ಸಾಂದರ್ಭಿಕ ಚಿತ್ರ 
ರಾಜ್ಯ

ಮಾರ್ಚ್ ಅಂತ್ಯಕ್ಕೆ ಗದಗದಲ್ಲಿ ರಾಜ್ಯದ ಮೊದಲ ಗೋಶಾಲೆ ಆರಂಭ

ಮೊದಲ ಬಾರಿಗೆ ಗದಗದಲ್ಲಿ ಕರ್ನಾಟಕದ ಮೊದಲ ಗೋಶಾಲೆ ತಲೆಯೆತ್ತಲಿದೆ. ಕೆಲ ತಿಂಗಳ ಹಿಂದೆ ಗದಗ ಶಾಸಕ ಎಚ್.ಕೆ.ಪಾಟೀಲ ಕುರ್ತಕೋಟಿ ಗ್ರಾಮಕ್ಕೆ ಭೇಟಿ ನೀಡಿ ಗೋಶಾಲೆಗೆ ಸ್ಥಳ ಗುರುತಿಸಿದ್ದರು. 1 ಕೋಟಿ ರೂಪಾಯಿ ವೆಚ್ಚದಲ್ಲಿ ಹಾಸ್ಟೆಲ್ ಕಟ್ಟಡ ನಿರ್ಮಾಣವಾಗುತ್ತಿದ್ದು, ಮಾರ್ಚ್ ಅಂತ್ಯದೊಳಗೆ ಕಾರ್ಯಾರಂಭವಾಗುವ ಸಾಧ್ಯತೆ ಇದೆ.

ಗದಗ: ಮೊದಲ ಬಾರಿಗೆ ಗದಗದಲ್ಲಿ ಕರ್ನಾಟಕದ ಮೊದಲ ಗೋಶಾಲೆ ತಲೆಯೆತ್ತಲಿದೆ. ಕೆಲ ತಿಂಗಳ ಹಿಂದೆ ಗದಗ ಶಾಸಕ ಎಚ್.ಕೆ.ಪಾಟೀಲ ಕುರ್ತಕೋಟಿ ಗ್ರಾಮಕ್ಕೆ ಭೇಟಿ ನೀಡಿ ಗೋಶಾಲೆಗೆ ಸ್ಥಳ ಗುರುತಿಸಿದ್ದರು. 1 ಕೋಟಿ ರೂಪಾಯಿ ವೆಚ್ಚದಲ್ಲಿ ಹಾಸ್ಟೆಲ್ ಕಟ್ಟಡ ನಿರ್ಮಾಣವಾಗುತ್ತಿದ್ದು, ಮಾರ್ಚ್ ಅಂತ್ಯದೊಳಗೆ ಕಾರ್ಯಾರಂಭವಾಗುವ ಸಾಧ್ಯತೆ ಇದೆ.

ತಮ್ಮ ಜಾನುವಾರುಗಳನ್ನು ಸಾಕಲು ಸ್ಥಳಾವಕಾಶ ಹೊಂದಿರದ ರೈತರಿಗೆ ಇದು ವಸತಿ ನಿಲಯ ಒದಗಿಸಲಿದೆ. ಜಾನುವಾರುಗಳನ್ನು ಅಲ್ಲಿಯೇ ಬಿಟ್ಟು ದಿನನಿತ್ಯ ಹಾಲು ಕೊಡಬಹುದು, ಯಾವಾಗ ಬೇಕಾದರೂ ತೆಗೆದುಕೊಂಡು ಹೋಗಬಹುದು. ರೋಗಗಳಿಂದ ಬಳಲುತ್ತಿರುವ ಜಾನುವಾರುಗಳನ್ನೂ ಅಲ್ಲಿಯೇ ಬಿಡಬಹುದು. ಬಾಡಿಗೆ ನಿರ್ಧಾರಕ್ಕೆ ಶೀಘ್ರವೇ ಸಮಿತಿ ರಚಿಸಲಾಗುವುದು ಎಂದು ಎಚ್ ಕೆ ಪಾಟೀಲ್ ತಿಳಿಸಿದರು.

