ಹತ್ತಿಹೊಳೆ ಪ್ರದೇಶದಲ್ಲಿ ತಡೆಗೋಡೆ ನಿರ್ಮಾಣ ಕಾರ್ಯ 
ರಾಜ್ಯ

ಕೊಡಗು: ನದಿ ದಡ ಸಂರಕ್ಷಣೆ ಹೆಸರಿನಲ್ಲಿ ಮರಗಳಿಗೆ ಕೊಡಲಿ, ಸ್ಥಳೀಯ ನಿವಾಸಿಗಳ ವಿರೋಧ

ಭೂಕುಸಿತ ಮತ್ತು ಮಣ್ಣಿನ ಸವಕಳಿ ತಡೆಯುವಲ್ಲಿ ಮರಗಳ ಪಾತ್ರ ಮಹತ್ವದ್ದಾಗಿದೆ. ಆದಾಗ್ಯೂ, ಕೊಡಗಿನ ನದಿ ತೀರವನ್ನು ಸವಕಳಿಯಿಂದ ರಕ್ಷಿಸುವ ಹೆಸರಿನಲ್ಲಿ ನೂರಕ್ಕೂ ಹೆಚ್ಚು ಹಳೆಯದಾದ, ಭವ್ಯವಾದ ಜೀವಿಗಳನ್ನು ಕಡಿಯಲು ಹೊರಟಿರುವುದು ಆಶ್ಚರ್ಯವಾಗಿದೆ.

ಮಡಿಕೇರಿ: ಭೂಕುಸಿತ ಮತ್ತು ಮಣ್ಣಿನ ಸವಕಳಿ ತಡೆಯುವಲ್ಲಿ ಮರಗಳ ಪಾತ್ರ ಮಹತ್ವದ್ದಾಗಿದೆ. ಆದಾಗ್ಯೂ, ಕೊಡಗಿನ ನದಿ ತೀರವನ್ನು ಸವಕಳಿಯಿಂದ ರಕ್ಷಿಸುವ ಹೆಸರಿನಲ್ಲಿ ನೂರಕ್ಕೂ ಹೆಚ್ಚು ಹಳೆಯದಾದ, ಭವ್ಯವಾದ ಜೀವಿಗಳನ್ನು ಕಡಿಯಲು ಹೊರಟಿರುವುದು ಆಶ್ಚರ್ಯವಾಗಿದೆ.

ಕೋಟೆ ಅಬ್ಬಿ, ಹತ್ತಿಹೊಳೆ ಮತ್ತು ಕಾವೇರಿಯಂತಹ ನದಿ ದಡದಲ್ಲಿರುವ ಮರಗಳನ್ನು ಕಡಿದು, ಭೂಕುಸಿತ ತಡೆಗೆ ತಡೆಗೋಡೆ ನಿರ್ಮಿಸಲು ಕಾವೇರಿ ನೀರಾವರಿ ನಿಗಮದಿಂದ ಗುರುತಿಸಲಾಗಿದೆ. ಕೋಟೆ ಅಬ್ಬಿ ಮತ್ತು ಹತ್ತಿಹೊಳೆ ದಂಡೆಯಲ್ಲಿಯೇ 130 ಕೋಟಿ ರೂ.ಗಳ ಯೋಜನೆಯಡಿ ಸುಮಾರು 100 ಮರಗಳನ್ನು ಕಡಿಯಲು ಗುರುತಿಸಲಾಗಿದೆ.

ಕಾವೇರಿ ನೀರಾವರಿ ನಿಗಮ ಸಮೀಕ್ಷೆ ನಡೆಸಿ, ಅರಣ್ಯ ಇಲಾಖೆಗೆ ಅನುಮತಿಗಾಗಿ ಮನವಿ ಸಲ್ಲಿಸಿದೆ. ಆದರೆ, ಇಲಾಖೆ ಇನ್ನೂ ಗ್ರೀನ್ ಸಿಗ್ನಲ್ ನೀಡಿಲ್ಲ. ಈ ಕ್ರಮವು ಸ್ಥಳೀಯ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಭೂಕುಸಿತವನ್ನು ತಡೆಗಟ್ಟಲು ಇಂತಹ ಬೃಹತ್ ಮತ್ತು ಭವ್ಯವಾದ ಮರಗಳನ್ನು ಕಡಿದುಹಾಕುವ  ಹಿಂದಿನ ವೈಜ್ಞಾನಿಕ ಆಧಾರವನ್ನು ಪ್ರಶ್ನಿಸಿದ್ದಾರೆ.

