ತುಷಾರ್ ಗಾಂಧಿ 
ರಾಜ್ಯ

ಸಾವರ್ಕರ್ ವಿಚಾರಧಾರೆಗಳ ತಾಂಡವ ಹೆಚ್ಚಾಗಿದ್ದರಿಂದ ಮಹಾತ್ಮನ ತತ್ವಗಳು ರೋಗಗ್ರಸ್ತವಾಗಿವೆ: ತುಷಾರ್ ಗಾಂಧಿ

ಗಾಂಧಿಯ ಮೌಲ್ಯಗಳ ದುರ್ಬಲವಾಗುತ್ತಿರುವ ಬಗ್ಗೆ ಆಳವಾದ ಕಳವಳ ವ್ಯಕ್ತಪಡಿಸಿದರು, ಗಾಂಧಿಯವರ ಹತ್ಯೆಗೆ ಕಾರಣವಾದಂತಹ ವಿಭಜಕ ಶಕ್ತಿಗಳು ಮರುಕಳಿಸುತ್ತಿವೆ ಎಂದು ತಿಳಿಸಿದರು.

ಬೆಂಗಳೂರು: ಇಂದಿನ ಯುಗವು ಗೋಡ್ಸೆಗೆ ಸೇರಿದ್ದು, ಗಾಂಧಿಗಲ್ಲ, ಸಮಾಜವು ಮಹಾತ್ಮ ಗಾಂಧಿ ತತ್ವಗಳಿಂದ ಬಹಳ ದೂರ ಸರಿದಿದೆ ಎಂದು ಗಾಂಧೀಜಿಯವರ ಮರಿಮೊಮ್ಮಗ ತುಷಾರ್ ಗಾಂಧಿ ಹೇಳಿದ್ದಾರೆ.

ಗಾಂಧಿ ಸ್ಮಾರಕ ನಿಧಿಯ 75 ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಶನಿವಾರ ಗಾಂಧಿ ಭವನದಲ್ಲಿ ನಡೆದ “21 ನೇ ಶತಮಾನಕ್ಕೆ ಮಹಾತ್ಮ ಗಾಂಧಿ” ಅಂತರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ತುಷಾರ್ ,ಗಾಂಧಿಯ ಮೌಲ್ಯಗಳ ದುರ್ಬಲವಾಗುತ್ತಿರುವ ಬಗ್ಗೆ ಆಳವಾದ ಕಳವಳ ವ್ಯಕ್ತಪಡಿಸಿದರು, ಗಾಂಧಿಯವರ ಹತ್ಯೆಗೆ ಕಾರಣವಾದಂತಹ ವಿಭಜಕ ಶಕ್ತಿಗಳು ಮರುಕಳಿಸುತ್ತಿವೆ ಎಂದು ತಿಳಿಸಿದರು.

