ಚಿಕ್ಕಬಾಣಾವರದಿಂದ ಯಶವಂತಪುರ ಮಾರ್ಗವಾಗಿ ಬೆನ್ನಿಗೇನಹಳ್ಳಿವರೆಗಿನ ಕಾಮಗಾರಿ ಆರಂಭಗೊಂಡಿರುವ ಮಲ್ಲಿಗೆ ಲೈನ್ ಅಥವಾ ಕಾರಿಡಾರ್-2ರಲ್ಲಿ ಶೇ.15ರಷ್ಟು ಕಾಮಗಾರಿ ಮಾತ್ರ ಪೂರ್ಣಗೊಂಡಿದೆ. 
ರಾಜ್ಯ

ಕೆಐಎ ಮಾರ್ಗದ ಸಬ್ ಅರ್ಬನ್ ರೈಲು ಯೋಜನೆ ವಿಳಂಬ: K-Ride ಗೆ ರೈಲ್ವೆ ಮಂಡಳಿ ತರಾಟೆ

ನಗರ ಪ್ರದೇಶದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಉಪನಗರ ರೈಲು ಯೋಜನೆಗೆ ಆದ್ಯತೆ ನೀಡದೇ ಇರುವುದಕ್ಕೆ ರೈಲ್ವೆ ಮಂಡಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. 

ಬೆಂಗಳೂರು: ನಗರ ಪ್ರದೇಶದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಉಪನಗರ ರೈಲು ಯೋಜನೆಗೆ ಆದ್ಯತೆ ನೀಡದೇ ಇರುವುದಕ್ಕೆ ರೈಲ್ವೆ ಮಂಡಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. 

ರಾಜ್ಯ ಸರ್ಕಾರ ಹಾಗೂ ಕೆ-ರೈಡ್ ಬಳಿ ಈ ಸಂಬಂಧ ರೈಲ್ವೆ ಮಂಡಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. 148.17 ಕಿ.ಮೀ ವ್ಯಾಪ್ತಿಯ ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ 3 ವರ್ಷಗಳ ಹಿಂದೆ ರೈಲ್ವೆ ಮಂಡಳಿ ಮಂಜೂರಾತಿ ಪತ್ರವನ್ನು ಪ್ರಕಟಿಸಿತ್ತು. ಈಗ ಯೋಜನೆಯನ್ನು ಆದ್ಯತೆಯ ಮೇರೆಗೆ ಪರಿಗಣಿಸದೇ ಇರುವುದು ಮಂಜೂರಾತಿ ಪತ್ರದ ಉಲ್ಲಂಘನೆಯಾಗಿದೆ ಎಂದು ರೈಲ್ವೆ ಮಂಡಳಿ ಹೇಳಿದೆ. 

ಇದೇ ವೇಳೆ ಎಸ್ ಡಬ್ಲ್ಯುಆರ್ ವಲಯಕ್ಕೆ 15,767 ಕೋಟಿ ರೂಪಾಯಿ ಮೌಲ್ಯದ ಯೋಜನೆಯ ಅನುಮೋದನೆಗಳನ್ನು ತ್ವರಿತಗೊಳಿಸುವಂತೆ ಸೂಚನೆ ನೀಡಿದೆ. 

ಬಿಎಸ್‌ಆರ್‌ಪಿ, ರೈಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಂಪನಿ (ಕರ್ನಾಟಕ) ಲಿಮಿಟೆಡ್ (ಕೆ-ರೈಡ್) ಅನುಷ್ಠಾನಗೊಳಿಸುವ ನೋಡಲ್ ಏಜೆನ್ಸಿಯ ಉನ್ನತ ಅಧಿಕಾರಿಗಳೊಂದಿಗೆ ರೈಲ್ವೆ ಮಂಡಳಿಯ ಸದಸ್ಯ (ಮೂಲಸೌಕರ್ಯ), ರೂಪ್ ನಾರಾಯಣ ಸುಂಕರ್ ಅವರು ಶುಕ್ರವಾರ ದೆಹಲಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು. ರಾಜ್ಯ ಮತ್ತು ಕೇಂದ್ರದ ನಡುವಿನ ಜಂಟಿ ಉದ್ಯಮ. ಸಭೆಯಲ್ಲಿ ಭಾಗವಹಿಸಿದ್ದ ಕೆ-ರೈಡ್ ಅಧಿಕಾರಿಗಳಲ್ಲಿ ನಿರ್ದೇಶಕ (ವ್ಯಾಪಾರ ಅಭಿವೃದ್ಧಿ ಮತ್ತು ಹಣಕಾಸು) ಅವದೇಶ್ ಮೆಹ್ತಾ ಮತ್ತು ನಿರ್ದೇಶಕ (ಪ್ರಾಜೆಕ್ಟ್ ಮತ್ತು ಪ್ಲಾನಿಂಗ್) ಆರ್ ಕೆ ಸಿಂಗ್ ಇದ್ದರು.

ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿರುವ ಹಿರಿಯ ಅಧಿಕಾರಿಯೊಬ್ಬರು, "ಕೆಎಸ್ ಆರ್ ರೈಲ್ವೆ ನಿಲ್ದಾಣದಿಂದ ದೇವನಹಳ್ಳಿ (ಯಲಹಂಕ- ಸಂಪಿಗೆ ಲೈನ್) ಯೋಜನೆಗೆ ಅರ್ಹವಿರುವ ಆದ್ಯತೆಯನ್ನು ಏಕೆ ನೀಡಿಲ್ಲ ಎಂದು ಕೆ-ರೈಡ್ ನ್ನು ರೈಲ್ವೆ ಮಂಡಳಿ ಸದಸ್ಯರು ಪ್ರಶ್ನಿಸಿದ್ದಾರೆ.

ಇದನ್ನು ಇತರ ಲೈನ್ ಗಳಿಗಿಂತ ಮುಂಚಿತವಾಗಿ ಕಾರ್ಯಗತಗೊಳಿಸಬೇಕಾಗಿತ್ತು, ಮಂಜೂರಾತಿ ಪತ್ರವನ್ನು ಅಕ್ಟೋಬರ್ 2020 ರಲ್ಲಿ ನೀಡಲಾಗಿತ್ತು. ಅದಕ್ಕೆ ಮೂರು ವರ್ಷಗಳಲ್ಲಿ ಪೂರ್ಣಗೊಳಿಸಬೇಕೆಂಬ ಗಡುವನ್ನು ನಿಗದಿಪಡಿಸಲಾಗಿತ್ತು. 41.4 ಕಿಮೀ ಮಾರ್ಗವು ಮುಂದಿನ ತಿಂಗಳು (ಅಕ್ಟೋಬರ್ 2023) ಕಾರ್ಯಾರಂಭ ಮಾಡಬೇಕಾಗಿತ್ತು ಆದರೆ ಇನ್ನೂ ಟೆಂಡರ್ ಪ್ರಕ್ರಿಯೆಯು ಸಹ ಪ್ರಾರಂಭವಾಗಿಲ್ಲ ಎಂದು ರೈಲ್ವೆ ಮಂಡಳಿ ಅಸಮಾಧಾನ ಹೊರಹಾಕಿದೆ.

ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಕೆಆರ್ ಪುರಂನಿಂದ ಕೆಐಎ ಲೈನ್ (ಹಂತ 2 ಬಿ) ವರೆಗಿನ ವಿಮಾನ ನಿಲ್ದಾಣದ ಮಾರ್ಗಕ್ಕೆ ಈಗಾಗಲೇ ಟೆಂಡರ್‌ಗಳನ್ನು ಕರೆದಿದ್ದರಿಂದ K-RIDE ತನ್ನ ಆದ್ಯತೆಯನ್ನು ಜೂನ್ 2021 ರಲ್ಲಿ ಕೈಬಿಡುವ ನಿರ್ಧಾರವನ್ನು ತೆಗೆದುಕೊಂಡಿತು. ಇತರ ಸಂಪರ್ಕವಿಲ್ಲದ ಮಾರ್ಗಗಳೊಂದಿಗೆ ಮುಂದುವರಿಯುವ ಉದ್ದೇಶದಿಂದ ಕೆ-ರೈಡ್ ಈ ನಿರ್ಧಾರ ಕೈಗೊಂಡಿತ್ತು. 

