ಸಾಂದರ್ಭಿಕ ಚಿತ್ರ 
ರಾಜ್ಯ

ಬೇರೆ ದೇಶಗಳಿಗೆ ಬಾಸ್ಮತಿಯೇತರ ಅಕ್ಕಿ ರಫ್ತು: ಅಕ್ಕಿ ಬೆಲೆ ಮತ್ತಷ್ಟು ಏರಿಕೆ ಸಾಧ್ಯತೆ; ಅನ್ನಭಾಗ್ಯಕ್ಕೆ ಮತ್ತಷ್ಟು ಸಮಸ್ಯೆ!

ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ್ದ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ನೀಡಲು  ರಾಜ್ಯ ಕಾಂಗ್ರೆಸ್ ಸರ್ಕಾರ ಹೆಣಗಾಡುತ್ತಿದೆ. ಆದರೆ ಇದರ ನಡುವೆ ಬೇರೆ ದೇಶಗಳಿಗೆ ಬಾಸ್ಮತಿಯೇತರ ಅಕ್ಕಿ ರಫ್ತಿಗೆ ಹಸಿರು ನಿಶಾನೆ ತೋರಿದೆ.

ಬೆಂಗಳೂರು: ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ್ದ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ನೀಡಲು  ರಾಜ್ಯ ಕಾಂಗ್ರೆಸ್ ಸರ್ಕಾರ ಹೆಣಗಾಡುತ್ತಿದೆ. ಆದರೆ ಇದರ ನಡುವೆ ಬೇರೆ ದೇಶಗಳಿಗೆ ಬಾಸ್ಮತಿಯೇತರ ಅಕ್ಕಿ ರಫ್ತಿಗೆ ಹಸಿರು ನಿಶಾನೆ ತೋರಿದೆ.

ಇದರಿಂದ ಈಗಿರುವ ದಾಸ್ತಾನಿನ ಮೇಲೆ ಒತ್ತಡ ಬೀಳುವ ಆತಂಕ ಎದುರಾಗಿದ್ದು, ಅಕ್ಕಿ ಬೆಲೆಯೂ ಹೆಚ್ಚಾಗಲಿದೆ. ಮೇ ತಿಂಗಳ ಬೆಲೆಗಳಿಗೆ ಹೋಲಿಸಿದರೆ ಈಗ ಬೆಲೆಗಳು ಈಗಾಗಲೇ ಹೆಚ್ಚಾಗಿದೆ. ಪರಿಣಾಮವಾಗಿ, ಕರ್ನಾಟಕವು ಎಫ್‌ಸಿಐ ದರದಲ್ಲಿ ಅಕ್ಕಿಯನ್ನು ಸಂಗ್ರಹಿಸಲು ಹೆಚ್ಚು ಕಷ್ಟಕರವಾಗಬಹುದು.

ಮೇ ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿಕೊಂಡಾಗಿನಿಂದ ಕರ್ನಾಟಕವು ತನ್ನ ಅನ್ನ ಭಾಗ್ಯ ಯೋಜನೆಯ ಭರವಸೆ ಈಡೇರಿಸಲು ಒಂದಲ್ಲ ಒಂದು ಅಡಚಣೆ ಎದುರಿಸುತ್ತಿದೆ. ಅಕ್ಕಿ ಸಿಗದ ಕಾರಣ ಜನರಿಗೆ ಅಕ್ಕಿಯ ಬೆಲೆಗೆ ಸಮಾನವಾದ ಹಣ ನೀಡುವುದನ್ನು ಬಿಟ್ಟು ಸರ್ಕಾರಕ್ಕೆ ಯಾವುದೇ ದಾರಿಯಿಲ್ಲದಂತಾಗಿದೆ.

ಬಾಸ್ಮತಿ ಅಲ್ಲದ ಅಕ್ಕಿಯ ರಫ್ತಿನ ಮೇಲಿನ ನಿಷೇಧವನ್ನು ತೆಗೆದುಹಾಕುವ ಬಗ್ಗೆ ಕೇಳಿದ  ಬಗ್ಗೆ ಮಾತನಾಡಿದ ಎಫ್‌ಕೆಸಿಸಿಐನ ರಮೇಶ್ ಚಂದ್ರ ಲಾಹೋಟಿ, ರಫ್ತಿಗೆ ಬೆಳೆ ಎಲ್ಲಿದೆ? ದಕ್ಷಿಣದ ದೊಡ್ಡ ಭಾಗಗಳು ಬರ ಅಥವಾ ಅರೆ-ಬರ ಪರಿಸ್ಥಿತಿಯಿಂದ ತತ್ತರಿಸುತ್ತಿವೆ. ಒಟ್ಟಾರೆ ರಾಷ್ಟ್ರೀಯ ಅಕ್ಕಿ ಉತ್ಪಾದನೆಯಲ್ಲಿ ಕರ್ನಾಟಕವು ಗಮನಾರ್ಹ ಕೊಡುಗೆಯಾಗಿದೆ, ಆದರೆ ಈ ಋತುವಿನಲ್ಲಿ ಸಾಕಷ್ಟು ಮಳೆಯಿಂದಾಗಿ, ದೊಡ್ಡ ಪ್ರದೇಶಗಳಲ್ಲಿ ಉತ್ಪಾದನೆಯಲ್ಲಿ ಕೊರತೆ ಎದುರಾಗಿದೆ.