ನಿರುದ್ಯೋಗದಂತಹ ಆಧುನಿಕ ಸಮಸ್ಯೆಗಳನ್ನು ಗಾಂಧಿ ಹೇಗೆ ಪರಿಹರಿಸುತ್ತಿದ್ದರು ಎಂಬ ಬಗ್ಗೆ ವಿವರಿಸಿದ ಅವರು ಅಂತಹ ಆತ್ಮಾವಲೋಕನದ ಕೊರತೆಯಿದೆ ಎಂದು ವಿಷಾದಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವಿದೇಶಿ ಪ್ರವಾಸಗಳಲ್ಲಿ ಗಾಂಧಿಯವರ ಸಿದ್ಧಾಂತವನ್ನು ಮಾತ್ರ ಪ್ರಸ್ತಾಪಿಸುತ್ತಾರೆ, ಆದರೆ ಹಿಂಸಾಚಾರದಿಂದ ತುಂಬಿರುವ ಅಸ್ಸಾಂ ಸೇರಿದಂತೆ ಅದನ್ನು ನಿರ್ಲಕ್ಷಿಸಿದ್ದಾರೆ ಎಂದು ಅವರು ಟೀಕಿಸಿದರು. ವಿದೇಶಗಳಲ್ಲಿ ಗಾಂಧಿ ಮತ್ತು ಅವರ ವಿಚಾರಧಾರೆ ಬಗ್ಗೆ ಮಾತನಾಡುವವರು ತಮ್ಮ ದೇಶದಲ್ಲಿ ಅವುಗಳ ಹತ್ಯೆ ಮಾಡುತ್ತಿದ್ದಾರೆ. ದೇಶದಲ್ಲಿ ಗೋಡ್ಸೆ, ಸಾವರ್ಕರ್ ವಿಚಾರಧಾರೆಗಳ ತಾಂಡವ ಹೆಚ್ಚಾಗಿದ್ದರಿಂದ ಮಹಾತ್ಮನ ವಿಚಾರಧಾರೆಗಳು ರೋಗಗ್ರಸ್ತವಾಗಿವೆ. ಗೋಡ್ಸೆ ಆಡಳಿತ ನಡೆಸುತ್ತಿರುವುದರಿಂದ ಗಾಂಧೀಜಿ ಸ್ಥಾಪಿಸಿದ ಸಂಸ್ಥೆಗಳು, ಅವರ ತತ್ವಗಳನ್ನು ಮುನ್ನಡೆಸುತ್ತಿರುವ ಸಂಸ್ಥೆಗಳನ್ನು ಕಸಿದುಕೊಳ್ಳಲಾಗುತ್ತಿದೆ ’ ಎಂದು ಹೇಳಿದರು.

ದೇಶವು ಹಿಂಸಾಚಾರ, ಭ್ರಷ್ಟಾಚಾರ ಮತ್ತು ಅಸೂಯೆಯತ್ತ ಮರಳುತ್ತಿದೆ ಎಂದು ಎಚ್ಚರಿಸಿದ ತುಷಾರ್, 75 ವರ್ಷಗಳ ಹಿಂದೆ ಇದ್ದ ಸಮಸ್ಯೆಗಳು, ಈ ವಿಭಜನೆಗಳು ಮುಂದುವರಿದರೆ, ರಾಷ್ಟ್ರವು ವಿಭಜನೆಯಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು, ಏಕೆಂದರೆ ಗಾಂಧಿಯವರ ಒಗ್ಗೂಡಿಸುವ ಚಿಂತನೆಗಳು ಮರೆತುಹೋಗಿವೆ. ನಾಯಕರು ಜನರನ್ನು ಒಗ್ಗೂಡಿಸುವುದಕ್ಕಿಂತ ವಿಭಜನೆಯತ್ತ ಹೆಚ್ಚು ಗಮನಹರಿಸುತ್ತಿದ್ದಾರೆ. ಸಂವಾದದ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕೆಂದು ಗಾಂಧಿ ಪ್ರತಿಪಾದಿಸುತ್ತಿದ್ದರೆ, ಅವರ ತತ್ವಗಳನ್ನು ಜೀವಂತವಾಗಿಟ್ಟುಕೊಂಡು ಸಂಘಟನೆಗಳು ಈಗ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿರುವ ವಿಪರ್ಯಾಸ ಎಂದು ಅವರು ಖಂಡಿಸಿದರು.

ಸಮಾರಂಭವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಾತಿ ಅಸಮಾನತೆಗಳನ್ನು ಎತ್ತಿ ಹಿಡಿದವರೇ ಮಹಾತ್ಮರ ಹತ್ಯೆಗೆ ಕಾರಣರಾಗಿದ್ದಾರೆ ಎಂದು ಪ್ರತಿಪಾದಿಸಿದರು. ಜಾತಿ ಮತ್ತು ಧರ್ಮದ ಆಧಾರದ ಮೇಲೆ ಸಮಾಜದಲ್ಲಿ ವಿಭಜನೆಗಳು ಹೆಚ್ಚುತ್ತಿರುವ ಅಸಮಾನತೆಗೆ ಕಾರಣವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

SCROLL FOR NEXT