ಈ ಸಮಸ್ಯೆ ನಿಭಾಯಿಸುವ ವೈಜ್ಞಾನಿಕ ಮಾರ್ಗವೆಂದರೆ ಹೆಚ್ಚುವರಿ ಹೂಳು ತೆಗೆಯಲು ಅನುಮತಿ ನೀಡುವುದು. ಇದರಿಂದ ಜಲಮಾರ್ಗಕ್ಕೆ ಅನುಕೂಲವಾಗಲಿದೆ ಎಂದು ಹಾರಂಗಿ ಜಲಾಶಯದಲ್ಲಿ ವೈಜ್ಞಾನಿಕವಾಗಿ ನೀರು ನಿರ್ವಹಣೆ ಮಾಡುವಂತೆ ಆಗ್ರಹಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಬೆಳೆಗಾರ ನಂದಾ ಬೆಳ್ಳಿಯಪ್ಪ ಹೇಳಿದರು.

2018 ರಲ್ಲಿ ಕೊಡಗಿನಾದ್ಯಂತ ಭಾರೀ ಮಳೆಯಿಂದ ಅಪಾರ ಆಸ್ತಿಪಾಸ್ತಿ ನಷ್ಟ ಉಂಟಾಗಿತ್ತು. ಹಟ್ಟಿಹೊಳೆ, ಮಾದಾಪುರ, ನಂದಿಮೊಟ್ಟೆ ಮತ್ತು ಇತರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಾರಿ ಭೂಕುಸಿತವಾಗಿತ್ತು. ಹಾರಂಗಿ ಜಲಾಶಯದಲ್ಲಿನ ನೀರಿನ ಅಸಮರ್ಪಕ ಭೂಕುಸಿತಕ್ಕೆ ಪ್ರಮುಖ ಕಾರಣವೆಂದು ಕಂಡುಬಂದಿದೆ.

ಕಾವೇರಿ ಜಲಾನಯನ ಪ್ರದೇಶಗಳಲ್ಲಿ 1.6 ಕಿಲೋಮೀಟರ್‌ಗೂ ಹೆಚ್ಚು ತಡೆಗೋಡೆ ಮತ್ತಿತರ ಇತರ ಪರಿಹಾರ ಕ್ರಮಗಳನ್ನು ಯೋಜಿಸಲಾಗಿದ್ದು, ನದಿ ಬಲಪಡಿಸಲು ಯೋಜಿಸಲಾಗಿದ್ದರೂ ಹೂಳು ತೆಗೆಯಲು ಮತ್ತು ಚೆಕ್ ಡ್ಯಾಂ ನಿರ್ಮಿಸಲು ರೂ 130 ಕೋಟಿ ನಿಧಿಯನ್ನು ಬಳಸಲಾಗುವುದು ಎಂದು ಹಾರಂಗಿ ಜಲಾಶಯದ ಕಾರ್ಯನಿರ್ವಾಹಕ ಎಂಜಿನಿಯರ್ ಪುಟ್ಟಸ್ವಾಮಿ ತಿಳಿಸಿದರು.

ಆದಾಗ್ಯೂ, ಪ್ರದೇಶದ ಹಲವಾರು ಪ್ಲಾಂಟರ್‌ಗಳ ಜೊತೆಗೆ ಮಣ್ಣಿನ ನೈಸರ್ಗಿಕ ಸಂರಕ್ಷಕಗಳಾಗಿ ಕಾರ್ಯನಿರ್ವಹಿಸುವ ಮರಗಳನ್ನು ಕತ್ತರಿಸುವ ಕ್ರಮವನ್ನು ಸ್ಥಳೀಯ ನಿವಾಸಿಗಳು ವಿರೋಧಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT