತು. ನಾವು ಅದರ ಮೇಲೆ ಗಟ್ಟಿಯಾದ ಕಲ್ಲನ್ನು ಬಳಸಿದಾಗ, ಚಿನ್ನದ ಬಣ್ಣಕ್ಕೆ ತಿರುಗಿತು. ಇದು 24-ಕ್ಯಾರೆಟ್ ಚಿನ್ನವಾಗಿದ್ದು, ಭಾರತದಲ್ಲಿ ನಿಷೇಧಿಸಲಾಗಿದೆ. ಅವರ ಕೈಯಲ್ಲಿದ್ದ ಸಾಮಾನು ಸರಂಜಾಮುಗಳಲ್ಲಿ 170 ಗ್ರಾಂ ತೂಕದ  ಚಿನ್ನದ ಸರವೂ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವಸ್ತುಗಳ ಒಟ್ಟು ಮೌಲ್ಯ 37 ಲಕ್ಷ ರೂಪಾಯಿ ಆಗಿದೆ. 

ಮಲೇಷ್ಯಾದ ಕೌಲಾಲಂಪುರದಿಂದ ರಾತ್ರಿ 11.50ಕ್ಕೆ ಆಗಮಿಸಿದ ವಿಮಾನದಲ್ಲಿ ಮಲೇಷ್ಯಾ ಪ್ರಜೆಗಳ ಕುತ್ತಿಗೆಯಲ್ಲಿ ನಾಯಿ ಬೆಲ್ಟ್ ನಂತೆಯೇ ಧರಿಸಲಾಗಿದ್ದ 1.3 ಕೆಜಿ ತೂಕದ ಚಿನ್ನದ ಸರ ಧರಿಸಿರುವುದು ಪತ್ತೆಯಾಗಿದೆ. ಅವರ ಕೈಚೀಲದಲ್ಲಿಯೂ ಎರಡು  ಚಿನ್ನದ ಸರಗಳೂ ಇದ್ದವು. ಇಬ್ಬರಿಂದ ವಶಪಡಿಸಿಕೊಂಡ ಒಟ್ಟು ಚಿನ್ನ 1.99 ಕೆಜಿ ತೂಕವಿದ್ದು, 1.19 ಕೋಟಿ ರೂ. ಮೌಲ್ಯ ಎಂದು ಅಂದಾಜಿಸಲಾಗಿದೆ.

SCROLL FOR NEXT