ರೈಲ್ವೇ ಯೋಜನೆಗಳ ಪರಿಶೀಲನೆ ನಡೆಸುತ್ತಿರುವ ರೂಪ್ ನಾರಾಯಣ ಸುಂಕರ್. 
ರಾಜ್ಯ

ರೈಲ್ವೇ ಮಂಡಳಿ ಅಧಿಕಾರಿಗಳಿಂದ ಬೆಂಗಳೂರು ಉಪನಗರ ರೈಲು ಯೋಜನೆ ಸೇರಿ ಹಲವು ಯೋಜನೆಗಳ ಪರಿಶೀಲನೆ

ಬೆಂಗಳೂರು ಉಪನಗರ ರೈಲು ಯೋಜನೆ ಸೇರಿದಂತೆ ನಗರದ ಇತರೆ ರೈಲ್ವೇ ಯೋಜನೆಗಳನ್ನು ರೈಲ್ವೆ ಮಂಡಳಿಯ ಸದಸ್ಯರಾದ  (ಮೂಲಸೌಕರ್ಯ) ರೂಪ್ ನಾರಾಯಣ ಸುಂಕರ್ ಅವರು ಶುಕ್ರವಾರ ಪರಿಶೀಲನೆ ನಡೆಸಿದರು.

ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆ ಸೇರಿದಂತೆ ನಗರದ ಇತರೆ ರೈಲ್ವೇ ಯೋಜನೆಗಳನ್ನು ರೈಲ್ವೆ ಮಂಡಳಿಯ ಸದಸ್ಯರಾದ  (ಮೂಲಸೌಕರ್ಯ) ರೂಪ್ ನಾರಾಯಣ ಸುಂಕರ್ ಅವರು ಶುಕ್ರವಾರ ಪರಿಶೀಲನೆ ನಡೆಸಿದರು.

ಯೋಜನೆಗಳಿಗೆ ಅಗತ್ಯವಿರುವ ನಿರ್ದಿಷ್ಠ ಭೂ ಲಭ್ಯತೆ ಸಮಸ್ಯೆಗಳ ಪರಿಹರಿಸುವಂತೆ ಬೆಂಗಳೂರು ರೈಲ್ವೇ ವಿಭಾಗ ಮತ್ತು ಉಪನಗರ ರೈಲು ಯೋಜನೆಯ ಕಾಮಗಾರಿ ನಡೆಸುತ್ತಿರುವ ನೋಡಲ್ ಏಜೆನ್ಸಿ ಗಳಿಗೆ ಸೂಚಿಸಲಾಗಿದೆ. ಉಪನಗರ ಯೋಜನೆಯ ಮಾರ್ಗದಲ್ಲಿ 11 ರೈಲ್ವೆ ಕ್ರಾಸಿಂಗ್‌ಗಳಿವೆ. ಕೆಳಸೇತುವೆಗಳನ್ನು ನಿರ್ಮಿಸುವ ಮೂಲಕ ಅವುಗಳನ್ನು ತೆಗೆಯಬೇಕಿದೆ. ರೈಲುಗಳು ಅಡೆತಡೆಗಳಿಲ್ಲದೆ ನಿಯಮಿತವಾಗಿ ಸಂಚರಿಸಲಿದ್ದು, ಈ ಕಾರ್ಯ ವಿಳಂಬವಾಗುವ ಸಾಧ್ಯತೆಗಳಿವೆ. ಲೆವೆಲ್ ಕ್ರಾಸಿಂಗ್ ಅನ್ನು ಸಹ ಬದಲಾಯಿಸಬೇಕಾಗಿದೆ ಎಂದು ರೂಪ್ ನಾರಾಯಣ ಸುಂಕರ್ ಅವರು ಹೇಳಿದ್ದಾರೆ.

ಇದೇ ವೇಳೆ ರೈಲ್ವೇ ಮಂಡಳಿ ಸದಸ್ಯರು ಪುನರಾಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಕಂಟೋನ್ಮೆಂಟ್ ಮತ್ತು ಯಶವಂತಪುರ ನಿಲ್ದಾಣಗಳನ್ನೂ ಪರಿಶೀಲಿಸಿದರು.

ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದ ಕುರಿತು ಮಾತನಾಡಿದ ಸುಂಕರ್ ಅವರು, ಕಾಮಗಾರಿ ಕಾರ್ಯಕ್ರಮಗಳು ಪ್ರಗತಿಯಲ್ಲಿದೆ. ಡಿಸೆಂಬರ್ 2026 ರೊಳಗೆ ಈ ಕಾರ್ಯ ಪೂರ್ಣಗೊಳ್ಳಲಿದೆ. ಯಶವಂತಪುರ ರೈಲು ನಿಲ್ದಾಣದಲ್ಲಿ ಕೆಲವು ಅಡೆತಡೆಗಳು ಇದ್ದು, ಅವುಗಳು ಇದೀಗ ದೂರಾಗಿವೆ ಎಂದು ತಿಳಿಸಿದರು.

ಯೋಜನೆಗಳ ಪರಿಶೀಲನೆ ಬಳಿಕ ಉನ್ನತ ರೈಲ್ವೇ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಸುಂಕರ್ ಅವರು, ಸುರಕ್ಷತೆಗೆ ಒತ್ತು ನೀಡುವ ಮೂಲಕ ಅಗತ್ಯವಿರುವ ಮೂಲಸೌಕರ್ಯಗಳ ಒದಗಿಸಲು ಎಲ್ಲಾ ಇಲಾಖೆಗಳು ಒಟ್ಟಾಗಿ ಕೆಲಸ ಮಾಡಬೇಕೆಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Red Fort blast: ಉಗ್ರ ಉಮರ್‌ಗೆ ಆಶ್ರಯ ನೀಡಿದ್ದ ಆರೋಪಿ ಬಂಧನ, NIA ವಿಚಾರಣೆ

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

SCROLL FOR NEXT