ಕೊಡಗಿನಿಂದ ಹೊರಟ ಐದು ಆನೆ 
ರಾಜ್ಯ

ಮೈಸೂರು ದಸರಾ: ಗಜ ಪಯಣಕ್ಕೆ ಕೊಡಗಿನಿಂದ ಹೊರಟ ಐದು ಆನೆ

ದುಬಾರೆ ಕ್ಯಾಂಪ್‌ನಿಂದ ಒಟ್ಟು ಏಳು ಆನೆಗಳು ಈ ವರ್ಷ ಮೈಸೂರು ದಸರಾ ಉತ್ಸವದಲ್ಲಿ ಭಾಗವಹಿಸಲಿವೆ. ಇಂದು ಕಂಜನ್, ಧನಂಜಯ ಹಾಗೂ ಗೋಪಿ ಸಾಕಾನೆಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು.

ಮಡಿಕೇರಿ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕೊಡಗಿನಿಂದ ಐದು ಆನೆಗಳು ಮಂಗಳವಾರ ಗಜಪಯಣಕ್ಕೆ ಪ್ರಯಾಣ ಬೆಳೆಸಿದವು. ಮೊದಲ ಸುತ್ತಿನಲ್ಲಿ ದುಬಾರೆ ಆನೆ ಶಿಬಿರದಿಂದ ಮೂರು ಆನೆಗಳು ಹಾಗೂ ಕೊಡಗಿನ ಮತ್ತಿಗೋಡು ಆನೆ ಶಿಬಿರದಿಂದ ಎರಡು ಆನೆಗಳು ವೀರನ ಹೊಸಹಳ್ಳಿ ಆನೆ ಶಿಬಿರಕ್ಕೆ ತೆರಳಿದವು. ಅಲ್ಲಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ತೆರಳಲಿವೆ.

ಮೂಲಗಳ ಪ್ರಕಾರ, ದುಬಾರೆ ಕ್ಯಾಂಪ್‌ನಿಂದ ಒಟ್ಟು ಏಳು ಆನೆಗಳು ಈ ವರ್ಷ ಮೈಸೂರು ದಸರಾ ಉತ್ಸವದಲ್ಲಿ ಭಾಗವಹಿಸಲಿವೆ. ಇಂದು ಕಂಜನ್, ಧನಂಜಯ ಹಾಗೂ ಗೋಪಿ ಸಾಕಾನೆಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು. ಆನೆಗಳೊಂದಿಗೆ ಮಾವುತರು ಮತ್ತು ಸಹಾಯಕರಾದ ವಿಜಯ್, ಅನಿಲ್, ಭಾಸ್ಕರ್, ರಾಜಣ್ಣ, ನವೀನ್ ಮತ್ತು ಶಿವು ತೆರಳಿದರು.

ಪ್ರಶಾಂತ್, ಹರ್ಷ, ಸುಗ್ರೀವ ಮತ್ತು ಅಯ್ಯಪ್ಪ ಸೇರಿದಂತೆ ಶಿಬಿರದ ನಾಲ್ಕು ಆನೆಗಳನ್ನು ಈ ವರ್ಷ ಉತ್ಸವಕ್ಕೆ ಆಯ್ಕೆ ಮಾಡಲಾಗಿದೆ ಎಂದು ದುಬಾರೆ ಆರ್‌ಎಫ್‌ಒ ರಂಜನ್ ಅವರು ಖಚಿತಪಡಿಸಿದ್ದಾರೆ.

ಇತರ ಆನೆಗಳು ಈ ಹಿಂದೆ ಉತ್ಸವದಲ್ಲಿ ಪಾಲ್ಗೊಂಡಿದ್ದರೆ, ಅಯ್ಯಪ್ಪ ಆನೆ ಈ ವರ್ಷ ಮೊದಲ ಬಾರಿಗೆ ಮೈಸೂರು ದಸರಾ ಉತ್ಸವದಲ್ಲಿ ಭಾಗವಹಿಸುತ್ತಿದೆ.

ಇದೇ ವೇಳೆ ಜಿಲ್ಲೆಯ ಮತ್ತಿಗೋಡು ಶಿಬಿರದಿಂದ ಅಭಿಮನ್ಯು ಮತ್ತು ಭೀಮಾ ಆನೆಗಳು ವೀರನ ಹೊಸಹಳ್ಳಿಗೆ ತೆರಳಿದವು. ಅದೇ ಶಿಬಿರದ ಮತ್ತೊಂದು ಆನೆ ಮಹೇಂದ್ರ ನಂತರ ಗಜಪಡೆ ಸೇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