ವೆರುಷ್ಕಾ ಪಾಂಡೆ, ಬೆಂಗಳೂರಿನ ದಿ ಇಂಟರ್‌ನ್ಯಾಶನಲ್ ಸ್ಕೂಲ್‌ ನ ಬಾಲಕಿ 
ರಾಜ್ಯ

ವಿಶ್ವಸಂಸ್ಥೆಯ ಶೃಂಗಸಭೆಯಲ್ಲಿ ಕೌಶಲ್ಯ ಪ್ರದರ್ಶಿಸಿ ಗಮನ ಸೆಳೆದ ಬೆಂಗಳೂರು ಬಾಲಕಿ ವೆರುಷ್ಕಾ ಪಾಂಡೆ

ಇತ್ತೀಚೆಗೆ ವಿಶ್ವಸಂಸ್ಥೆಯಲ್ಲಿ ನಡೆದ 1-ಮಿಲಿಯನ್ 1-ಬಿಲಿಯನ್ (1M1B) ಶೃಂಗಸಭೆಯಲ್ಲಿ ಬೆಂಗಳೂರಿನ ಹತ್ತನೇ ತರಗತಿ ವಿದ್ಯಾರ್ಥಿನಿ ವೆರುಷ್ಕಾ ಪಾಂಡೆ ಭಾಗವಹಿಸಿ ತನ್ನ ಕೌಶಲ್ಯವನ್ನು ಪ್ರದರ್ಶಿಸಿದ್ದಾಳೆ. 

ಬೆಂಗಳೂರು: ಇತ್ತೀಚೆಗೆ ವಿಶ್ವಸಂಸ್ಥೆಯಲ್ಲಿ ನಡೆದ 1-ಮಿಲಿಯನ್ 1-ಬಿಲಿಯನ್ (1M1B) ಶೃಂಗಸಭೆಯಲ್ಲಿ ಬೆಂಗಳೂರಿನ ಹತ್ತನೇ ತರಗತಿ ವಿದ್ಯಾರ್ಥಿನಿ ವೆರುಷ್ಕಾ ಪಾಂಡೆ ಭಾಗವಹಿಸಿ ತನ್ನ ಕೌಶಲ್ಯವನ್ನು ಪ್ರದರ್ಶಿಸಿದ್ದಾಳೆ. 

ವಿಶ್ವಸಂಸ್ಥೆಯಲ್ಲಿ ನಡೆದ 1M1B ಆಕ್ಟಿವೇಟ್ ಇಂಪ್ಯಾಕ್ಟ್ ಯೂತ್ ಶೃಂಗಸಭೆಯಲ್ಲಿ ಬೆಂಗಳೂರಿನ ದಿ ಇಂಟರ್‌ನ್ಯಾಶನಲ್ ಸ್ಕೂಲ್‌ನ ಯುವ ಚೇಂಜ್‌ಮೇಕರ್ ವೆರುಷ್ಕಾ ಪಾಂಡೆ ಭಾಗವಹಿಸಿದ್ದರು. ಇದನ್ನು 1M1B ಫೌಂಡೇಶನ್ ನವೆಂಬರ್ 30 ರಂದು ನ್ಯೂಯಾರ್ಕ್‌ನಲ್ಲಿ ಆಯೋಜಿಸಿತ್ತು. ಈಕೆ ತಮ್ಮ ಪ್ರಾಜೆಕ್ಟ್ ಸೂರ್ಯ ನಾಯಕ್ ನ್ನು ಪ್ರಸ್ತುತಪಡಿಸಿದ್ದಳು. ಇದು ಭಾರತದಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳ (SDGs) ಅನುಷ್ಠಾನಕ್ಕೆ ತನ್ನ ಕೊಡುಗೆಯನ್ನು ನೀಡಿದೆ. 

ವೆರುಷ್ಕಾ ಬೆಂಗಳೂರು ಮತ್ತು ಕರ್ನಾಟಕದ ಇತರ ಭಾಗಗಳಲ್ಲಿ ಆಶಾ ಕಾರ್ಯಕರ್ತರು, ಬಸ್ ಚಾಲಕರು, ಕಾರ್ಖಾನೆಯ ಕೆಲಸಗಾರರು ಮತ್ತು ಭದ್ರತಾ ಸಿಬ್ಬಂದಿಗೆ ಸಿಪಿಆರ್ ತರಬೇತಿಯನ್ನು ನೀಡುವಲ್ಲಿ ಕೆಲಸ ಮಾಡುತ್ತಿದ್ದಾರೆ. ಜನತೆಗೆ ಜಾಗೃತಿ ಮೂಡಿಸುತ್ತಿದ್ದಾರೆ, ಮಾಹಿತಿ ಹರಡುತ್ತಾರೆ. 

