ರಾಜ್ಯ

ಹಾಸನ: ಮಗನ ಸಾವಿನಿಂದ ನೊಂದು ಕೃಷ್ಣರಾಜ ನಾಲೆಗೆ ಹಾರಿ ಪೋಷಕರು ಆತ್ಮಹತ್ಯೆ

Vishwanath S

ಹಾಸನ: ಹೆತ್ತ ಮಗನ ಸಾವಿನ ನೋವಿನಿಂದ ಹೊರಬರಲು ಸಾಧ್ಯವಾಗದೇ ಪೋಷಕರು ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಹಾಸನದಲ್ಲಿ ನಡೆದಿದೆ. 

ಹಾಸನದ ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಗ್ರಾಮದ ಬಳಿ ಕೃಷ್ಣರಾಜ ನಾಲೆಗೆ ಹಾರಿ ದಂಪತಿ ಸಾವನ್ನಪ್ಪಿದ್ದಾರೆ. ಮೃತರನ್ನು ಪಿರಿಯಾಪಟ್ಟಣ ಮೂಲದ 49 ವರ್ಷದ ರಂಗಸ್ವಾಮಿ ಮತ್ತು ಅವರ ಪತ್ನಿ 45 ವರ್ಷದ ಕನಕ ಎಂದು ಗುರುತಿಸಲಾಗಿದೆ.

ಕೆಲ ವರ್ಷದ ಹಿಂದೆ ಮಗ ಮೃತಪಟ್ಟಿದ್ದನು. ಮನಗ ಸಾವಿನ ಬಳಿಕ ದಂಪತಿ ಖಿನ್ನತೆಗೆ ಒಳಗಾಗಿದ್ದರು. ಕೊನೆಗೆ ಕಠಿಣ ನಿರ್ಧಾರ ಮಾಡಿದ್ದು ಇಬ್ಬರು ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ.

ಮೂರು ದಿನಗಳಿಂದ ದಂಪತಿ ನಾಪತ್ತೆಯಾಗಿದ್ದರು. ಇನ್ನು ಅವರ ಬೈಕ್ ನಾಲೆಯ ಬಳಿ ಮೂರು ದಿನಗಳಿಂದ ನಿಂತಿದ್ದನ್ನು ಸ್ಥಳೀಯರು ಗಮನಿಸಿದ್ದಾರೆ. ನಂತರ ನಾಲೆಯಲ್ಲಿ ಹುಡುಕಾಟ ನಡೆಸಿದ ಬಳಿಕ ಅವರ ಮೃತದೇಹಗಳು ಪತ್ತೆಯಾಗಿದೆ.

ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.‌

SCROLL FOR NEXT