ಆಲಮಟ್ಟಿ ಜಲಾಶಯ 
ರಾಜ್ಯ

ಖಾರಿಫ್ ಬೆಳೆಗಳಿಗೆ ನೀರು ಬಿಡದಿರಲು ಕೃಷ್ಣಾ ಮೇಲ್ದಂಡೆ ನೀರಾವರಿ ಯೋಜನೆ ಸಲಹಾ ಸಮಿತಿ ನಿರ್ಧಾರ!

ಕೃಷ್ಣಾ ನದಿಗೆ ಅಡ್ಡಲಾಗಿರುವ ಆಲಮಟ್ಟಿ ಅಣೆಕಟ್ಟಿನಲ್ಲಿ ನೀರಿನ ಸೀಮಿತ ಸಂಗ್ರಹಣೆ ಇರುವ ಕಾರಣ ಪ್ರಸ್ತುತ ಖಾರಿಫ್ ಹಂಗಾಮಿಗೆ ನೀರಾವರಿಗಾಗಿ ಕಾಲುವೆಗಳಿಗೆ ನೀರು ಬಿಡದೆ ಮತ್ತು ಕುಡಿಯುವ ಉದ್ದೇಶಕ್ಕೆ ಮಾತ್ರ ನೀರನ್ನು ಬಳಸಿಕೊಳ್ಳುವಂತೆ ರಾಜ್ಯ ಸರ್ಕಾರವನ್ನು ಕೃಷ್ಣ ಮೇಲ್ದಂಡೆ ಯೋಜನೆಯ (ಯುಕೆಪಿ) ನೀರಾವರಿ ಸಲಹಾ ಸಮಿತಿ  ಒತ್ತಾಯಿಸಿದೆ.

ವಿಜಯಪುರ:  ಕೃಷ್ಣಾ ನದಿಗೆ ಅಡ್ಡಲಾಗಿರುವ ಆಲಮಟ್ಟಿ ಅಣೆಕಟ್ಟಿನಲ್ಲಿ ನೀರಿನ ಸೀಮಿತ ಸಂಗ್ರಹಣೆ ಇರುವ ಕಾರಣ ಪ್ರಸ್ತುತ ಖಾರಿಫ್ ಹಂಗಾಮಿಗೆ ನೀರಾವರಿಗಾಗಿ ಕಾಲುವೆಗಳಿಗೆ ನೀರು ಬಿಡದೆ ಮತ್ತು ಕುಡಿಯುವ ಉದ್ದೇಶಕ್ಕೆ ಮಾತ್ರ ನೀರನ್ನು ಬಳಸಿಕೊಳ್ಳುವಂತೆ ರಾಜ್ಯ ಸರ್ಕಾರವನ್ನು ಕೃಷ್ಣ ಮೇಲ್ದಂಡೆ ಯೋಜನೆಯ (ಯುಕೆಪಿ) ನೀರಾವರಿ ಸಲಹಾ ಸಮಿತಿ  ಒತ್ತಾಯಿಸಿದೆ.

ಮಂಗಳವಾರ ನಡೆದ ಕೃಷ್ಣಾ ಮೇಲ್ದಂಡೆ ಯೋಜನೆಯ (ಯುಕೆಪಿ) ನೀರಾವರಿ ಸಲಹಾ ಸಮಿತಿ (ಐಸಿಸಿ) ಬೆಳೆಗಳಿಗೆ ನೀರು ಬಿಡದಂತೆ ನಿರ್ಣಯಿಸಿತು. ಮುಂದಿನ ದಿನಗಳಲ್ಲಿ ಖಾರಿಫ್ ಬೆಳೆಗಳಿಗೆ ನೀರು ಬಿಡದಿರಲು ಸರ್ವಾನುಮತದ ನಿರ್ಣಯ ಕೈಗೊಂಡಿದ್ದೇವೆ. ಆದರೆ, ಕಳೆದ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ 19 ದಿನ ಮಾತ್ರ ನೀರು ಬಿಡಲಾಗುವುದು.

