ಗೃಹ ಸಚಿವ ಜಿ ಪರಮೇಶ್ವರ 
ರಾಜ್ಯ

ಕರ್ನಾಟಕದಲ್ಲಿ 46,149 ರೌಡಿ ಶೀಟರ್‌ಗಳು ಇದ್ದಾರೆ: ಗೃಹ ಸಚಿವ ಪರಮೇಶ್ವರ್

ಕರ್ನಾಟಕದಲ್ಲಿ 46,149 ರೌಡಿ ಶೀಟರ್‌ಗಳಿದ್ದು, 2018 ರಿಂದ 27,294 ಜನರ ಹೆಸರನ್ನು ರೌಡಿ ಶೀಟ್‌ನಿಂದ ಕೈಬಿಡಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದ್ದಾರೆ.

ಬೆಂಗಳೂರು: ಕರ್ನಾಟಕದಲ್ಲಿ 46,149 ರೌಡಿ ಶೀಟರ್‌ಗಳಿದ್ದು, 2018 ರಿಂದ 27,294 ಜನರ ಹೆಸರನ್ನು ರೌಡಿ ಶೀಟ್‌ನಿಂದ ಕೈಬಿಡಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದ್ದಾರೆ.

ಗುರುವಾರ ಪರಿಷತ್‌ನಲ್ಲಿ ಎಂಎಲ್‌ಸಿ ಅರವಿಂದಕುಮಾರ ಅರಳಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಹಿಳೆಯರು ಮತ್ತು ಕಾಲೇಜು ವಿದ್ಯಾರ್ಥಿನಿಯರನ್ನು ಚುಡಾಯಿಸುವವರ ವಿರುದ್ಧ ರೌಡಿ ಶೀಟ್ ತೆರೆಯಲಾಗುತ್ತದೆ. ಬಲಪ್ರಯೋಗದಿಂದ ಜನರಿಗೆ ಕಿರುಕುಳ ನೀಡುವುದು, ಹೊಲಸು ಭಾಷೆಯಲ್ಲಿ ಬೆದರಿಕೆ ಮತ್ತು ನಿಂದನೆ, ಬೆದರಿಸಿ ಸುಲಿಗೆ ಮಾಡುವವರು, ಅಸಭ್ಯ ವರ್ತನೆ, ಚೈನ್ ಸ್ನ್ಯಾಚಿಂಗ್, ಹಲ್ಲೆ ಮತ್ತು ಇತರ ಅಪರಾಧಗಳ ವಿರುದ್ಧ ರೌಡಿ ಶೀಟ್ ತೆರೆಯಲಾಗುತ್ತದೆ ಎಂದರು.

65 ವರ್ಷ ಮೇಲ್ಪಟ್ಟ ವ್ಯಕ್ತಿ ನಿಷ್ಕ್ರಿಯರಾಗಿದ್ದರೆ, ಮರಣ ಹೊಂದಿದರೆ, ದೈಹಿಕ ವಿಕಲಚೇತನರಾಗಿದ್ದರೆ ಅಥವಾ ಮಾನಸಿಕವಾಗಿ ಅಸ್ವಸ್ಥರಾಗಿದ್ದರೆ ಅಥವಾ 10 ವರ್ಷಗಳಿಂದ (ತನಿಖೆ ಅಥವಾ ವಿಚಾರಣೆಯ ಅಡಿಯಲ್ಲಿ ಪ್ರಕರಣಗಳನ್ನು ಹೊರತುಪಡಿಸಿ) ಯಾವುದೇ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎಂದು ಕಂಡುಬಂದಲ್ಲಿ ಮತ್ತು ಉತ್ತಮ ನಡವಳಿಕೆಯನ್ನು ತೋರಿಸಿದರೆ ಅಂತವರ ಹೆಸರನ್ನು ರೌಡಿ ಶೀಟ್‌ನಿಂದ ಕೈಬಿಡಲಾಗುವುದು ಎಂದು ಅವರು ಹೇಳಿದರು.  

ರೌಡಿ ಶೀಟ್‌ಗಳನ್ನು ಜಾತಿಯಿಂದ ವಿಂಗಡಿಸಲಾಗಿಲ್ಲ. ಸೇರ್ಪಡೆ ಮತ್ತು ಅಳಿಸುವಿಕೆ ಇರುವುದರಿಂದ ರೌಡಿ ಶೀಟ್‌ಗಳ ಸಂಖ್ಯೆ ಬದಲಾಗುತ್ತಲೇ ಇರುತ್ತದೆ ಎಂದು ಪ್ರಶ್ನೆಯೊಂದಕ್ಕೆ ಪರಮೇಶ್ವರ ಉತ್ತರಿಸಿದರು. 'ರೌಡಿ ಶೀಟ್ ತೆರೆಯುವುದು ರೌಡಿ ಚಟುವಟಿಕೆಗಳನ್ನು ದಾಖಲಿಸುವ ಸಾಧನವಾಗಿದೆ ಎಂದು ಅವರು ತಿಳಿಸಿದರು.

ಇದು ಪೊಲೀಸರಿಗೆ ಅಂತವರ ಮೇಲೆ ನಿಗಾ ಇರಿಸಲು ಮತ್ತು ಧಾರ್ಮಿಕ ಹಬ್ಬಗಳು, ಬಂದ್‌ಗಳು, ಚುನಾವಣೆಗಳು ಮತ್ತು ಮುಂತಾದವುಗಳಿಗೆ ಮುಂಚಿತವಾಗಿ ಪರಿಸ್ಥಿತಿ ಬೇಡಿಕೆಯಿರುವಾಗ ಅಹಿತಕರ ಘಟನೆಗಳನ್ನು ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ ಎಂದು ಮಾಜಿ ಡಿಜಿ ಮತ್ತು ಐಜಿಪಿ ಎಸ್‌ಟಿ ರಮೇಶ್ ಹೇಳಿದರು. ರಾಜ್ಯದ ಜನಸಂಖ್ಯೆ ಮತ್ತು ಪೊಲೀಸ್ ಠಾಣೆಗಳ ಸಂಖ್ಯೆಗೆ ಅನುಗುಣವಾಗಿ ರೌಡಿ ಶೀಟ್‌ಗಳ ಸಂಖ್ಯೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರೌಡಿ ಶೀಟ್‌ನಿಂದ ಹೆಸರು ಕೈಬಿಟ್ಟ ಸಂಖ್ಯೆ
2018-    3,489

2019-   2,195

2020-   1,718

2021-   8,062

2022-   3,314

2023-   8,516

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT