ರಾಜ್ಯ

ವಿಶ್ವ ಯಕ್ಷಗಾನ ಸಮ್ಮೇಳನ ನಡೆಸಲು ಯೋಜನೆ: ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನೀಲ್ ಕುಮಾರ್

Ramyashree GN

ಮಂಗಳೂರು: ಕರ್ನಾಟಕ ಸರ್ಕಾರವು 'ವಿಶ್ವ ಯಕ್ಷಗಾನ ಸಮ್ಮೇಳನ'ವನ್ನು ನಡೆಸಲು ಯೋಜಿಸುತ್ತಿದೆ ಮತ್ತು ಪ್ರಸ್ತಾವನೆಯ ಚರ್ಚೆಗಳು ಆರಂಭಿಕ ಹಂತದಲ್ಲಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನೀಲ್ ಕುಮಾರ್ ಹೇಳಿದ್ದಾರೆ.

ಯಕ್ಷಗಾನವು ಕರಾವಳಿ ಕರ್ನಾಟಕದಲ್ಲಿ ಜನಪ್ರಿಯವಾಗಿರುವ ಸಾಂಪ್ರದಾಯಿಕ ಜಾನಪದ ನೃತ್ಯ ಪ್ರಕಾರವಾಗಿದೆ. ಇದು ನೃತ್ಯ, ಸಂಗೀತ, ಹಾಡು, ಪಾಂಡಿತ್ಯಪೂರ್ಣ ಸಂಭಾಷಣೆಗಳು ಮತ್ತು ವರ್ಣರಂಜಿತ ವೇಷಭೂಷಣಗಳನ್ನು ಒಳಗೊಂಡಿರುವ ವಿಸ್ತಾರವಾದ ನೃತ್ಯ-ನಾಟಕ ಪ್ರದರ್ಶನವಾಗಿದೆ. ಆದ್ದರಿಂದ, ಯಕ್ಷ (ಆಕಾಶ) ಗಾನ (ಸಂಗೀತ) ಎಂದು ಹೆಸರು.

ಉಡುಪಿಯಲ್ಲಿ ಭಾನುವಾರ ರಾತ್ರಿ ನಡೆದ ರಾಜ್ಯ ಮಟ್ಟದ ಪ್ರಥಮ ಯಕ್ಷಗಾನ ಸಮ್ಮೇಳನದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಸಂಸ್ಕೃತಿ ಇಲಾಖೆ ವತಿಯಿಂದ ಯಕ್ಷಗಾನ ಕಲಾವಿದರ ಮಾಹಿತಿ ಬ್ಯಾಂಕ್ ರಚಿಸಲಾಗುವುದು. ಈ ಮಾಹಿತಿ ಬ್ಯಾಂಕ್‌ ಯಕ್ಷಗಾನದ ವಿವಿಧ ಶಾಲೆಗಳು ಮತ್ತು ಅದರ ಕಲಾವಿರದ ಮಾಹಿತಿಯನ್ನು ಸಂಗ್ರಹಿಸುತ್ತದೆ ಎಂದರು.

ಈ ವರ್ಷ ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನಕ್ಕೆ ಸರ್ಕಾರ 2 ಕೋಟಿ ರೂ. ಗಳನ್ನು ಮಂಜೂರು ಮಾಡಿದೆ ಎಂದು ಸುನೀಲ್ ಕುಮಾರ್ ತಿಳಿಸಿದರು.

ಎರಡು ದಿನಗಳ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಯಕ್ಷಗಾನವನ್ನು ವಾರ್ಷಿಕ ಕಾರ್ಯಕ್ರಮವನ್ನಾಗಿ ಮಾಡಲು ನಿರ್ಧರಿಸಲಾಯಿತು. ಮುಂದಿನ ವರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮ್ಮೇಳನ ನಡೆಯಲಿದೆ.

ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ) ಮಾದರಿಯಲ್ಲಿ ರಾಷ್ಟ್ರೀಯ ಯಕ್ಷಗಾನ ಶಾಲೆಯನ್ನು ಸ್ಥಾಪಿಸಬೇಕು ಎಂದು ಸಭೆಯು ನಿರ್ಣಯವನ್ನು ಅಂಗೀಕರಿಸಿತು. ಯಕ್ಷಗಾನ ಕಲಾವಿದರ ಮಾಸಿಕ ಪಿಂಚಣಿಯನ್ನು 5 ಸಾವಿರ ರೂ.ಗೆ ಹೆಚ್ಚಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಯಿತು.

ಕರ್ನಾಟಕದೊಂದಿಗೆ ಜಿಲ್ಲೆಯು ಸಾಂಸ್ಕೃತಿಕ ಬಾಂಧವ್ಯ ಹೊಂದಿರುವುದರಿಂದ ವಿವಿಧ ಸಾಂಸ್ಕೃತಿಕ ಅಕಾಡೆಮಿಗಳಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡುವಾಗ ಮತ್ತು ಬಹುಮಾನಗಳನ್ನು ಘೋಷಿಸುವಾಗ ಕೇರಳದ ಕಾಸರಗೋಡು ಜಿಲ್ಲೆಗೆ ಸರ್ಕಾರ ಸೂಕ್ತ ಮಾನ್ಯತೆ ನೀಡಬೇಕೆಂದು ಸಮ್ಮೇಳನವು ಬಯಸಿದೆ.

SCROLL FOR NEXT