ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಅಲಂಕಾರಿಕ ಮೀನುಗಾರಿಕೆ ಮಾರುಕಟ್ಟೆಯಿಂದ 100 ಕೋಟಿ ರೂ. ಆದಾಯ!

ಬೆಂಗಳೂರಿನಲ್ಲಿ ಅಲಂಕಾರಿಕ ಮೀನುಗಾರಿಕಾ ಮಾರುಕಟ್ಟೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರದ ಪ್ರಕಾರ, ಇದರ ಮಾಸಿಕ ಮಾರುಕಟ್ಟೆ ಆದಾಯ ಸುಮಾರು 100 ಕೋಟಿ ರೂ. ಆಗಿದೆ.

ಬೆಂಗಳೂರು: ಬೆಂಗಳೂರಿನಲ್ಲಿ ಅಲಂಕಾರಿಕ ಮೀನುಗಾರಿಕಾ ಮಾರುಕಟ್ಟೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರದ ಪ್ರಕಾರ, ಇದರ ಮಾಸಿಕ ಮಾರುಕಟ್ಟೆ ಆದಾಯ ಸುಮಾರು 100 ಕೋಟಿ ರೂ. ಆಗಿದೆ.

ಈ ಕುರಿತು ಮಾತನಾಡಿದ ಕರ್ನಾಟಕ ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದ (ಕೆಎಎಫ್‌ಎಸ್‌ಯು) ಮೀನುಗಾರಿಕಾ ವಿಜ್ಞಾನಿ ಡಾ. ಎನ್. ಚೇತನ್, ಈ ಹಿಂದೆ ಮೀನುಗಾರಿಕೆ ವ್ಯಾಪಾರ ಅಲ್ಲಲ್ಲಿ ನಡೆಯುತ್ತಿತ್ತು, ಆದರೆ, ಕಳೆದ ಐದು ವರ್ಷಗಳಲ್ಲಿ ವ್ಯಾಪಾರದಲ್ಲಿ ಶೇ. 15 ರಿಂದ 20 ರಷ್ಟು ಏರಿಕೆಯಾಗಿದೆ. ನಗರದಲ್ಲಿ ಸುಮಾರು 2,500 ಚಿಲ್ಲರೆ ಅಂಗಡಿಗಳು ಲಾಭದಾಯಕ ವ್ಯಾಪಾರ ನಡೆಸುತ್ತಿವೆ ಎಂದು ಹೇಳಿದರು. 

ಕೆಎಎಫ್ ಎಸ್ ಯು ಇತ್ತೀಚೆಗೆ ನಗರದಲ್ಲಿ ಆಯೋಜಿಸಲಾದ ಕೃಷಿ ಮೇಳ 2023 ರಲ್ಲಿ ಗೋಲ್ಡ್ ಫಿಶ್, ಗಪ್ಪಿ, ಸ್ವೋರ್ಡ್ ಟೇಲ್, ಮೊಲಿ ಮತ್ತು ವಿಡೋ ಟೆಟ್ರಾಸ್‌ನಂತಹ ಮೀನುಗಳನ್ನು ಪ್ರದರ್ಶಿಸಲಾಯಿತು. ಗೋಲ್ಡ್ ಫಿಶ್ ಹೆಚ್ಚು ಮಾರಾಟವಾದ ಅಲಂಕಾರಿಕ ಮೀನುಗಳಲ್ಲಿ ಮೊದಲ ಸ್ಥಾನದಲ್ಲಿದ್ದರೆ ಗಪ್ಪಿ ನಂತರದ ಸ್ಥಾನದಲ್ಲಿದೆ ಎಂದು ಡಾ ಚೇತನ್ ಹೇಳಿದರು. ಮೇಳ ಪ್ರಾರಂಭವಾದ ಒಂದು ದಿನದೊಳಗೆ ಸುಮಾರು 800 ಸಣ್ಣ ಮೀನುಗಳನ್ನು ಅವರು ಮಾರಾಟ ಮಾಡಿದ್ದಾರೆ. 