ಜಲಾನಯನ ಪ್ರದೇಶಗಳ ವಿಭಾಗವಾರು ಬೆಳೆ ಮಾದರಿಯನ್ನು ಆಧರಿಸಿ ಇದನ್ನು ಸಹ ಮಾಡಲಾಗುತ್ತದೆ. ಬೆಳೆ ಪರಿಸ್ಥಿತಿ ಆಧರಿಸಿ ವಿವಿಧ ವಿಭಾಗದ ಮುಖ್ಯ ಎಂಜಿನಿಯರ್‌ಗಳಿಗೆ ನೀರು ಬಿಡುವ ಅಧಿಕಾರ ನೀಡಲಾಗುವುದು ಎಂದು ಐಸಿಸಿ ಅಧ್ಯಕ್ಷರೂ ಆಗಿರುವ ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಹೇಳಿದರು. ಜಲಾನಯನ ಪ್ರದೇಶದ ರೈತರು ಬೆಳೆದು ನಿಂತಿರುವ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದು, ಈ ನಿರ್ಧಾರದಿಂದ ಮತ್ತಷ್ಟು ಆತಂಕ ಎದುರಾಗಿದೆ.

ಪ್ರಸ್ತುತ ಬರಗಾಲ, ನೀರಿನ ಲಭ್ಯತೆ ಮತ್ತು ಮುಂದಿನ ಮುಂಗಾರು ಹಂಗಾಮಿನವರೆಗೆ ಕುಡಿಯುವ ನೀರಿನ ಅಗತ್ಯತೆಗಳನ್ನು ಪರಿಗಣಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿದರು. ರಬಿ ಹಂಗಾಮಿಗೆ 75 ಟಿಎಂಸಿ ಅಡಿ ನೀರು ಅಗತ್ಯವಿದ್ದು, ಆಲಮಟ್ಟಿ ಅಣೆಕಟ್ಟಿನಲ್ಲಿ ಸಾಕಷ್ಟು ನೀರಿಲ್ಲ ಎಂದರು.

ಈ ಹಿಂದೆ ನಿರ್ಧರಿಸಿದಂತೆ ನ.18ರ ವರೆಗೆ ನೀರು ಬಿಡಲಾಗುವುದು, ನಂತರ ನ.19ರಿಂದ 26ರವರೆಗೆ ನೀರು ಬಿಡಲಾಗುವುದು ಎಂದ ಸಚಿವರು, ನ.27ರಿಂದ ಡಿ.4ರವರೆಗೆ ಎಂಟು ದಿನ ನೀರು ಬಿಡಲಾಗುವುದು.ಇಂಜಿನಿಯರ್‌ಗಳು ಸಹ ಜಿಲ್ಲಾಧಿಕಾರಿಗಳ ಸಲಹೆ ಪಡೆಯಬೇಕು. ನೀರು ಬಿಡುವ ಮುನ್ನ ತಮ್ಮ ಪ್ರದೇಶದ ಆಯುಕ್ತರು ಮತ್ತು ಸ್ಥಳೀಯ ಚುನಾಯಿತ ಪ್ರತಿನಿಧಿಗಳ ಜೊತೆ ಚರ್ಚಿಸಬೇಕು ಎಂದು ಹೇಳಿದರು.

ನೀರಿನ ಲಭ್ಯತೆಗೆ ಸಂಬಂಧಿಸಿದಂತೆ ಅಕ್ಟೋಬರ್ 13ರಿಂದಲೇ ಆಲಮಟ್ಟಿ ಅಣೆಕಟ್ಟೆಗೆ ಒಳಹರಿವು ನಿಂತಿದೆ ಎಂದು ತಿಮ್ಮಾಪುರ ಹೇಳಿದರು. ಕೃಷಿಗೆ ನೀರು ಬಿಟ್ಟ ನಂತರ ಅಣೆಕಟ್ಟೆಗೆ 50 ಟಿಎಂಸಿ ಅಡಿ ನೀರು ಬಿಡಲಾಗುವುದು ಮತ್ತು 32 ಟಿಎಂಸಿ ಅಡಿ ನೀರು ಸಂಗ್ರಹವಾಗಲಿದೆ. ನಾರಾಯಣಪುರ ಅಣೆಕಟ್ಟಿನಿಂದ 12 ಟಿಎಂಸಿ ಅಡಿ ನೀರು ಸೇರಿಸಿದರೆ ನಮಗೆ 44 ಟಿಎಂಸಿ ಅಡಿ ನೀರು ಮಾತ್ರ ಉಳಿಯುತ್ತದೆ. ಬೇಸಿಗೆಯಲ್ಲಿ ಆವಿಯಾಗುವಿಕೆ ನಷ್ಟವಾಗುವುದರಿಂದ ಈ ನೀರು ಸಹ ಉಳಿಯುವುದಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

SCROLL FOR NEXT