ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಮಾನ 
ರಾಜ್ಯ

ಹಮಾಸ್ ದಾಳಿಗೂ ಕೆಲವು ಗಂಟೆ ಮುನ್ನ ಬೆಂಗಳೂರಿನ ಮಹಿಳೆ ಏರ್ ಲಿಫ್ಟ್!

ಹಮಾಸ್ ದಾಳಿಗೂ ಕೆಲವು ಗಂಟೆ ಮುನ್ನಾ ವಿಶೇಷ ಚಿಕಿತ್ಸೆಗಾಗಿ ಇಸ್ರೇಲ್‌ಗೆ ತೆರಳಿದ್ದ 50ರ ಹರೆಯದ ಮಹಿಳೆ ಹಾಗೂ ಆಕೆಯ ಪತಿಯನ್ನು ಟೆಲ್‌ ಅವೀವ್‌ನಿಂದ ಬೆಂಗಳೂರಿಗೆ ವಿಶೇಷ ವೈದ್ಯಕೀಯ ಸೌಲಭ್ಯವಿರುವ ವಿಶೇಷ ವಿಮಾನದ ಮೂಲಕ ಬೆಂಗಳೂರು ಮೂಲದ ಇಂಟರ್‌ನ್ಯಾಶನಲ್‌ ಕ್ರಿಟಿಕಲ್‌ ಕೇರ್‌ ಏರ್‌ ಟ್ರಾನ್ಸ್‌ಫರ್‌ ಟೀಮ್‌ (ಐಸಿಎಟಿಟಿ) ಕರೆತಂದಿದೆ. 

ಬೆಂಗಳೂರು: ಹಮಾಸ್ ದಾಳಿಗೂ ಕೆಲವು ಗಂಟೆ ಮುನ್ನಾ ವಿಶೇಷ ಚಿಕಿತ್ಸೆಗಾಗಿ ಇಸ್ರೇಲ್‌ಗೆ ತೆರಳಿದ್ದ 50ರ ಹರೆಯದ ಮಹಿಳೆ ಹಾಗೂ ಆಕೆಯ ಪತಿಯನ್ನು ಟೆಲ್‌ ಅವೀವ್‌ನಿಂದ ಬೆಂಗಳೂರಿಗೆ ವಿಶೇಷ ವೈದ್ಯಕೀಯ ಸೌಲಭ್ಯವಿರುವ ವಿಶೇಷ ವಿಮಾನದ ಮೂಲಕ ಬೆಂಗಳೂರು ಮೂಲದ ಇಂಟರ್‌ನ್ಯಾಶನಲ್‌ ಕ್ರಿಟಿಕಲ್‌ ಕೇರ್‌ ಏರ್‌ ಟ್ರಾನ್ಸ್‌ಫರ್‌ ಟೀಮ್‌ (ಐಸಿಎಟಿಟಿ) ಕರೆತಂದಿದೆ. 

ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಯಲಹಂಕ ಮೂಲದ ಐಸಿಎಟಿಟಿಯ ಇಬ್ಬರು ಸಹ ಸಂಸ್ಥಾಪಕರು ಮಾಹಿತಿ ಹಂಚಿಕೊಂಡಿದ್ದಾರೆ. ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ಅವರ ಕುಟುಂಬದಿಂದ ನಮಗೆ ಕರೆ ಬಂದ ತಕ್ಷಣ, ನಮ್ಮ ತಂಡ ಆಕೆಯನ್ನು ಬೆಂಗಳೂರಿಗೆ ಕರೆತರುವ ಮಾರ್ಗ ಮತ್ತು ವಾಯುಪ್ರದೇಶಕ್ಕೆ ಸಂಬಂಧಿಸಿದ ಅಗತ್ಯ ಅನುಮತಿ ಪಡೆಯಿತು. ಏರ್ ಆಂಬ್ಯುಲೆನ್ಸ್‌ಗೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ಉಪಕರಣಗಳನ್ನು ಸಿದ್ಧವಾಗಿ ಇರಿಸಲಾಗಿತ್ತು. ಸಿಬ್ಬಂದಿಯೊಂದಿಗೆ ಬೆಳಗಿನ ವಿಮಾನದಿಂದ ಅವರನ್ನು ಕಳುಹಿಸಲಾಯಿತು ಎಂದು ಡಾ. ಶಾಲಿನಿ ನಲ್ವಾಡ್ ತಿಳಿಸಿದರು. 