ಈಗ ಖಾದ್ಯ ಮತ್ತು ಅಲಂಕಾರಿಕ ಮೀನುಗಳ ಮೀನುಗಾರಿಕೆ ವ್ಯವಹಾರ ಹೆಚ್ಚು ಸುವ್ಯವಸ್ಥಿತವಾಗಿದೆ ಮತ್ತು ರೈತರು ಮೀನುಗಾರಿಕೆಯನ್ನು ಪರ್ಯಾಯ ಆದಾಯದ ಮೂಲವಾಗಿ ಅಳವಡಿಸಿಕೊಳ್ಳುತ್ತಿದ್ದಾರೆ.

ರಾಜ್ಯ ಮೀನುಗಾರಿಕಾ ಇಲಾಖೆಯು ಉತ್ತಮವಾದ ಮೀನುಗಾರಿಕೆ ವ್ಯವಹಾರವನ್ನು ಹೊಂದಿರುವ ತಮಿಳುನಾಡು ಮತ್ತು ಪಶ್ಚಿಮ ಬಂಗಾಳಕ್ಕೆ ಸಮನಾಗಿ ಕರ್ನಾಟಕವನ್ನು ತರಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. 50 ರೈತರಿಗೆ ಅಲಂಕಾರಿಕ ಮೀನು ವ್ಯಾಪಾರದ ಬಗ್ಗೆ ಶಿಕ್ಷಣ ನೀಡಲು, ಅವರ ಜಮೀನಿನಲ್ಲಿ ಸಣ್ಣ ಕೆರೆ ವ್ಯವಸ್ಥೆ, ಮೀನುಗಳ ಸಂತಾನೋತ್ಪತ್ತಿಗೆ ಸೂಕ್ತವಾದ ವಾತಾವರಣವನ್ನು ಸೃಷ್ಟಿಸಲು ಮತ್ತು ಸೂಕ್ತವಾದ ಸಾಧನಗಳನ್ನು ಬಳಸಲು ಅರಿವು ಮೂಡಿಸುವ ನಿಟ್ಟಿನಲ್ಲಿ ಇತ್ತೀಚೆಗೆ  ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಷ್ಯಾದಿಂದ ತೈಲ ಖರೀದಿಗೆ ಭಾರತಕ್ಕೆ ಶೇ.500ರಷ್ಟು ಸುಂಕ ಶಿಕ್ಷೆ: ಮಸೂದೆಗೆ Donald Trump ಗ್ರೀನ್ ಸಿಗ್ನಲ್!

ರಾಜ್ಯದಲ್ಲಿ ತೀವ್ರ ಚಳಿ: ಮುಂದಿನ ಏಳು ದಿನ ಉತ್ತರ ಒಳನಾಡಿನಲ್ಲಿ ಮತ್ತಷ್ಟು ಚಳಿ, ದಕ್ಷಿಣ ಒಳನಾಡಿನಲ್ಲಿ ಮಳೆ ನಿರೀಕ್ಷೆ!

ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸೋಕೆ ಡಿ.ಕೆ. ಶಿವಕುಮಾರ್‌ ಯಾರು? ರಾಜ್ಯದಲ್ಲಿ ಇರೋದು ಹೆಬ್ಬೆಟ್ಟು ಗೃಹ ಸಚಿವರಾ?

ಹಿರಿಯ ಪರಿಸರ ವಿಜ್ಞಾನಿ ಡಾ. ಮಾಧವ ಗಾಡ್ಗೀಳ್ ನಿಧನ!

ಕೋಗಿಲು ವಿವಾದ: ಅಕ್ರಮ ಮನೆ ನಿರ್ಮಾಣ ಆರೋಪ, ನಾಲ್ವರ ವಿರುದ್ಧ FIR ದಾಖಲು!

SCROLL FOR NEXT