ಸಾಂದರ್ಭಿಕ ಚಿತ್ರ 
ರಾಜ್ಯ

ಮಾನವ-ಪ್ರಾಣಿ ಸಂಘರ್ಷ ಎದುರಿಸಲು ಬಹು ಪರಿಹಾರ ಕಂಡುಕೊಳ್ಳಲು ಅರಣ್ಯ ಇಲಾಖೆ ಮುಂದು!

ಈ ನವೆಂಬರ್ ತಿಂಗಳೊಂದರಲ್ಲೇ ವನ್ಯಜೀವಿಗಳೊಂದಿಗಿನ ಸಂಘರ್ಷಕ್ಕೆ ಸಿಲುಕಿ ನಾಲ್ವರು ಸಾವನ್ನಪ್ಪಿದ್ದಾರೆ. ಏಪ್ರಿಲ್‌ನಿಂದ ನವೆಂಬರ್ 24 ರವರೆಗೆ, ರಾಜ್ಯದಲ್ಲಿ 42 ಪ್ರಾಣಿಗಳು ಸಾವನ್ನಪ್ಪಿವೆ. 

ಬೆಂಗಳೂರು: ಈ ನವೆಂಬರ್ ತಿಂಗಳೊಂದರಲ್ಲೇ ವನ್ಯಜೀವಿಗಳೊಂದಿಗಿನ ಸಂಘರ್ಷಕ್ಕೆ ಸಿಲುಕಿ ನಾಲ್ವರು ಸಾವನ್ನಪ್ಪಿದ್ದಾರೆ. ಏಪ್ರಿಲ್‌ನಿಂದ ನವೆಂಬರ್ 24 ರವರೆಗೆ, ರಾಜ್ಯದಲ್ಲಿ 42 ಪ್ರಾಣಿಗಳು ಸಾವನ್ನಪ್ಪಿವೆ. 

ಹೆಚ್ಚುತ್ತಿರುವ ಮಾನವ-ಪ್ರಾಣಿ ಸಂಘರ್ಷ ಪ್ರಕರಣಗಳನ್ನು ತಗ್ಗಿಸಲು, ಕರ್ನಾಟಕ ಅರಣ್ಯ ಇಲಾಖೆ ಈಗ ಆಯಾಮಗಳನ್ನು ಅನ್ವೇಷಿಸುತ್ತಿದೆ ಮತ್ತು ಪರಿಹಾರಗಳನ್ನು ಹುಡುಕುತ್ತಿದೆ. ಇದರಲ್ಲಿ ಬಯಲು ಮಲ ವಿಸರ್ಜನೆ ಕಡಿಮೆ ಮಾಡುವುದು, ರೇಡಿಯೋ ಕಾಲರಿಂಗ್ ಹುಲಿಗಳು, ಕಾಡು ಬೆಕ್ಕುಗಳನ್ನು ಸ್ಥಳಾಂತರ ಮತ್ತಿತರ ಕ್ರಮಗಳು ಸೇರಿವೆ. ಅರಣ್ಯಗಳ ಬಗ್ಗೆ ವಿವರವಾದ ವೈಜ್ಞಾನಿಕ ಅಧ್ಯಯನವನ್ನು ಕೈಗೊಳ್ಳಲು ಮತ್ತು ಪ್ರಾಯೋಗಿಕ ಪರಿಹಾರಗಳನ್ನು ನೀಡಲು ತಜ್ಞರು, ವಿಜ್ಞಾನಿಗಳು ಮತ್ತು ನಿವೃತ್ತ ಅರಣ್ಯ ಅಧಿಕಾರಿಗಳ ವಿಶೇಷ ತಂಡವನ್ನು ರಚಿಸಲು ಇಲಾಖೆ ಪರಿಶೀಲಿಸುತ್ತಿದೆ.

