ಪೆಡಲ್ ಟು ಮೆಟ್ರೋ ಅಭಿಯಾನ 
ರಾಜ್ಯ

ಉತ್ತಮ ಆರೋಗ್ಯಕ್ಕಾಗಿ ಪೆಡಲ್ ಟು ಮೆಟ್ರೋ ಅಭಿಯಾನ

ಮೆಟ್ರೋ ನಿಲ್ದಾಣಗಳಿಗೆ ತಲುಪುವುದಕ್ಕೆ ಸೈಕಲ್ ಬಳಕೆಯನ್ನು ಉತ್ತೇಜಿಸುವುದಕ್ಕೆ ನಗರದಲ್ಲಿ ಪೆಡಲ್ ಟು ಮೆಟ್ರೋ ಅಭಿಯಾನವನ್ನು ಆಯೋಜಿಸಲಾಗಿತ್ತು.

ಬೆಂಗಳೂರು: ಮೆಟ್ರೋ ನಿಲ್ದಾಣಗಳಿಗೆ ತಲುಪುವುದಕ್ಕೆ ಸೈಕಲ್ ಬಳಕೆಯನ್ನು ಉತ್ತೇಜಿಸುವುದಕ್ಕೆ ನಗರದಲ್ಲಿ ಪೆಡಲ್ ಟು ಮೆಟ್ರೋ ಅಭಿಯಾನವನ್ನು ಆಯೋಜಿಸಲಾಗಿತ್ತು. 

ಕೌನ್ಸಿಲ್ ಫಾರ್ ಆಕ್ಟೀವ್ ಮೊಬಿಲಿಟಿ (ಸಿಎಫ್ಎಎಂ) ವರ್ಲ್ಡ್ ರಿಸೋರ್ಸಸ್ ಇನ್ಸ್ಟಿಟ್ಯೂಟ್ (ಡಬ್ಲ್ಯುಆರ್ ಐ), ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ ( ಬಿಎಎಫ್) ಸಹಯೋಗದಲ್ಲಿ  ಯೆಲಚೇನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
 
ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಸಂಪರ್ಕ ಕಲ್ಪಿಸಲು ನಗರ ಭೂ ಸಾರಿಗೆ ನಿರ್ದೇಶನಾಲಯ (ಡಿಯುಎಲ್ ಟಿ) 9 ಮೆಟ್ರೋ ನಿಲ್ದಾಣಗಳಲ್ಲಿ 200 ಸೈಕಲ್ ಸ್ಟ್ಯಾಂಡ್ ಗಳನ್ನು ಹೊಂದಿದೆ. ಬಿಎಂಟಿಸಿಯಲ್ಲಿ ಹಾಗೂ ಸಾರಿಗೆ ನಿರ್ವಹಣಾ ಕೇಂದ್ರಗಳಲ್ಲಿ 11 ಸೈಕಲ್ ಸ್ಟ್ಯಾಂಡ್ ಗಳನ್ನು ಹೊಂದಿದೆ.

ಬೈಸಿಕಲ್ ಪಾರ್ಕಿಂಗ್ ಸೌಲಭ್ಯಗಳ ಬಗ್ಗೆ ಈ ಅಭಿಯಾನದ ಮೂಲಕ ಜನರಿಗೆ ಅರಿವು ಮೂಡಿಸಲಾಗುತ್ತದೆ. ಈ  ಅಭಿಯಾನದಲ್ಲಿ ದಕ್ಷಿಣ ಬೆಂಗಳೂರಿನ ನಿವಾಸಿಗಳು ಉತ್ಸಾಹದಿಂದ ಭಾಗವಹಿಸಿದರು.