ನಿರ್ಮಾಣ ಹಂತದಲ್ಲಿರುವ ಜಾನುವಾರು ಹಾಸ್ಟೆಲ್ ಕಟ್ಟಡ: ಗದಗದಂತಹ ಜಿಲ್ಲೆಗಳಲ್ಲಿ ಜಾನುವಾರುಗಳನ್ನು ಸಾಕಲು ಸಾಕಷ್ಟು ರೈತರಿಗೆ ಸ್ಥಳಾವಕಾಶವಿಲ್ಲ. ಅಗತ್ಯವಿರುವ ಪರಿಣತಿಯನ್ನು ಹೊಂದಿರದ ಕೆಲವು ರೈತರು ಜಾನುವಾರುಗಳನ್ನು ಆರೈಕೆ ಮಾಡುವುದನ್ನು ಕಲಿಯುವವರೆಗೆ ಅಲ್ಲಿಯೇ ಬಿಡಬಹುದು. ಸಾಮಾನ್ಯ ಜಾನುವಾರುಗಳಿಗೆ ಒಂದು ದೊಡ್ಡ ಶೆಡ್ ಮತ್ತು ರೋಗಗಳಿಂದ ಬಳಲುತ್ತಿರುವವರಿಗೆ ಪ್ರತ್ಯೇಕವಾದ ಹಾಸ್ಟೆಲ್‌ನಲ್ಲಿ 120 ಜಾನುವಾರುಗಳಿಗೆ ವಸತಿ ಸೌಕರ್ಯವಿದೆ. ಇದು ಕರುಗಳಿಗೆ ಪ್ರತ್ಯೇಕ ಸ್ಥಳ, ಒಂದು ಕ್ಲಿನಿಕ್, ಸ್ಟೋರ್ ರೂಂ, ಹಾಲಿನ ಕೇಂದ್ರ, ನೀರಿನ ಟ್ಯಾಂಕ್, ಸಗಣಿ ಸಂಗ್ರಹ ಕೇಂದ್ರ ಮತ್ತು ಮಿನಿ ನೀರಿನ ಟ್ಯಾಂಕ್‌ಗಳನ್ನು ಹೊಂದಿದೆ.

ಗ್ರಾಮಸ್ಥರೇ ವಸತಿ ನಿಲಯವನ್ನು ನೋಡಿಕೊಳ್ಳುತ್ತಾರೆ. ಗದಗ ಸಮೀಪದ ಸಂಭಾಪುರದ ರೈತ ರಾಚಪ್ಪ ಸೊನ್ನದ, ‘ಬಾಲಕ-ಬಾಲಕಿಯರ ಹಾಸ್ಟೆಲ್‌ಗಳ ಬಗ್ಗೆ ಕೇಳಿದ್ದೇವೆ, ಆದರೆ ಗೋಶಾಲೆ ಬಗ್ಗೆ ಕೇಳುತ್ತಿರುವುದು ಇದೇ ಮೊದಲು. ನಿರ್ಮಾಣ ಹಂತದಲ್ಲಿರುವ ವಸತಿ ನಿಲಯವನ್ನು ನೋಡಲು ಸೋಮವಾರ ಕುರ್ತಕೋಟಿಗೆ ಹೋಗಿದ್ದೆವು ಎಂದರು.

ಗದಗ ಶಾಸಕ ಎಚ್ ಕೆ ಪಾಟೀಲ್, ''ಈಗ ಗ್ರಾಮದ ಕೆಲ ಮನೆಗಳಲ್ಲಿ ಮಾತ್ರ ಜಾನುವಾರು ಸಾಕಣೆ ಕಾಣುತ್ತಿದೆ. ಮಾರ್ಚ್ ಅಂತ್ಯಕ್ಕೆ ಜಾನುವಾರು ಹಾಸ್ಟೆಲ್ ಆರಂಭವಾಗುವ ಸಾಧ್ಯತೆ ಇದೆ. ಹೊಸ ಉಪಕ್ರಮವು ಹೈನುಗಾರಿಕೆ ಚಟುವಟಿಕೆಗಳು, ಕೃಷಿ ಮತ್ತು ಜಾನುವಾರುಗಳ ನಿರ್ವಹಣೆಗೆ ಸಮಯವನ್ನು ಉಳಿಸುತ್ತದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT