ದಸರಾ ಆಹಾರೋತ್ಸವದಲ್ಲಿ ಆದಿವಾಸಿಗಳಿಗೆ ಜಾಗವಿಲ್ಲ 
ರಾಜ್ಯ

ಮೈಸೂರು ದಸರಾ: ದಸರಾ ಆಹಾರೋತ್ಸವದಲ್ಲಿ ಆದಿವಾಸಿಗಳಿಗೆ ಜಾಗವಿಲ್ಲ!!, ಆಯುಕ್ತರಿಂದಲೇ ಶೆಡ್ ಧ್ವಂಸ ಬೆದರಿಕೆ?

ದಸರಾ ಆಹಾರೋತ್ಸವದಲ್ಲಿ ಇಷ್ಟು ವರ್ಷ ರುಚಿಕರವಾದ ಬಿದಿರಿನ ಬ್ಯಾಂಬೂ ಬಿರಿಯಾನಿ ಬಡಿಸಿ ಜನಮನ ಗೆದ್ದಿದ್ದ ಗಿರಿಜನರಿಗೆ ಈ ಬಾರಿ ಆಹಾರ ಸಮಿತಿ ಅನುಮತಿ ನಿರಾಕರಿಸಿದೆ.

ಮೈಸೂರು: ದಸರಾ ಆಹಾರೋತ್ಸವದಲ್ಲಿ ಇಷ್ಟು ವರ್ಷ ರುಚಿಕರವಾದ ಬಿದಿರಿನ ಬ್ಯಾಂಬೂ ಬಿರಿಯಾನಿ ಬಡಿಸಿ ಜನಮನ ಗೆದ್ದಿದ್ದ ಗಿರಿಜನರಿಗೆ ಈ ಬಾರಿ ಆಹಾರ ಸಮಿತಿ ಅನುಮತಿ ನಿರಾಕರಿಸಿದೆ.

ಹೌದು.. 12 ಹಾಡಿಗಳ ಆದಿವಾಸಿಗಳು ಮಳೆ ಕೊರತೆಯಿಂದಾಗಿ ಎಸ್ಟೇಟ್‌ಗಳಲ್ಲಿ ಕೆಲಸದಿಂದ ವಂಚಿತರಾದ ಕಾರಣ ಸ್ವಲ್ಪ ಹಣವನ್ನು ಸಂಪಾದಿಸಲು ಇಲ್ಲಿನ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಆಹಾರ ಮೇಳದಲ್ಲಿ ಬಿದಿರಿನ ಬ್ಯಾಂಬೂ ಬಿರಿಯಾನಿ ಅಂಗಡಿ ಹಾಕಿಕೊಂಡಿದ್ದರು. ಆದರೆ ಅಧಿಕಾರಿಗಳು ತಮ್ಮ ಸ್ಟಾಲ್ ಅನ್ನು ಬುಲ್ಡೋಜರ್ ಮೂಲಕ ಧ್ವಂಸ ಮಾಡಿ ಅವರ ವಿರುದ್ಧ ಪೊಲೀಸ್ ದೂರು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಮೈಸೂರು ದಸರಾ ಆಹಾರೋತ್ಸವದ ವಿಶೇಷ ಅಧಿಕಾರಿ ಕೂಡ ಆಗಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಈ ಬೆದರಿಕೆ ಹಾಕಿದ್ದಾರೆ ಎಂದು ಆದಿವಾಸಿ ಮುಖಂಡ ಹಾಗೂ ಪ್ರಕೃತಿ ಆದಿವಾಸಿ ಫೌಂಡೇಶನ್ ಟ್ರಸ್ಟ್ ನ ಮುಖ್ಯಸ್ಥ ಎಂ ಕೃಷ್ಣಯ್ಯ ಹೇಳಿದ್ದಾರೆ. ಆಯುಕ್ತರು ಮೈದಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತಮ್ಮ ಶೆಡ್ ಗಳು ಅನಧಿಕೃತ. ಇಲ್ಲಿ ಶೆಡ್ ಹಾಕಲು ಜಿಲ್ಲಾಡಳಿತದ ಅನುಮತಿ ಪಡೆಯಬೇಕು. ಕೂಡಲೇ ಶೆಡ್ ತೆರವು ಮಾಡಿ. ಇಲ್ಲವಾದಲ್ಲಿ ನಾವೇ ಶೆಡ್ ತೆರವು ಮಾಡಿ ನಿಮ್ಮ ವಿರುದ್ಧ ಎಫ್ ಐಆರ್ ದಾಖಲಿಸುತ್ತೇವೆ ಎಂದು ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ.

ತಾವು ಇಲ್ಲಿ ಸುಮಾರು 8 ವರ್ಷಗಳಿಂದ ಆಹಾರ ಮೇಳದಲ್ಲಿ ಭಾಗವಹಿಸುತ್ತಿದ್ದೇವೆ. ಈ ಹಿಂದೆ ಇದ್ದ ಡಿಡಿ ರಾಮೇಶ್ವರ ಅವರು ಆಹಾರಮೇಳದಲ್ಲಿ ಪಾಲ್ಗೊಳ್ಳಲು ಯಾವುದೇ ಅನುಮತಿ ಬೇಕಿಲ್ಲ. ಇದು ಆದಿವಾಸಿಗಳಿಗಾಗಿಯೇ ಇರುವ ಆಹಾರ ಮೇಳ. ಆಲದ ಮರದ ಬಳಿ ಶೆಡ್ ಹಾಕಿಕೊಂಡು ನೀವು ಅಂಗಡಿ ಮಾಡಿಕೊಳ್ಳಿ ಎಂದು ಹೇಳಿದ್ದರು. ಅಂದಿನಿಂದ ಇಂದಿನವರೆಗೂ ನಾವು ಯಾವುದೇ ಅನುಮತಿ ಇಲ್ಲದೇ ಶೆಡ್ ಹಾಕಿಕೊಳ್ಳುತ್ತಿದ್ದೆವು. ಈ ವರ್ಷವೂ ಅಂತೆಯೇ ಶೆಡ್ ಹಾಕಿದ್ದೇವೆ. ಇದಕ್ಕಾಗಿ ಸುಮಾರು 3 ರಿಂದ 4 ಲಕ್ಷ ರೂ ಬಂಡವಾಳ ಹೂಡಿದ್ದೇವೆ. ಆದರೆ ಆಯುಕ್ತರು ಇದೀಗ ಏಕಾಏಕಿ ಶೆಡ್ ತೆರವು ಮಾಡುವಂತೆ ಹೇಳಿದ್ದಾರೆ ಎಂದು ಎಂ ಕೃಷ್ಣಯ್ಯ ಹೇಳಿದ್ದಾರೆ.

'ಹುಣಸೂರು, ಎಚ್‌ಡಿ ಕೋಟೆ, ಪಿರಿಯಾಪಟ್ಟಣ ಮತ್ತು ಕೊಡಗಿನ ಸುಮಾರು 40 ಜನ ಆದಿವಾಸಿಗಳಾಗಿದ್ದು, ಜೇನು ಕುರುಬ, ಬೆಟ್ಟ ಕುರಬ, ಸೋಲಿಗ, ಯರವ ಮತ್ತು ಡುಂಗ್ರಿ ಗ್ರಾಸಿಯಾಗೆ ಸೇರಿದವರಾಗಿದ್ದು, ಇಷ್ಟು ವರ್ಷ ಕೇವಲ ಮೌಖಿಕ ಅನುಮತಿ ಪಡೆದು ಶೆಡ್‌ ಹಾಕುತ್ತಿದ್ದೆವು. ಆದರೆ ಈಗ ಅವರಿಗೆ ಅನುಮತಿ ಪತ್ರ ಬೇಕು ಮತ್ತು ನಮ್ಮ ಶೆಡ್ ಅನ್ನು ನೆಲಸಮ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ, ಅನುಮತಿ ಪಡೆಯಲು ನಾವು ಭರಿಸಲಾಗದ 1 ಲಕ್ಷ ರೂಪಾಯಿಗಳನ್ನು ನೀಡಬೇಕು, ನಾವು ಶೆಡ್ ಅನ್ನು ಸ್ಥಾಪಿಸಲು ಸಾಕಷ್ಟು ಹಣವನ್ನು ಹೂಡಿಕೆ ಮಾಡಿದ್ದೇವೆ. ನಾವು ಕಳೆದ ವಾರ ಅದನ್ನು ನಿರ್ಮಿಸುವಾಗ ಅಧಿಕಾರಿಗಳು ನಮ್ಮನ್ನು ತಡೆಯಲಿಲ್ಲ. ಈಗ ಏಕಾಏಕಿ ತೆರವು ಮಾಡಿ ಎನ್ನುತ್ತಿದ್ದಾರೆ ಎಂದು ಹೇಳಿದರು.

ಜಿಲ್ಲಾ ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿ, ಇದೊಂದು ಸಣ್ಣ ಸಮಸ್ಯೆಯಾಗಿದ್ದು, ಬಗೆಹರಿಸುತ್ತೇವೆ ಎಂದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬೆಳಗಾವಿ: ಬೀದಿ ನಾಯಿಗಳ ಅಟ್ಟಹಾಸ, 2 ವರ್ಷದ ಬಾಲಕಿ ಮೇಲೆ ಭೀಕರ ದಾಳಿ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

SCROLL FOR NEXT