ಕೊಡಗಿನಿಂದ ಹೊರಟ ಐದು ಆನೆ 
ರಾಜ್ಯ

ಮೈಸೂರು ದಸರಾ: ಗಜ ಪಯಣಕ್ಕೆ ಕೊಡಗಿನಿಂದ ಹೊರಟ ಐದು ಆನೆ

ದುಬಾರೆ ಕ್ಯಾಂಪ್‌ನಿಂದ ಒಟ್ಟು ಏಳು ಆನೆಗಳು ಈ ವರ್ಷ ಮೈಸೂರು ದಸರಾ ಉತ್ಸವದಲ್ಲಿ ಭಾಗವಹಿಸಲಿವೆ. ಇಂದು ಕಂಜನ್, ಧನಂಜಯ ಹಾಗೂ ಗೋಪಿ ಸಾಕಾನೆಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು.

ಮಡಿಕೇರಿ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕೊಡಗಿನಿಂದ ಐದು ಆನೆಗಳು ಮಂಗಳವಾರ ಗಜಪಯಣಕ್ಕೆ ಪ್ರಯಾಣ ಬೆಳೆಸಿದವು. ಮೊದಲ ಸುತ್ತಿನಲ್ಲಿ ದುಬಾರೆ ಆನೆ ಶಿಬಿರದಿಂದ ಮೂರು ಆನೆಗಳು ಹಾಗೂ ಕೊಡಗಿನ ಮತ್ತಿಗೋಡು ಆನೆ ಶಿಬಿರದಿಂದ ಎರಡು ಆನೆಗಳು ವೀರನ ಹೊಸಹಳ್ಳಿ ಆನೆ ಶಿಬಿರಕ್ಕೆ ತೆರಳಿದವು. ಅಲ್ಲಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ತೆರಳಲಿವೆ.

ಮೂಲಗಳ ಪ್ರಕಾರ, ದುಬಾರೆ ಕ್ಯಾಂಪ್‌ನಿಂದ ಒಟ್ಟು ಏಳು ಆನೆಗಳು ಈ ವರ್ಷ ಮೈಸೂರು ದಸರಾ ಉತ್ಸವದಲ್ಲಿ ಭಾಗವಹಿಸಲಿವೆ. ಇಂದು ಕಂಜನ್, ಧನಂಜಯ ಹಾಗೂ ಗೋಪಿ ಸಾಕಾನೆಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು. ಆನೆಗಳೊಂದಿಗೆ ಮಾವುತರು ಮತ್ತು ಸಹಾಯಕರಾದ ವಿಜಯ್, ಅನಿಲ್, ಭಾಸ್ಕರ್, ರಾಜಣ್ಣ, ನವೀನ್ ಮತ್ತು ಶಿವು ತೆರಳಿದರು.

ಪ್ರಶಾಂತ್, ಹರ್ಷ, ಸುಗ್ರೀವ ಮತ್ತು ಅಯ್ಯಪ್ಪ ಸೇರಿದಂತೆ ಶಿಬಿರದ ನಾಲ್ಕು ಆನೆಗಳನ್ನು ಈ ವರ್ಷ ಉತ್ಸವಕ್ಕೆ ಆಯ್ಕೆ ಮಾಡಲಾಗಿದೆ ಎಂದು ದುಬಾರೆ ಆರ್‌ಎಫ್‌ಒ ರಂಜನ್ ಅವರು ಖಚಿತಪಡಿಸಿದ್ದಾರೆ.

ಇತರ ಆನೆಗಳು ಈ ಹಿಂದೆ ಉತ್ಸವದಲ್ಲಿ ಪಾಲ್ಗೊಂಡಿದ್ದರೆ, ಅಯ್ಯಪ್ಪ ಆನೆ ಈ ವರ್ಷ ಮೊದಲ ಬಾರಿಗೆ ಮೈಸೂರು ದಸರಾ ಉತ್ಸವದಲ್ಲಿ ಭಾಗವಹಿಸುತ್ತಿದೆ.

ಇದೇ ವೇಳೆ ಜಿಲ್ಲೆಯ ಮತ್ತಿಗೋಡು ಶಿಬಿರದಿಂದ ಅಭಿಮನ್ಯು ಮತ್ತು ಭೀಮಾ ಆನೆಗಳು ವೀರನ ಹೊಸಹಳ್ಳಿಗೆ ತೆರಳಿದವು. ಅದೇ ಶಿಬಿರದ ಮತ್ತೊಂದು ಆನೆ ಮಹೇಂದ್ರ ನಂತರ ಗಜಪಡೆ ಸೇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

SCROLL FOR NEXT