ರಾಜ್ಯ

ದುಬೈಗೆ ಪರಾರಿಯಾಗಿದ್ದ ಅತ್ಯಾಚಾರ ಆರೋಪಿ ಕೊನೆಗೂ ಬಂಧನ

Manjula VN

ಬೆಂಗಳೂರು: ಮೂರು ವರ್ಷಗಳಿಂದ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ದುಬೈನಲ್ಲಿ ತಲೆಮರೆಸಿಕೊಂಡಿದ್ದ ಸಾಫ್ಟ್ ವೇರ್ ಉದ್ಯೋಗಿಯೊಬ್ಬನನ್ನು ಇಂಟರ್‌ಪೋಲ್ ನೆರವು ಪಡೆದು ಮಹದೇವಪುರ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಕೇರಳ ಮೂಲದ ಮಿಧುನ್ ಚಂದ್ರ ಬಂಧಿತ ಆರೋಪಿ. ಆರೋಪಿಯನ್ನು ಬಂಧಿಸಲು ಇಂಟರ್‌ಪೋಲ್ ನೆರವು ಕೋರಿ ಕರ್ನಾಟಕ ಪೊಲೀಸರು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಪತ್ರ ಬರೆದಿದ್ದರು. ಇದರಂತೆ ಮಿಧುನ್ ವಿರುದ್ಧ ಜನವರಿಯಲ್ಲಿ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿತ್ತು.

ಆರೋಪಿ ತನ್ನ ಗೆಳತಿಯನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು ಆಕೆಗೆ ವಂಚಿಸಿದ್ದ. ಈ ಸಂಬಂಧ 2020ರಲ್ಲಿ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಅತ್ಯಾಚಾರ ಪ್ರಕರಣದಡಿ ಆತನನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದರು. ಆದರೆ, ಜಾಮೀನು ಪಡೆದು ಜೈಲಿನಿಂದ ಹೊರಬಂದ ಆರೋಪಿ, ನಂತರ ನಗರ ತೊರೆದು ದುಬೈಗೆ ಪರಾರಿಯಾಗಿದ್ದ,

SCROLL FOR NEXT