ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: 20 ದಿನದ ಹಸುಗೂಸು ಕೊಲ್ಲುವುದಾಗಿ ಬೆದರಿಕೆ ಹಾಕಿದ ವ್ಯಕ್ತಿಯ ಕೊಲೆ

ಮೃತನನ್ನು ಕಾರ್ಖಾನೆಯ ಉದ್ಯೋಗಿ ಸಲ್ಮಾನ್ ಖಾನ್ ಎಂದು ಗುರುತಿಸಲಾಗಿದೆ. ಸಲ್ಮಾನ್ ಖಾನ್ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಆರು ಪ್ರಕರಣಗಳಿವೆ.

ಬೆಂಗಳೂರು: 20 ದಿನದ ಮಗುವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ ವ್ಯಕ್ತಿಯನ್ನು ಸಂಬಂಧಿಕರೇ ಕೊಲೆ ಮಾಡಿರುವ ಘಟನೆ ಮಂಗಳವಾರ ಮುಂಜಾನೆ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮೃತನನ್ನು ಕಾರ್ಖಾನೆಯ ಉದ್ಯೋಗಿ ಸಲ್ಮಾನ್ ಖಾನ್ ಎಂದು ಗುರುತಿಸಲಾಗಿದೆ. ಸಲ್ಮಾನ್ ಖಾನ್ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಆರು ಪ್ರಕರಣಗಳಿವೆ. ಆರೋಪಿಗಳನ್ನು ಸಲ್ಮಾನ್ ನ ಸಂಬಂಧಿಕರಾದ ಉಮರ್ (40) ಮತ್ತು ಸೈಯದ್ ಅನ್ಸಾರಿ (36) ಹಾಗೂ ಇಬ್ಬರು ಆರೋಪಿಗಳ ಸ್ನೇಹಿತ ಮೊಹಮ್ಮದ್ ಶೋಯೆಬ್ (27) ಎಂದು ಗುರುತಿಸಲಾಗಿದೆ. ಖಾನ್ ಮದ್ಯವ್ಯಸನಿಯಾಗಿದ್ದು, ಆಗಾಗ್ಗೆ ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ಸಂಜೆ, ದಂಪತಿಗಳು ಜಗಳವಾಡಿದ್ದರು, ಈ ಸಂದರ್ಭದಲ್ಲಿ ಖಾನ್ ಪತ್ನಿ ' 112' ಸಹಾಯವಾಣಿಗೆ ಕರೆ ಮಾಡಿದರು. ಪೋಲೀಸರು ಅಲ್ಲಿಗೆ ಬರುತ್ತಿದ್ದಾರೆ ಎಂದು ತಿಳಿದ ಖಾನ್ ಅಲ್ಲಿಂದ ಹೊರಟುಹೋಗಿದ್ದ.

ಪೊಲೀಸರಿಗೆ ಪತ್ನಿ ಕರೆ ಮಾಡಿದ್ದರಿಂದ ಕೋಪಗೊಂಡ ಖಾನ್ ಮಂಗಳವಾರ ಮುಂಜಾನೆ ಹಿಂತಿರುಗಿದ್ದ, ತನ್ನ ಸ್ವಂತ ಬೈಕ್‌ಗೆ ಬೆಂಕಿ ಹಚ್ಚಿ, ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ. ತನ್ನ ಸುರಕ್ಷತೆಯ ಭಯದಿಂದ ಖಾನ್ ಪತ್ನಿ ತನ್ನ ಸಂಬಂಧಿಕರಾದ ಉಮರ್ ಮತ್ತು ಅನ್ಸಾರಿ ಅವರನ್ನು ಸಹಾಯಕ್ಕಾಗಿ ಕರೆದಿದ್ದರು. ಅವರಿಬ್ಬರು ತಮ್ಮ ಸ್ನೇಹಿತ ಶೋಯೆಬ್‌ನೊಂದಿಗೆ ಆಗಮಿಸಿದರು, ತೀವ್ರ ವಾಗ್ವಾದ ನಡೆಯಿತು. ಈ ವೇಳೆ ಖಾನ್ ತನ್ನ ಮಗುವನ್ನು ಚಾಕುವಿನಿಂದ ಕೊಲ್ಲುವುದಾಗಿ ಬೆದರಿಕೆ ಹಾಕಿದನು. ಮಗುವನ್ನು ರಕ್ಷಿಸುವ ಯತ್ನದಲ್ಲಿ ಆರೋಪಿಗಳು ಖಾನ್ ಮೇಲೆ ಮರದ ಕೋಲಿನಿಂದ ಹಲ್ಲೆ ನಡೆಸಿ ಮಗುವನ್ನು ಕಿತ್ತುಕೊಂಡಿದ್ದಾರೆ. ಆರೋಪಿಗಳು ಖಾನ್‌ನಿಂದ ಚಾಕುವನ್ನು ಕಸಿದುಕೊಂಡು ಹಲವು ಬಾರಿ ಇರಿದಿದ್ದಾರೆ. ಖಾನ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi blast: ಸ್ಫೋಟಕ್ಕೂ ಮುನ್ನ 'ಆತ್ಮಾಹುತಿ ಬಾಂಬ್ ದಾಳಿ' ಬಗ್ಗೆ ಮಾತಾಡಿದ ಡಾ. ಉಮರ್; ಉಗ್ರ ಹೇಳಿದ್ದೇನು?

Delhi Red Fort blast: ಅಲ್-ಫಲಾಹ್ ವಿಶ್ವವಿದ್ಯಾಲಯದ ಕಚೇರಿ-25 ಸ್ಥಳಗಳ ಮೇಲೆ ED ದಾಳಿ, ತೀವ್ರ ಶೋಧ..!

ಪಶ್ಚಿಮ ಬಂಗಾಳ: SIR ಸಮಯದಲ್ಲಿ ನಕಲಿ, ಮೃತ ಮತದಾರರನ್ನು ಪತ್ತೆಹಚ್ಚಲು ECಯಿಂದ AI ಬಳಕೆ!

ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಕೃಷ್ಣಮೃಗಗಳ ಮಾರಣಹೋಮ: 31ಕ್ಕೇರಿದ ಸಾವಿನ ಸಂಖ್ಯೆ, ನಿರ್ಲಕ್ಷ್ಯವೇ ಕಾರಣ ಎಂದ ತಜ್ಞರು

ಸೌದಿ ಅರೇಬಿಯಾ ಬಸ್ ದುರಂತ ಪ್ರಕರಣ: 45 ಮಂದಿ ಪೈಕಿ ಓರ್ವ ಕನ್ನಡಿಗನೂ ಬಲಿ, ಜೀವನಾಧಾರ ಕಳೆದುಕೊಂಡ ಹುಬ್ಬಳ್ಳಿ ಕುಟುಂಬ..!

SCROLL FOR NEXT