ಸಸ್ಟೈನಬಲ್ ಮೊಬಿಲಿಟಿ ನೆಟ್‌ವರ್ಕ್ (SMN) ನಕ್ಷೆ ಯೋಜನೆಯಿಂದ ಬೆಂಬಲಿತವಾದ ಈ ಉಪಕ್ರಮ ಸಕ್ರಿಯ ಚಲನಶೀಲತೆಯ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವತ್ತ ಗಮನಹರಿಸಿದೆ, ನಿರ್ದಿಷ್ಟವಾಗಿ ಮೋಟಾರು ಸಾರಿಗೆಗೆ ಪರ್ಯಾಯವಾಗಿ ವಾಕಿಂಗ್ ಮತ್ತು ಸೈಕ್ಲಿಂಗ್ ನ್ನು ಈ ಯೋಜನೆ ಹೊಂದಿದೆ ಎಂದು ಡಬ್ಲ್ಯುಆರ್ ಐ ಇಂಡಿಯಾದ ಸಹವರ್ತಿ ಶ್ರೀನಿವಾಸ್ ಅಲವಿಲ್ಲಿ ಹೇಳಿದರು.

ಅಭಿಯಾನದಲ್ಲಿ ಭಾಗಿಯಾದವರು ಯಲಚೇನಹಳ್ಳಿ ಮೆಟ್ರೋ ನಿಲ್ದಾಣದ ಸುಮಾರು 5 ಕಿಮೀ ವ್ಯಾಪ್ತಿಯಲ್ಲಿ ತಮ್ಮ ಮನೆಗಳಿಂದ ಸೈಕಲ್ ಸವಾರಿ ಮಾಡಿದರು ಮತ್ತು ತಮ್ಮ ರೈಡ್ ಟ್ರ್ಯಾಕ್ ಮಾಡಲು ಹವಾಮಾನ AltMo ನ್ನು ಬಳಸಿದರು. ಭಾಗವಹಿಸುವವರು ಒದಗಿಸಿದ ಸವಾರಿ ಮಾರ್ಗಗಳನ್ನು ಎಸ್ಎಂಎನ್ ನಕ್ಷೆಗೆ ಸೇರಿಸಲಾಗಿದ್ದು, ಇದು ಮೊದಲ ಮತ್ತು ಕೊನೆಯ ಹಂತದ ಮೆಟ್ರೋ ಸಂಪರ್ಕಕ್ಕಾಗಿ ಸುರಕ್ಷಿತ ಮತ್ತು ಪರ್ಯಾಯ ಮಾರ್ಗಗಳ ಮೌಲ್ಯಯುತ ಮಾಹಿತಿ ನೀಡಲಿದೆ. 

ಬೆಂಗಳೂರಿನ ಬೈಸಿಕಲ್ ಮೇಯರ್ ಮತ್ತು ಸಿಎಫ್‌ಎಎಂ ಸಂಸ್ಥಾಪಕ ಸತ್ಯ ಶಂಕರನ್ ಮಾತನಾಡಿ, “ಬೈಸಿಕಲ್ ಕಡಿಮೆ ವೆಚ್ಚದ ಹೂಡಿಕೆಯಾಗಿದ್ದು ಇತರ ಯಾವುದೇ ಸಾರಿಗೆ ವಿಧಾನಗಳಿಗೆ ಆರೋಗ್ಯಕರ ಪರ್ಯಾಯವಾಗಿದೆ, ವಿಶೇಷವಾಗಿ ನಡೆದು ಹೋಗುವ ದೂರವನ್ನು ಮೀರಿದ ವ್ಯಾಪ್ತಿಯಲ್ಲಿರುವ ಸಾರ್ವಜನಿಕ ಸಾರಿಗೆ ಸೇವೆಗಳನ್ನು ತಲುಪಲು ಸಹಕಾರಿಯಾಗಿರಲಿದೆ. ಈ ಅಭಿಯಾನವು ನಿಲ್ದಾಣಗಳನ್ನು ತಲುಪಲು ಸುರಕ್ಷಿತ ಮಾರ್ಗಗಳನ್ನು ಕಂಡುಹಿಡಿಯಲು ಜನರಿಗೆ ಅನುವು ಮಾಡಿಕೊಡುವ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

SCROLL FOR NEXT