ಮೈಸೂರಿನಲ್ಲಿ ಭಾನುವಾರದಂದು ಆಯುಧ ಪೂಜೆ ಮತ್ತು ವಿಜಯದಶಮಿಗೆ ಮುಂಚಿತವಾಗಿ ಹೂವು ಖರೀದಿಯಲ್ಲಿ ತೊಡಗಿದ್ದ ಜನ. (ಫೋಟೋ | ಉದಯಶಂಕರ್ ಎಸ್) 
ರಾಜ್ಯ

ಆಯುಧ ಪೂಜೆ, ವಿಜಯದಶಮಿ ಹಬ್ಬಕ್ಕೆ ರಾಜ್ಯದಲ್ಲಿ ಗಗನಕ್ಕೇರಿದ ಹೂವು, ಹಣ್ಣು, ತರಕಾರಿಗಳ ಬೆಲೆ!

ಅಕ್ಟೋಬರ್ 23ರಂದು ಆಯುಧಪೂಜೆ ಮತ್ತು 24 ರಂದು ವಿಜಯದಶಮಿ ಅಂಗವಾಗಿ ರಾಜ್ಯದಲ್ಲಿ ಹಣ್ಣುಗಳು, ಹೂವುಗಳು ಮತ್ತು ತರಕಾರಿಗಳ ಬೇಡಿಕೆಯಲ್ಲಿ ಹೆಚ್ಚಳ ಕಂಡುಬಂದಿದೆ. ಇದರ ಪರಿಣಾಮವಾಗಿ ಹಬ್ಬಕ್ಕೂ ಮುನ್ನವೇ ಎಂದಿನಂತೆ ಬೆಲೆ ಏರಿಕೆಯಾಗಿದೆ. 

ಬೆಂಗಳೂರು: ಅಕ್ಟೋಬರ್ 23ರಂದು ಆಯುಧಪೂಜೆ ಮತ್ತು 24 ರಂದು ವಿಜಯದಶಮಿ ಅಂಗವಾಗಿ ರಾಜ್ಯದಲ್ಲಿ ಹಣ್ಣುಗಳು, ಹೂವುಗಳು ಮತ್ತು ತರಕಾರಿಗಳ ಬೇಡಿಕೆಯಲ್ಲಿ ಹೆಚ್ಚಳ ಕಂಡುಬಂದಿದೆ. ಇದರ ಪರಿಣಾಮವಾಗಿ ಹಬ್ಬಕ್ಕೂ ಮುನ್ನವೇ ಎಂದಿನಂತೆ ಬೆಲೆ ಏರಿಕೆಯಾಗಿದೆ. ಕೆಲವು ಹಣ್ಣುಗಳು ಮತ್ತು ಹೂವುಗಳ ಬೆಲೆಗಳು ಕಳೆದ ವಾರದಲ್ಲಿಯೇ ಎರಡು ಅಥವಾ ಮೂರು ಪಟ್ಟು ಹೆಚ್ಚಾಗಿದೆ. ಇದರಿಂದಾಗಿ ನಾಗರಿಕರು ಬೆಲೆ ಏರಿಕೆಯ ಭಾರವನ್ನು ಹೊರಬೇಕಾಗಿದೆ.

ಕರ್ನಾಟಕ ಸಣ್ಣ ಹೂ ಬೆಳೆಗಾರರ ​​ಸಂಘದ ಪ್ರಧಾನ ಕಾರ್ಯದರ್ಶಿ ಗಿರೀಶ್ ಮುಚ್ಚಾಲ್ ಮಾತನಾಡಿ, ‘ಸೇವಂತಿಗೆ, ಮಾರಿಗೋಲ್ಡ್, ಕ್ಯೂಬನ್ ಗುಲಾಬಿ ಹೂವುಗಳಿಗೆ ಬೇಡಿಕೆ ಹೆಚ್ಚಿದೆ. ಕ್ರೈಸಾಂಥೆಮಮ್ ಮತ್ತು ಮಾರಿಗೋಲ್ಡ್ ಹೂವುಗಳ ಬೆಲೆ ದ್ವಿಗುಣಗೊಂಡಿದೆ. ಆದರೆ, ಕ್ಯೂಬ್ ಗುಲಾಬಿಗಳ ಬೆಲೆ ಮೂರು ಪಟ್ಟು ಹೆಚ್ಚಾಗಿದೆ. ಇದು ಎಲ್ಲಾ ಹಬ್ಬದ ಋತುಗಳಲ್ಲಿ ನಾವು ಗಮನಿಸುವ ನಿಯಮಿತ ಪ್ರವೃತ್ತಿಯಾಗಿದೆ' ಎಂದು ಹೇಳಿದರು.

ಹಬ್ಬದ ಸೀಸನ್ ಮಾರಾಟಗಾರರಿಗೆ ಹೆಚ್ಚಿನ ವ್ಯಾಪಾರವನ್ನು ತಂದರೂ, ಜನರು ಹೆಚ್ಚಿನ ಬೆಲೆಗೆ ಹಬ್ಬದ ಅಗತ್ಯ ವಸ್ತುಗಳನ್ನು ಖರೀದಿಸಲು ಕಾರಣವಾಗುತ್ತದೆ. 

ಮಲ್ಲೇಶ್ವರಂ ನಿವಾಸಿ ಉಮೇಶ್ ರಾಥೋಡ್ ಮಾತನಾಡಿ, 'ಬೆಲೆ ಏರಿಕೆಯಾಗಿದ್ದರೂ, ನಾವು ಅಗತ್ಯ ವಸ್ತುಗಳನ್ನು ಅವರು ಸೂಚಿಸಿದ ಬೆಲೆಗೆ ಖರೀದಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಪ್ರತಿ ಹಬ್ಬದ ಸಮಯದಲ್ಲಿ ಬೆಲೆ ಏರಿಕೆಯ ಈ ಪ್ರವೃತ್ತಿ ಕಂಡುಬರುತ್ತದೆ' ಎಂದರು.

ಮತ್ತೋರ್ವ ಗ್ರಾಹಕ ಪ್ರಿಯಾ ಚೆಟ್ಟಿ ರಾಜಗೋಪಾಲ್ ಮಾತನಾಡಿ, ಪ್ರತಿ ಹಬ್ಬದ ಸಮಯದಲ್ಲಿ ಹೂವು ಮತ್ತು ಹಣ್ಣುಗಳ ಬೆಲೆಗಳು ಗಗನಕ್ಕೇರಿರುತ್ತದೆ. ಇದು ನಮಗೆ ಆಶ್ಚರ್ಯವಾಗುವುದಿಲ್ಲ. ಇದು ಸಾಮಾನ್ಯವಾಗಿದೆ. ಹೂವುಗಳು ಮತ್ತು ಹಣ್ಣುಗಳ ಜೊತೆಗೆ, ತರಕಾರಿಗಳ ಬೆಲೆಯಲ್ಲಿಯೂ ಗಮನಾರ್ಹ ಏರಿಕೆ ಕಂಡುಬಂದಿದೆ ಎನ್ನುತ್ತಾರೆ. 

ಹಾಪ್‌ಕಾಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಉಮೇಶ್ ಮಿರ್ಜಿ ಮಾತನಾಡಿ, ಹಬ್ಬದ ಸಂದರ್ಭದಲ್ಲಿ ಸೇಬು, ದಾಳಿಂಬೆ, ಪಪ್ಪಾಯಿ, ಪೇರಲ, ಬೂದಿ ಸೋರೆಕಾಯಿಗಳಿಗೆ ಬೇಡಿಕೆ ಹೆಚ್ಚಿದ್ದು, ಬೆಲೆ ಏರಿಕೆಯಾಗಿದೆ ಎಂದರು. 

ಆದರೆ, ಬಾಳೆಹಣ್ಣಿಗೆ ಬೇಡಿಕೆ ಹೆಚ್ಚಿದ್ದರೂ, ಅದರ ಬೆಲೆ ಕಡಿಮೆಯಾಗಿದೆ. ಸೌತೆಕಾಯಿ ಮತ್ತು ಸೀಮೆ ಬದನೆಕಾಯಿಯಂತ ತರಕಾರಿಗಳು ಕ್ರಮವಾಗಿ ಕನಿಷ್ಠ ಬೆಲೆಗೆ ಇಳಿದಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TNIE Exclusive | Air India ವಿಮಾನದಲ್ಲಿ ಭಾರೀ ತಾಂತ್ರಿಕ ದೋಷ..! Phuket-Delhi ವಿಮಾನ 300 ಅಡಿ ಕುಸಿತಕ್ಕೆ Triple hydraulic systems ವೈಫಲ್ಯ ಕಾರಣ..?

ಸಂಪುಟ ವಿಸ್ತರಣೆ ಬಿಕ್ಕಟ್ಟು ಶಮನಕ್ಕೆ ಸಿಎಂ ಡಿಕೆ.ಶಿವಕುಮಾರ್ ದೆಹಲಿಗೆ ದೌಡು: ಹೈಕಮಾಂಡ್‌ ಜೊತೆ ಮಹತ್ವದ ಚರ್ಚೆ..!

'Toxic': ಸಿನಿಮಾ ಮಾಡುವುದು ಸುಲಭವಲ್ಲ, ಇಡೀ ಪ್ರಪಂಚದ ವಿರುದ್ಧ ಯುದ್ಧಕ್ಕೆ ಹೋದಂತೆ': ವದಂತಿಗಳ ನಡುವೆ ಆ ವ್ಯಕ್ತಿ ಬಂಡೆಯಂತೆ ನಿಂತರು- ಯಶ್!

Toxic: ಯಶ್ ಜೊತೆಗೆ ಕಿಯಾರಾ ಬೋಲ್ಡ್ ಅವತಾರ, ಟ್ರೋಲರ್ ಗಳ ಬಾಯಿ ಮುಚ್ಚಿಸಿದ ಪತಿ ಸಿದ್ಧಾರ್ಥ್ ಮಲ್ಹೋತ್ರಾ!

'ಕಳ್ಳಿ, ಕಳ್ಳಿ' ಅಂತಾ ಘೋಷಣೆ ಕೂಗಿ ಮಮತಾ ಬ್ಯಾನರ್ಜಿ ಕಾರಿನ ಮೇಲೆ ಕಲ್ಲು ತೂರಾಟ, ಕೆಸರು ಎರಚಿ ಆಕ್ರೋಶ! ಭಯಾನಕ Video