ಸಾಂದರ್ಭಿಕ ಚಿತ್ರ 
ರಾಜ್ಯ

ಕೃಷಿ ವಿಜ್ಞಾನ ವಿ.ವಿ.ಯಿಂದ ಹೊಸ ತಳಿ ಸೂರ್ಯಕಾಂತಿ ಹೂ: ರೈತರು-ಮಾರಾಟಗಾರರು-ಬಳಕೆದಾರರಿಗೆ ಪೂರಕ ಬೆಳೆ

ಮೂಲ ಸೂರ್ಯಕಾಂತಿ ಹೂವು ಬೇರೆ ಯಾವುದೇ ಹೂಗಳಿಗೆ ಹೋಲಿಸಿದರೆ ಗಾತ್ರದಲ್ಲಿ ದೊಡ್ಡದಾಗಿದ್ದರೂ, ಕೃಷಿ ವಿಜ್ಞಾನ ವಿಶ್ವವಿದ್ಯಾಲಯವು (UAS) ಅಡ್ಡ-ಪರಾಗಸ್ಪರ್ಶ ಮತ್ತು ಬಹು ಪ್ರಯೋಗಗಳ ಮೂಲಕ 'ಡ್ವಾರ್ಫ್ ಆರ್ನಮೆಂಟಲ್ ಸನ್ ಫ್ಲವರ್ಸ್' ಎಂಬ ಹೊಸ ವಿಧದ ಸೂರ್ಯಕಾಂತಿಯನ್ನು ರಚಿಸಿದೆ.

ಬೆಂಗಳೂರು: ಮೂಲ ಸೂರ್ಯಕಾಂತಿ ಹೂವು ಬೇರೆ ಯಾವುದೇ ಹೂಗಳಿಗೆ ಹೋಲಿಸಿದರೆ ಗಾತ್ರದಲ್ಲಿ ದೊಡ್ಡದಾಗಿದ್ದರೂ, ಕೃಷಿ ವಿಜ್ಞಾನ ವಿಶ್ವವಿದ್ಯಾಲಯವು (UAS) ಅಡ್ಡ-ಪರಾಗಸ್ಪರ್ಶ ಮತ್ತು ಬಹು ಪ್ರಯೋಗಗಳ ಮೂಲಕ 'ಡ್ವಾರ್ಫ್ ಆರ್ನಮೆಂಟಲ್ ಸನ್ ಫ್ಲವರ್ಸ್' ಎಂಬ ಹೊಸ ವಿಧದ ಸೂರ್ಯಕಾಂತಿಯನ್ನು ರಚಿಸಿದೆ.

ಹೆಸರೇ ಸೂಚಿಸುವಂತೆ, ಈ ವಿಧವನ್ನು ವಿವಿಧ ಕಾರ್ಯಕ್ರಮಗಳು, ಸಮಾರಂಭಗಳು ಮತ್ತು ಮದುವೆಗಳಲ್ಲಿ ಅಲಂಕಾರಗಳಿಗೆ, ಪಟ್ಟಾಭಿಷೇಕ ಕಾರ್ಯಕ್ರಮಗಳಿಗೆ ಮತ್ತು ಹೂಗುಚ್ಛಗಳಿಗೆ ಬಳಸಬಹುದು.

ಈ ಸೂರ್ಯಕಾಂತಿಗಳು 7-10 ದಿನಗಳ ಕಾಲ ಕೊಯ್ದ ನಂತರವೂ ಉಳಿಯುತ್ತದೆ. ಇದು ಸಣ್ಣ ಹೂವುಗಳಿಗೆ ಹೋಲಿಸಿದರೆ ಹೆಚ್ಚು ಉಪಯೋದ ಸ್ನೇಹಿಯಾಗಿದ್ದು 45-55 ದಿನಗಳಲ್ಲಿ ಇಳುವರಿ ಕೊಡುತ್ತದೆ. ಅಲಂಕಾರಿಕ ಸೂರ್ಯಕಾಂತಿಗಳನ್ನು ಬಳಸುವುದರಿಂದ ಹೂವುಗಳಿಂದ ತ್ಯಾಜ್ಯವನ್ನು ಕಡಿಮೆ ಮಾಡಬಹುದು, ಅಲಂಕಾರ ಕೆಲಸ ಮಾಡುವವರಿಗೂ ಇದು ಅನುಕೂಲವಾಗಿದೆ. 

