ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಮಾಗಡಿಯಲ್ಲಿ ಬ್ಯೂಟಿಷಿಯನ್ ಹತ್ಯೆ; ಐವರ ಬಂಧನ

ಆರಂಭದಲ್ಲಿ, ಆಕೆಯ 34 ವರ್ಷದ ಪತಿ, ಟ್ರಾವೆಲ್ ಏಜೆನ್ಸಿಯ ಮೇಲ್ವಿಚಾರಕ ಉಮೇಶ್ ಪ್ರಕರಣದ ಏಕೈಕ ಆರೋಪಿ ಎಂದು ಶಂಕಿಸಲಾಗಿತ್ತು.ಆದರೆ, ಬುಧವಾರ ಆತನ ಬಂಧನದ ನಂತರ ಇನ್ನೂ ನಾಲ್ವರು ಶಂಕಿತರನ್ನು ಬಂಧಿಸಲಾಗಿದೆ.

ಬೆಂಗಳೂರು: ನಗರದ ಹೊರವಲಯದ ಮಾಗಡಿಯಲ್ಲಿ ಸೋಮವಾರ ಅರಣ್ಯ ಪ್ರದೇಶದಲ್ಲಿ ನಡೆದ 32 ವರ್ಷದ ಬ್ಯೂಟಿಷಿಯನ್ ಲಲಿತಾ ಅಲಿಯಾಸ್ ದಿವ್ಯಾ ಅವರ ಬರ್ಬರ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

ಆರಂಭದಲ್ಲಿ, ಆಕೆಯ 34 ವರ್ಷದ ಪತಿ, ಟ್ರಾವೆಲ್ ಏಜೆನ್ಸಿಯ ಮೇಲ್ವಿಚಾರಕ ಉಮೇಶ್ ಪ್ರಕರಣದ ಏಕೈಕ ಆರೋಪಿ ಎಂದು ಶಂಕಿಸಲಾಗಿತ್ತು.ಆದರೆ, ಬುಧವಾರ ಆತನ ಬಂಧನದ ನಂತರ ಇನ್ನೂ ನಾಲ್ವರು ಶಂಕಿತರನ್ನು ಬಂಧಿಸಲಾಗಿದೆ.

ಬಂಧಿತ ಇತರ ಆರೋಪಿಗಳನ್ನು ಶಶಾಂಕ್, ಕಿರಣ್, ರೋಹಿತ್ ಮತ್ತು ಭರತ್ ಎಂದು ಗುರುತಿಸಲಾಗಿದ್ದು, ಎಲ್ಲರೂ 25 ರಿಂದ 30 ವರ್ಷ ವಯಸ್ಸಿನವರಾಗಿದ್ದಾರೆ. ಆರೋಪಿಗಳೆಲ್ಲರೂ ಮಾಗಡಿ ತಾಲೂಕಿನ ಕುರುಪಾಳ್ಯ ಮತ್ತು ಇತರ ಭಾಗಗಳ ನಿವಾಸಿಗಳಾಗಿದ್ದು, ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.

ಐವರ ತಂಡದಿಂದ ಬ್ಯೂಟಿಷಿಯನ್ ಹತ್ಯೆಯಾಗಿದೆ. ಪರಾರಿಯಾಗಿದ್ದ ಸಂತ್ರಸ್ತೆಯ ಪತಿಯನ್ನು ಕುಣಿಗಲ್ ಬಳಿ ಬುಧವಾರ ಬಂಧಿಸಲಾಗಿದೆ. ಉಳಿದ ನಾಲ್ವರು ಆರೋಪಿಗಳು ಆತನ ಆಪ್ತ ಸ್ನೇಹಿತರು. ಮಾದಕ ವ್ಯಸನಿಗಳಾಗಿರುವ ಐವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಐದು ವರ್ಷದ ಬಾಲಕನ ತಾಯಿ ಲಲಿತಾಳನ್ನು ಕೊಲೆ ಮಾಡಿದ ನಂತರ ಆರೋಪಿಗಳು ಆಕೆಯ ಶವವನ್ನು ಹುಜಗಲ್ ಬೆಟ್ಟದಿಂದ ಕಾಲ್ನಡಿಗೆಯಲ್ಲಿ ಸುಮಾರು 5 ಕಿ.ಮೀ ದೂರದ ಚೇಳೂರಿನ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಿದ್ದರು.

