ಬೆಂಗಳೂರು: ರಾಜ್ಯ ಚುನಾವಣೆ ಹೊಸ್ತಿಲಿನಲ್ಲಿ, ಬಿರುಸಿನ ಚುನಾವಣಾ ಚಟುವಟಿಕೆಗಳು, ರಾಜಕೀಯ ಒತ್ತಡದ ಮಧ್ಯೆ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಗೆ ಸಿಬಿಐ ನೊಟೀಸ್ ಕಳುಹಿಸಿದೆ.
ಫೆಬ್ರವರಿ 22ರೊಳಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನಲ್ಲಿ ಡಿ ಕೆ ಶಿವಕುಮಾರ್ ಗೆ ಸೂಚಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿ ಕೆ ಶಿವಕುಮಾರ್, ನನ್ನ ಮಗಳ ಶಿಕ್ಷಣ ಸಂಸ್ಥೆಗೆ ನೊಟೀಸ್ ಬಂದಿದೆ. ಮಗಳ ಶಾಲೆಯ ಫೀಸು ಎಷ್ಟಿದೆ, ಪರೀಕ್ಷೆ ಫಲಿತಾಂಶ ವಿವರ ಕೇಳಿ ಸಿಬಿಐನವರು ನೊಟೀಸ್ ಕಳುಹಿಸಿದ್ದಾರೆ. ನಾನು ಏನು ಉತ್ತರ ಕೊಡಲಿ,ಎಲ್ಲವನ್ನೂ ಅವರಿಗೆ ಬಿಟ್ಟುಬಿಟ್ಟಿದ್ದೀನಿ ಎಂದರು.
ಈ ನೊಟೀಸ್ ವಿರೋಧ ಪಕ್ಷಗಳ ಕುತಂತ್ರವಾಗಿದೆ, ಕೆಲ ಸಮಯಗಳ ಹಿಂದಷ್ಟೇ ಇಡಿ ನೊಟೀಸ್ ಬಂದು ಉತ್ತರ ಕೊಟ್ಟು ಬಂದಿದ್ದೆ. ಈಗ ಮತ್ತೆ ಹೋಗ್ಬೇಕು, ರಾಜಕೀಯ ಒತ್ತಡ ಮಧ್ಯೆ ನಾನು ಏನು ಮಾಡಲಿ ಹೇಳಿ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.