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಸಂಶೋಧನೆಯ ಸಹಾಯಕ ನಿರ್ದೇಶಕಿ ಡಾ ಎಂ ಎಸ್ ಉಮಾ, “ಪ್ರಸ್ತುತ, ಕೆಲವು ಸೂರ್ವಕಾಂತಿ ಬೆಳೆಯ ಉಪ-ವರ್ಗಗಳು ವೀಕ್ಷಣೆಯಲ್ಲಿವೆ. ನಾವು ಸ್ಥಿರೀಕರಣವನ್ನು ಪ್ರಯತ್ನಿಸುತ್ತಿದ್ದೇವೆ ಇದರಿಂದ ಅವು ಉತ್ತಮ ಇಳುವರಿಯನ್ನು ನೀಡುತ್ತವೆ. ಅವುಗಳಲ್ಲಿ ಕೆಲವು ನಾವು ಕೆಲಸ ಮಾಡುತ್ತಿರುವ ನೇರಳೆ ಬಣ್ಣಗಳಂತಹ ವಿವಿಧ ಬಣ್ಣಗಳನ್ನು ಪ್ರತ್ಯೇಕಿಸಿ ಪರೀಕ್ಷೆ ಮಾಡುತ್ತಿದ್ದೇವೆ ಎಂದರು. 

ಈ ಹೂವುಗಳು ಸುಲಭವಾಗಿ ಹಾಳಾಗುವ ಮತ್ತು ಗಾತ್ರದಲ್ಲಿ ಚಿಕ್ಕದಾಗಿರುವ ಹೂವುಗಳಿಗೆ ಉತ್ತಮ ಬದಲಿಯಾಗಬಲ್ಲವು ಮತ್ತು ಅವುಗಳನ್ನು ಬೆಳೆಸುವ ಮೂಲಕ ರೈತರು ಉತ್ತಮ ಗಳಿಕೆ ಪಡೆಯಬಹುದು ಎನ್ನುತ್ತಾರೆ. ಆರು ಕೆಜಿ ಬೀಜಗಳು 1 ಹೆಕ್ಟೇರ್ ಭೂಮಿಯಲ್ಲಿ ಕಡಿಮೆ ಅವಧಿಯಲ್ಲಿ 1,10,000 ಸೂರ್ಯಕಾಂತಿಗಳನ್ನು ನೀಡುತ್ತವೆ. ಅವುಗಳನ್ನು ಬೆಳೆಯಲು ಮಣ್ಣಿನ ಫಲವತ್ತತೆ ಸಹ ಹೊಂದಿಕೊಳ್ಳುತ್ತದೆ -- ಕೆಂಪು ಅಥವಾ ಮಿಶ್ರಿತ ಮಣ್ಣನ್ನು ಬಳಸಬಹುದು ನಿರ್ವಹಣೆ ವೆಚ್ಚ ಕಡಿಮೆಯಾಗಿರುತ್ತದೆ. ಈ ಹೂವುಗಳು ನಗರ ಪ್ರದೇಶಗಳಲ್ಲಿ 10-15 ರೂಪಾಯಿಗಳಿರುತ್ತವೆ.

ಸೂರ್ಯಕಾಂತಿಗಳನ್ನು ಗರಿಷ್ಠ ಬೇಸಿಗೆಯನ್ನು ಹೊರತುಪಡಿಸಿ ಎಲ್ಲಾ ಋತುಗಳಲ್ಲಿ ಬೆಳೆಯಬಹುದು ಎಂದು ಡಾ ಉಮಾ ಹೇಳುತ್ತಾರೆ. ಈ ಹೊಸ ತಳಿಯನ್ನು ಈ ಬಾರಿಯ ಕೃಷಿ ಮೇಳ-2023ರಲ್ಲಿ ಪ್ರದರ್ಶಿಸಲಾಗಿದೆ. ವಿಜ್ಞಾನಿಗಳು ವಿವಿಧ ತಂತ್ರಜ್ಞಾನಗಳನ್ನು ಬಳಸಿಕೊಂಡು ಈ ಸೂರ್ಯಕಾಂತಿಗಳನ್ನು ಬೆಳೆಯಲು ರೈತರ ಮನವೊಲಿಸಲು ನೋಡುತ್ತಿದ್ದಾರೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಂಪುಟ ಸಲಹೆ ಮೇರೆಗೆ KPSC ಅಧ್ಯಕ್ಷ ಸಾಹುಕಾರ್ ರನ್ನು ಮತ್ತೆ ಅಮಾನತು ಮಾಡಿದ ರಾಜ್ಯಪಾಲರು!

ರಾಜ್ಯದಲ್ಲಿ ಮಳೆ ಅಭಾವ: ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ; 27 ಕೋಟಿ ರೂ ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

Chhattisgarh: ಹೊಲದಿಂದ ಮನೆಗೆ ಮರಳುತ್ತಿದ್ದ ಮಹಿಳೆಗೆ ಸಿಡಿಲು ಬಡಿದು ಸಾವು, Video

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!