ಮುಖ್ಯ ವೈದ್ಯಕೀಯ ಅಧಿಕಾರಿ ಡಾ ರಾಮಚಂದ್ರ ರೆಡ್ಡಿ ಮತ್ತು ನಮ್ಮ ಮುಖ್ಯ ಪ್ಯಾರಾಮೆಡಿಕ್ ರತ್ನಾಕರ್ ರೇವೂರಿಗೆ ಇಸ್ರೇಲ್‌ನಲ್ಲಿರುವ ಡೆಪ್ಯುಟಿ ಹೈಕಮಿಷನ್ ಮೂಲಕ ವಿಶೇಷ ಏರೋ ಮೆಡಿಕಲ್ ವೀಸಾ ಪಡೆಯಲಾಯಿತು. 
ಇದನ್ನು ಕೇವಲ ಮೂರು ಗಂಟೆಗಳಲ್ಲಿ ಮಾಡಲಾಯಿತು ಎಂದು ಡಾ. ರಾಹುಲ್ ಸಿಂಗ್ ಸರ್ದಾರ್ ಮಾಹಿತಿ ನೀಡಿದರು. 

ಮಹಿಳೆ ಬೆಂಗಳೂರಿನಿಂದ ಹೊರಡಬೇಕಿತ್ತು ಆದರೆ ಅವರ ತುರ್ತು ವಿಮಾನದಲ್ಲಿ ಕೆಲವು ತಾಂತ್ರಿಕ ಸಮಸ್ಯೆ ಇತ್ತು. ಅದಕ್ಕಾಗಿ ಅವರನ್ನು ಗೋವಾಕ್ಕೆ ಕರೆದೊಯ್ದು ಅಲ್ಲಿಂದ ಮತ್ತೊಂದು ವಿಮಾನದಲ್ಲಿ ಅಬುಧಾಬಿಗೆ ತೆರಳಿದ್ದರು. ಅಕ್ಟೋಬರ್ 5 ರಂದು ವಿಮಾನ ಟೆಲ್ ಅವೀವ್ ತಲುಪಿತು. ಅಲ್ಲಿ ನಮ್ಮ ಸಿಬ್ಬಂದಿ ಆಕೆಯ ಆರೋಗ್ಯವನ್ನು ಸ್ಥಿರಗೊಳಿಸಿ, ಅಕ್ಟೋಬರ್ 6 ರಂದು ಬೆಂಗಳೂರಿಗೆ ಕರೆ ತಂದರು. ನಂತರ ಅವರನ್ನು ಲ್ಯಾಂಡ್ ಆಂಬ್ಯುಲೆನ್ಸ್ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ದಿತು ಎಂದು ಅವರು ವಿವರಿಸಿದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

BJPಗೆ ಒಂದು ಅವಕಾಶ ಕೊಡಿ, ಬಂಗಾಳದಲ್ಲಿ ಭ್ರಷ್ಟಾಚಾರ, ಒಳನುಸುಳುವಿಕೆ ಕೊನೆಗೊಳಿಸುತ್ತೇವೆ: ಅಮಿತ್ ಶಾ ಮನವಿ

ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಐದು ದುಬಾರಿ ಕಾರುಗಳು, ಲಕ್ಸುರಿ ಜೀವನ: ಅನೇಕ 'ಕ್ರಿಮಿನಲ್ ಕೇಸ್' ಗಳು! ED ದಾಳಿ, ಯಾರಿದು ರಾವ್ ಇಂದರ್ ಜೀತ್ ಯಾದವ್? Video

HAL ನಿರ್ಮಿತ 'ಧ್ರುವ್ ಎನ್‌ಜಿ' ಹೆಲಿಕಾಪ್ಟರ್‌ಗೆ ಸಚಿವ ರಾಮ್ ಮೋಹನ್ ನಾಯ್ಡು ಹಸಿರು ನಿಶಾನೆ

ಬಂಟ್ವಾಳ ಟೋಲ್ ಪ್ಲಾಜಾ ಸಿಬ್ಬಂದಿ ಮೇಲೆ ಹಲ್ಲೆ; ಇಬ್ಬರ ಬಂಧನ

SCROLL FOR NEXT