ಅನೇಕ ಪ್ರದೇಶಗಳಲ್ಲಿ ಅಕ್ಕಿ ಉತ್ಪಾದನೆಯು ವಾರ್ಷಿಕ ಸರಾಸರಿ ಖಾರಿಫ್ ಉತ್ಪಾದನೆಯ ಕೇವಲ 50 ಪ್ರತಿಶತದಷ್ಟು ಇರುತ್ತದೆ ಎಂದು ತಜ್ಞರು ಮುನ್ಸೂಚನೆ ನೀಡಿದ್ದಾರೆ. ಮೈಸೂರಿನಿಂದ ದಾವಣಗೆರೆಯವರೆಗೆ ದಕ್ಷಿಣದ ದೊಡ್ಡ ಬೆಲ್ಟ್‌ನಲ್ಲಿ ಅಕ್ಕಿ ಉತ್ಪಾದನೆಯ ತೀವ್ರ ಕೊರತೆಯಿದೆ. ವಿಸ್ತಾರವಾದ ನೀರಾವರಿ ಸೌಲಭ್ಯ ಇರುವಲ್ಲಿ ಮಾತ್ರ ಉತ್ತಮ  ಬೆಳೆಯಾಗುತ್ತಿದೆ, ಇತರ ಸ್ಥಳಗಳಲ್ಲಿ ಬೆಳೆ ಕಳಪೆಯಾಗಿದೆ.

ಅಕ್ಕಿ ರಫ್ತು ಅಕ್ಕಿ ರಾಜತಾಂತ್ರಿಕತೆ ಬಗ್ಗೆ ಚಿಂತಿಸಬೇಕಾಗಿಲ್ಲ. ಇದು ಕೇಂದ್ರ ಸರ್ಕಾರದ ನೀತಿ ನಿರ್ಧಾರವಾಗಿದ್ದು, ಕರ್ನಾಟಕದ ಪರಿಸ್ಥಿತಿಗೆ ಸಂಬಂಧವಿಲ್ಲ. ಇವುಗಳು ಅತ್ಯಂತ ಅಗತ್ಯವಿರುವ ದೇಶಗಳೊಂದಿಗೆ ರಾಜತಾಂತ್ರಿಕತೆಗಾಗಿ  ಮಾಡುತ್ತಿರುವ ರಫ್ತುಗಳಾಗಿವೆ.

ಅಂತಹ ರಫ್ತಿಗೆ, ಮೀಸಲು ಸ್ಟಾಕ್ ಇರುತ್ತದೆ, ಸರ್ಕಾರವು ಈ ಮೀಸಲು ಸ್ಟಾಕ್ ಬಳಸುತ್ತದೆ. ಕರ್ನಾಟಕ ಸರ್ಕಾರ ಅಕ್ಕಿ ಕೊಡುವುದಾಗಿ ಭರವಸೆ ನೀಡಿದೆ ಎಂದ ಮಾತ್ರಕ್ಕೆ ಕೇಂದ್ರ ಸರ್ಕಾರ ಅಕ್ಕಿ ರಾಜತಾಂತ್ರಿಕತೆಯನ್ನು ಬಿಡುವಂತಿಲ್ಲ.  ನಾವು ಅಫ್ಘಾನಿಸ್ತಾನಕ್ಕೆ ದೊಡ್ಡ ಪ್ರಮಾಣದ ಗೋಧಿಯನ್ನು ಕಳುಹಿಸಿದ್ದೇವೆ ಏಕೆಂದರೆ ಅವರಿಗೆ ಅದು ಅಗತ್ಯವಾಗಿತ್ತು. ಅದಕ್ಕಾಗಿ ಅವರನ್ನು ದೂಷಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ವಿದೇಶಗಳಿಗೆ ಅಕ್ಕಿ ರಪ್ತು ಮಾಡುವುದರಿಂದ ಕರ್ನಾಟಕಕ್ಕೆ ಹೊರೆಯಾಗುವುದಿಲ್ಲ. ಇದು ಸರ್ಕಾರದಿಂದ ಅನುಮೋದಿತ ಮಾರ್ಗಗಳ ಮೂಲಕ ರಫ್ತು ಮಾಡಲು ಸುಮಾರು 7 ಲಕ್ಷ ಟನ್‌ಗಳ ಅತ್ಯಂತ ಸೀಮಿತ ಪ್ರಮಾಣವಾಗಿದೆ ಮತ್ತು ಹೆಚ್ಚುವರಿ 5 ಕೆಜಿ ಅಕ್ಕಿಯ ರಾಜ್ಯದ ಅಗತ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ತಜ್ಞರೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

SCROLL FOR NEXT