ಹುಲಿ, ಆನೆ ಮತ್ತು ಚಿರತೆಗಳ ಸಂಖ್ಯೆ ಹೆಚ್ಚಳದಿಂದ ರಾಜ್ಯ ಹೆಮ್ಮೆಪಡುತ್ತಿದ್ದರೆ, ಈಗ ಸಂಘರ್ಷ ಪ್ರಕರಣಗಳು ಹೆಚ್ಚಾಗುತ್ತಿವೆ. ಸುಮಾರು 200 ಆನೆಗಳು ಕಾಫಿ ಎಸ್ಟೇಟ್‌ಗಳಲ್ಲಿ ಶಾಶ್ವತವಾಗಿ ನೆಲೆಸಿವೆ. ಇಲ್ಲಿ ಕರುಗಳು ಹುಟ್ಟಿವೆ,  ಇವು ಎಂದಿಗೂ ಕಾಡುಗಳನ್ನು ನೋಡಿಲ್ಲ.ಅವುಗಳ ಸಂಖ್ಯೆ ಹೆಚ್ಚಾಗದಂತೆ ಖಚಿತಪಡಿಸಿಕೊಳ್ಳಲು, ಹೆಣ್ಣು ಆನೆಗಳ ತಾತ್ಕಾಲಿಕ ರೋಗನಿರೋಧಕವನ್ನು ಅನ್ವೇಷಿಸುತ್ತಿದ್ದೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. 

ಮುಂಜಾನೆ ಮತ್ತು ಮುಸ್ಸಂಜೆಯ ಸಮಯದಲ್ಲಿ ಬೆಳಿಗ್ಗೆ 5-7.30 ಮತ್ತು 5- 7ರವರೆಗೆ ಮನೆಗಳಿಂದ ಹೊರಗೆ ಜನರು ಅಲೆದಾಡಂತೆ ಮನವಿ ಮಾಡಿದ್ದೇವೆ. ಆ ಸಮಯದಲ್ಲಿ ಪ್ರಾಣಿಗಳು ಅರಣ್ಯಕ್ಕೆ ಓಡುತ್ತವೆ ಮತ್ತು ಪ್ರಾಣಿಗಳೊಂದಿಗೆ ಸಂಪರ್ಕಕ್ಕೆ ಬರುತ್ತವೆ, ಇದು ಸಂಘರ್ಷಕ್ಕೆ ಕಾರಣವಾಗುತ್ತದೆ ಎಂದು ಅವರು ಮಾಹಿತಿ ನೀಡಿದರು. 

ಶೌಚಾಲಯಗಳನ್ನು ನಿರ್ಮಿಸಿದರೂ, ಜನರು ಇನ್ನೂ ಬಯಲು ಶೌಚಕ್ಕೆ ಹೋಗುತ್ತಾರೆ ಮತ್ತು ವಿಶೇಷವಾಗಿ ಅರಣ್ಯದಂಚಿನ ಹೊಲಗಳು ಮತ್ತು ಪೊದೆಗಳಲ್ಲಿ ದಾಳಿ ಮಾಡುತ್ತವೆ ಎಂದು ಆರ್‌ಡಿಪಿಆರ್ ಅಧಿಕಾರಿ ಹೇಳಿದರು.

ಖ್ಯಾತ ಹುಲಿ ತಜ್ಞ ಕೆ ಉಲ್ಲಾಸ್ ಕಾರಂತ್ ಮಾತನಾಡಿ, ಈ ಹಿಂದೆಯೂ ಪ್ರತಿಕೂಲ ಪ್ರಕರಣಗಳು ಇದ್ದ ಕಾರಣ ಹುಲಿಗಳ ಸ್ಥಳಾಂತರ ಸೂಕ್ತವಲ್ಲ. ಜಾನುವಾರುಗಳನ್ನು ಕೊಂದಾಗ ಇಲಾಖೆ ರೈತರಿಗೆ ತಕ್ಷಣ ಪರಿಹಾರ ನೀಡಬೇಕು ಮತ್ತು ಆದರೆ ಅದು ಮನುಷ್ಯನನ್ನು ಕೊಂದರೆ, ಅದನ್ನು ತಕ್ಷಣವೇ ಕೊಲ್ಲಬೇಕು. ಹುಲಿ ಮತ್ತು ಚಿರತೆಗಳನ್ನು ಮನುಷ್ಯರು ಮೂಲೆಗುಂಪು ಮಾಡಿದಾಗ ಅವರೊಂದಿಗೆ ಸಂಘರ್ಷ ಉಂಟಾಗುತ್ತದೆ. ಅವರನ್ನು ಒಂಟಿಯಾಗಿ ಬಿಟ್ಟರೆ, ಅವು ಮತ್ತೆ ಕಾಡಿಗೆ ಹೋಗುತ್ತವೆ ಎಂದರು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಲಬುರಗಿ: ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

Punishment: 5 ವರ್ಷದ ಬಾಲಕನನ್ನು ಮರಕ್ಕೆ ನೇತು ಹಾಕಿದ ಶಿಕ್ಷಕಿ!

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

SCROLL FOR NEXT