2028 ರ ವೇಳೆಗೆ ಯೋಜನೆಯನ್ನು ಪೂರ್ಣಗೊಳಿಸಬಹುದು

ಆಗಸ್ಟ್ 11 ರಂದು ನಡೆದ ಯೋಜನೆಯ ಪರಿಶೀಲನಾ ಸಭೆಯಲ್ಲಿ, ರಾಜ್ಯ ಮೂಲಸೌಕರ್ಯ ಸಚಿವ ಎಂ ಬಿ ಪಾಟೀಲ್ ಅವರು BSRP ಪೂರ್ಣಗೊಳಿಸಲು 2028 ರವರೆಗೆ ಎರಡು ವರ್ಷಗಳ ಅವಧಿಯನ್ನು ವಿಸ್ತರಿಸಲಾಗುವುದು ಎಂದು ಹೇಳಿದ್ದರು. "ರೈಲ್ವೆ ಮಂಡಳಿಯು 2026ಕ್ಕೆ ನಿಗದಿಪಡಿಸಲಾಗಿದ ಮೂಲ ಗಡುವನ್ನು ತಲುಪಲು ಉತ್ಸುಕವಾಗಿದೆ ಮತ್ತು ನಾವು ನಿರ್ದಿಷ್ಟವಾಗಿ  ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ" ಎಂದು ರೈಲ್ವೆ ಅಧಿಕಾರಿಗಳು  ಹೇಳಿದ್ದಾರೆ.

ಕಾಮಗಾರಿ ಪ್ರಾರಂಭವಾದ ಏಕೈಕ ಮಾರ್ಗವೆಂದರೆ ಕಾರಿಡಾರ್-2, ಅಥವಾ ಮಲ್ಲಿಗೆ ಮಾರ್ಗ ಚಿಕ್ಕಬಾಣಾವರದಿಂದ ಯಶವಂತಪುರ (25.01 ಕಿ.ಮೀ) ಮೂಲಕ ಬೆನ್ನಿಗೇನಹಳ್ಳಿಗೆ (25.01 ಕಿ.ಮೀ) L&T ಲಿಮಿಟೆಡ್‌ನಿಂದ 15 ಪ್ರತಿಶತದಷ್ಟು ಕೆಲಸ ಪೂರ್ಣಗೊಂಡಿದೆ. ಕಾರಿಡಾರ್-4 ಅಥವಾ ಕನಕ ಲೈನ್‌ಗೆ ಟೆಂಡರ್ ಪ್ರಕ್ರಿಯೆಯು ಚಾಲನೆಯಲ್ಲಿದೆ. ಯಲಹಂಕ ಮಾರ್ಗವಾಗಿ ಹೀಲಳಿಗೆ ಮತ್ತು ರಾಜನಕುಂಟೆ ನಡುವಿನ 46.24 ಕಿಮೀ --ಪೂರ್ಣಗೊಳ್ಳುವ ಹಂತದಲ್ಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಒಬ್ಬ ಅಲ್ಲ.. ಭಾರತದ ಮೇಲೆ ದಾಳಿಗೆ ಸಾವಿರಾರು ಆತ್ಮಹತ್ಯಾ ಬಾಂಬರ್‌ಗಳು ಸಿದ್ಧ': ಪಾಕ್ ಮೂಲದ ಉಗ್ರ Masood Azhar ಆಡಿಯೋ ವೈರಲ್!

Pak ಸಚಿವನಿಗೆ ಮುಖಭಂಗ: ನೆತನ್ಯಾಹು ವಿರುದ್ಧ ಮಾತಾಡ್ತಿದ್ದಂತೆ ಶೋ ನಿಲ್ಲಿಸಿ ಆಸಿಫ್‌ನನ್ನು ಹೊರಕಹಿಸಿದ ಆ್ಯಂಕರ್, Video!

'ಅಪ್ಪ-ಅಮ್ಮನ ಪ್ರಜ್ಞೆ ತಪ್ಪಿಸಿ ಕಟ್ಟಿಹಾಕಿ ಕಳ್ಳತನ': ಮನೆಗೆಲಸದವರ ಮೇಲೆ ಮಾಜಿ ಐಎಎಸ್ ಅಧಿಕಾರಿ Puja Khedkar ಆರೋಪ!

1st ODI: ಮಿಚೆಲ್ ಸ್ಫೋಟಕ ಭರ್ಜರಿ ಬ್ಯಾಟಿಂಗ್, ಭಾರತಕ್ಕೆ ಗೆಲ್ಲಲು ಬೃಹತ್ ಗುರಿ ನೀಡಿದ ಕಿವೀಸ್

ಕೇರಳದಲ್ಲಿ ಕಾನೂನು ಸುವ್ಯವಸ್ಥೆಗೆ ಬೆದರಿಕೆ: SDPI, ಜಮಾತ್, ಸಂಘಟನೆಗಳ ಪಾತ್ರ ಪ್ರಶ್ನಿಸಿದ ಅಮಿತ್ ಶಾ!

SCROLL FOR NEXT