ಮಾದನಾಯಕನಹಳ್ಳಿ ನಿವಾಸಿ ಲಲಿತಾ ಎಂಬುವರ ಶವ ಮಂಗಳವಾರ ಕಂದಕದಲ್ಲಿ ಹೂತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕೊಲೆಗೆ ಕೆಲವೇ ನಿಮಿಷಗಳ ಮೊದಲು, ಅವರು ತನ್ನ ಸ್ನೇಹಿತೆ ಉಮಾಳೊಂದಿಗೆ ಲೈವ್ ಲೊಕೇಷನ್ ಹಂಚಿಕೊಂಡಿದ್ದರು. ಇದು ದೇಹವನ್ನು ಪತ್ತೆಹಚ್ಚಲು ಪೊಲೀಸರಿಗೆ ಸಹಾಯ ಮಾಡಿತು.

ಕುರುಪಾಳ್ಯ ಗ್ರಾಮದ ಯುವಕನೊಂದಿಗೆ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿದ್ದ ಉಮೇಶ್, ಪತ್ನಿಯೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದರು. ಪದೇ ಪದೇ ಜಗಳ ನಡೆಯುತ್ತಿದ್ದರಿಂದ ಲಲಿತಾ ಮೂರು ವರ್ಷಗಳ ಹಿಂದೆ ಪತಿಯಿಂದ ದೂರವಾಗಿದ್ದಳು.

ಉಮೇಶ್ ಮತ್ತೆ ಅದೇ ಯುವಕನನ್ನು ತನ್ನ ಹೆಂಡತಿಯ ಮನೆಯ ಬಳಿ ನೋಡಿದ ನಂತರ, ಪತ್ನಿಯನ್ನು ಕೊಲ್ಲಲು ನಿರ್ಧರಿಸಿ ಸಂಚು ರೂಪಿಸಿದನು ಮತ್ತು ಅದಕ್ಕೆ ತನ್ನ ನಾಲ್ವರು ಸ್ನೇಹಿತರ ಸಹಾಯವನ್ನು ಪಡೆದಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'Gaza deal ಒಪ್ಕೊಳ್ಳಿ.. ಇಲ್ಲ ನರಕ ತೋರಿಸ್ತೀವಿ': Hamas ಗೆ ಡೊನಾಲ್ಡ್ ಟ್ರಂಪ್ ಅಂತಿಮ ಎಚ್ಚರಿಕೆ!

2 ವರ್ಷದೊಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್ ನೀಡಬೇಡಿ: 11 ಮಕ್ಕಳ ಸಾವಿನ ನಂತರ ಕೇಂದ್ರ ಎಚ್ಚರಿಕೆ

ಖ್ಯಾತ ಹಿರಿಯ ಪತ್ರಕರ್ತ, ಲೇಖಕ ಟಿಜೆಎಸ್ ಜಾರ್ಜ್ ನಿಧನ

ಕರೂರ್ ಕಾಲ್ತುಳಿತ ತನಿಖೆಗೆ SIT ರಚನೆ: ಸ್ಥಳದಿಂದ ಓಡಿ ಹೋದ ವಿಜಯ್​​ಗೆ ಮದ್ರಾಸ್ ಹೈಕೋರ್ಟ್ ತರಾಟೆ

'ಭೌಗೋಳಿಕ ನಕ್ಷೆಯಲ್ಲಿ ಕೂಡ ಇರದಂತೆ ಅಳಿಸಿ ಹಾಕುತ್ತೇವೆ': ಬಾಲ ಬಿಚ್ಚಿದ ಪಾಕಿಸ್ತಾನಕ್ಕೆ ಭಾರತೀಯ ಸೇನಾ ಮುಖ್ಯಸ್ಥ ದ್ವಿವೇದಿ ಎಚ್ಚರಿಕೆ! Video

SCROLL FOR NEXT