ಕೊಪ್ಪಳದ ಗ್ರಾಮವೊಂದರಲ್ಲಿ ದೇವದಾಸಿ ಪದ್ಧತಿ ವಿರುದ್ಧ ಜಾಗೃತಿ ಅಭಿಯಾನ ನಡೆಸುತ್ತಿರುವ ಅಧಿಕಾರಿಗಳು. 
ರಾಜ್ಯ

ಹುಲಿಗೆಮ್ಮ ಜಾತ್ರೆ: ಅಧಿಕಾರಿಗಳ ಶ್ರಮಕ್ಕೆ ಸಿಕ್ಕ ಫಲ, ಈ ಬಾರಿ ನಡೆಯದ ಅನಿಷ್ಠ ದೇವದಾಸಿ ಪದ್ಧತಿ!

ಮೇ.13ರಂದು ಇಡೀ ರಾಜ್ಯ ಮತದಾನದತ್ತ ಬ್ಯುಸಿಯಾಗಿದ್ದರೆ, ಕೊಪ್ಪಳ ಜಿಲ್ಲಾಡಳಿತ ಮಂಡಳಿಯ ಅಧಿಕಾರಿಗಳು ಬಡ ಯುವತಿಯರು ದೇವದಾಸಿಯರಾಗುವುದನ್ನು ತಡೆಯುವಲ್ಲಿ ನಿರತರಾಗಿದ್ದರು. ಅವರ ಈ ಪರಿಶ್ರಮ ಫಲ ನೀಡಿದ್ದು, ಈ ಬಾರಿಯ ಹುಲಿಗೆಮ್ಮ ಜಾತ್ರೆಯಲ್ಲಿ ಅನಿಷ್ಠ ದೇವದಾಸಿ ಪದ್ಧತಿಗಳು ನಡೆದಿಲ್ಲ.

ಕೊಪ್ಪಳ: ಮೇ.13ರಂದು ಇಡೀ ರಾಜ್ಯ ಮತದಾನದತ್ತ ಬ್ಯುಸಿಯಾಗಿದ್ದರೆ, ಕೊಪ್ಪಳ ಜಿಲ್ಲಾಡಳಿತ ಮಂಡಳಿಯ ಅಧಿಕಾರಿಗಳು ಬಡ ಯುವತಿಯರು ದೇವದಾಸಿಯರಾಗುವುದನ್ನು ತಡೆಯುವಲ್ಲಿ ನಿರತರಾಗಿದ್ದರು. ಅವರ ಈ ಪರಿಶ್ರಮ ಫಲ ನೀಡಿದ್ದು, ಈ ಬಾರಿಯ ಹುಲಿಗೆಮ್ಮ ಜಾತ್ರೆಯಲ್ಲಿ ಅನಿಷ್ಠ ದೇವದಾಸಿ ಪದ್ಧತಿಗಳು ನಡೆದಿಲ್ಲ.

ದೇವದಾಸಿ ಪದ್ಧತಿ ಅನಿಷ್ಠವಾಗಿದ್ದು, ಈ ಆಚರಣೆ ಶಿಕ್ಷಾರ್ಹ ಅಪರಾಧವಾಗಿದೆ. ಜಾತ್ರೆ ವೇಳೆ ದೇವರ ಹೆಸರಿನಲ್ಲಿ ಮುತ್ತು ಕಟ್ಟುವುದು, ಜಡೆ ಬಿಡುವುಡು, ದೇವದಾಸಿ ಪದ್ಧತಿಗಳನ್ನು ನಡೆಸಲಾಗುತ್ತದೆ.

ಹೀಗಾಗಿ ಈ ವರ್ಷ ದೇವಾಲಯದ ಸುತ್ತಲೂ ಇಂತಹ ಪ್ರಯತ್ನಗಳನ್ನು ತಡೆಯಲು ಜಿಲ್ಲಾಡಳಿತ ಮಂಡಳಿ ಸೂಕ್ತ ರೀತಿಯ ವ್ಯವಸ್ಥೆಗಳನ್ನು ಮಾಡಿತ್ತು. ಜಾತ್ರೆ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಪೊಲೀಸರು ಮತ್ತು ಅಧಿಕಾರಿಗಳು ಜನಸಾಮಾನ್ಯರಂತೆ ಸಾಮಾನ್ಯ ಉಡುಪಿನಲ್ಲಿ ಸ್ಥಳದಲ್ಲಿ ಗಸ್ತು ತಿರುಗುತ್ತಿದ್ದರು. ಇದರಂತೆ ಹೆಣ್ಣುಮಕ್ಕಳನ್ನು ದೇವದಾಸಿಯರನ್ನಾಗಿ ಪರಿವರ್ತಿಸುವ 30 ಪ್ರಕರಣಗಳನ್ನು ತಡೆದಿದ್ದಾರೆ.

2022ರಲ್ಲಿ ದೇವಸ್ತಾನದಲ್ಲಿ ಇಂತಹ 300 ಪ್ರಕರಣಗಳು ವರದಿಯಾಗಿದ್ದವು. ಆದರೆ, ಈ ಬಗ್ಗೆ ಯಾವುದೇ ಎಫ್ಐಆರ್ ಗಳು ದಾಖಲಾಗಿಲ್ಲ. ಆದರೆ, ಪೋಷಕರಿಗೆ ಕೌನ್ಸಿಲಿಂಗ್ ಮಾಡಿ ಕಳುಹಿಸಲಾಗಿತ್ತು.

ಮೇ.13ರಂದು ಇಂತಹ 30 ಪ್ರಕರಣಗಳನ್ನು ತಡೆಯಲಾಗಿದೆ. ಏನೇಕ ಸ್ಥಳಗಳಲ್ಲಿ, ಮನೆಗಳಲ್ಲಿ ರಾತ್ರಿ ವೇಳೆ ಇಂತಹ ಆಚರಣೆಗಳನ್ನು ನಡೆಸಲಾಗುತ್ತದೆ. ಬಡವರು ಹಾಗೂ ಅನಕ್ಷರಸ್ಥರು ಇಂತಹ ಅನಿಷ್ಟ ಪದ್ಧತಿಗೆ ಬಲಿಯಾಗುತ್ತಿದ್ದಾರೆ. ಬಲವಂತವಾಗಿ ಹೆಣ್ಣುಮಕ್ಕಳನ್ನು ಇಂತಹ ಅನಿಷ್ಟ ಪದ್ಧತಿಗೊಳಪಡಿಸಲಾಗುತ್ತಿದ್ದು, ಕೊನೆಗೆ ಲೈಂಗಿಕ ಕಾರ್ಯಕರ್ತೆಯರಾಗಿ ಪರಿವರ್ತನೆಗೊಳ್ಳುತ್ತಿದ್ದಾರೆ. ಇದನ್ನು ತಡೆಯುವುದು ಅತ್ಯಗತ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

SCROLL FOR NEXT