"2030 ರ ವೇಳೆಗೆ ಎಸ್‌ಡಿಜಿಗಳನ್ನು ಸಾಧಿಸಲು ಆರೋಗ್ಯ ಕಾರ್ಯಕರ್ತರು ಮತ್ತು ಭಾರತೀಯ ಯುವಕರಲ್ಲಿ ಜಾಗೃತಿ ಮೂಡಿಸಲು ಮಾತ್ರವಲ್ಲದೆ ಸಾಮೂಹಿಕ ಆಂದೋಲನವನ್ನು ಮಾಡಲು ನಾನು ಬಯಸುತ್ತೇನೆ" ಎಂದು ಶೃಂಗಸಭೆಯಲ್ಲಿ ವಿದ್ಯಾರ್ಥಿನಿ ವೆರುಷ್ಕಾ ಹೇಳಿದರು. ನಮ್ಮ ಹೃದಯಗಳು ಸಹಾನುಭೂತಿ, ಪ್ರೀತಿ ಮತ್ತು ಜೀವನಕ್ಕೆ ಸ್ಥಳಾವಕಾಶವನ್ನು ಹೊಂದಿರುವ ಪಾತ್ರೆಗಳಂತೆ. ಇದಲ್ಲದೆ, ಸಿಪಿಆರ್ ಬಗ್ಗೆ ಜನರಿಗೆ ಶಿಕ್ಷಣ ನೀಡುವ ಮೂಲಕ ಅಕಾಲಿಕ ಮರಣದಿಂದ ಜನರನ್ನು ರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

ವಿಶ್ವಸಂಸ್ಥೆಯಲ್ಲಿ ಇವರ ಮಾತುಗಳನ್ನು 'ಹಾರ್ಟ್ ಈಸ್ ಎ ವೆಸೆಲ್' ಎಂಬ ಸಾಕ್ಷ್ಯಚಿತ್ರದ ಮೂಲಕ ಪ್ರದರ್ಶಿಸಲಾಯಿತು, ನಂತರ ಅವರ ಮಾರ್ಗದರ್ಶಕ ಮಾನವ್ ಸುಬೋಧ್ ಮತ್ತು ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರಶಸ್ತಿ ವಿಜೇತ ಚಲನಚಿತ್ರ ತಯಾರಕ ಅಮಿತ್ ಮಾದೇಶಿಯಾ ಅವರನ್ನು ಒಳಗೊಂಡ ಪ್ಯಾನೆಲ್ ಡಿಸ್ಕಶನ್ ನ್ನು ಸಹ ಪ್ರದರ್ಶಿಸಲಾಯಿತು. ಸಮಾರಂಭದಲ್ಲಿ ಮಾದೇಶಿವ ಅವರ ವೆರುಷ್ಕಾ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಟ್ರಂಪ್ ಎಚ್ಚರಿಕೆಗೆ ತಲೆಬಾಗದ ಇರಾನ್​: ಸೌದಿ ನೆಲೆಯಲ್ಲಿ ಕ್ಷಿಪಣಿ ದಾಳಿ; ಅಮೆರಿಕಾದ 5 ಟ್ಯಾಂಕರ್ ವಿಮಾನಗಳಿಗೆ ಹಾನಿ..!

West Asia conflict effect: LPG ಕೊರತೆ ತೀವ್ರ; ಮನೆಗಳಲ್ಲಿ PNG, ಹೋಟೆಲ್ ಗಳು ಕಲ್ಲಿದ್ದಲು ಬಳಕೆ ಮಾಡುವಂತೆ ಕೇಂದ್ರ ಸರ್ಕಾರ ಸಲಹೆ

ಒಡಿಶಾ 'ಕೈ' ಶಾಸಕರಿಗೆ' ಟ್ರಬಲ್ ಶೂಟರ್ ಡಿಕೆಶಿ ಆತಿಥ್ಯ: 'ಆಪರೇಷನ್ ಕಮಲ' ತಡೆಗೆ ಕೈಗೊಂಡ ಮುನ್ನೆಚ್ಚರಿಕಾ ಕ್ರಮ; ಕಾಂಗ್ರೆಸ್ ಸಮರ್ಥನೆ

ಒಂದೇ ಸೂರಿನಡಿ ರಾಮ್-ರಹೀಮ್: ದ್ವೇಷ ಹರಡುವವರ ಮಧ್ಯೆ ಮುಸ್ಲಿಮರಿಗಾಗಿ ‘ಇಫ್ತಾರ್ ಕೂಟ’ ಆಯೋಜಿಸುತ್ತಿರುವ ಹಿಂದೂ ಮಹಿಳೆ..!

Strait of Hormuz: 'ಹೌದು.. ನಮ್ಮ ಆಪ್ತ ರಾಷ್ಟ್ರ'... ಭಾರತದ ನೌಕೆಗಳಿಗೆ ಅನುಮತಿ ಕುರಿತು ಇರಾನ್ ರಾಯಭಾರಿ ಹೇಳಿಕೆ!

SCROLL FOR NEXT