ಮಂಡಿಯ ವೃದ್ಧಾಶ್ರಮದಲ್ಲಿ ಸಿಕ್ಕಿದ ಮಹಿಳೆ ಸಾಕಮ್ಮ  
ರಾಜ್ಯ

23 ವರ್ಷಗಳ ನಂತರ ಕುಟುಂಬಸ್ಥರಿಗೆ ಸಿಕ್ಕಿದ ಮಾನಸಿಕ ಅಸ್ವಸ್ಥ ಮಹಿಳೆ!

ಕೆಲವು ದಿನಗಳ ಹಿಂದೆ ಹಾಸನದ ಪ್ರೊಬೇಷನರಿ ಐಪಿಎಸ್ ಅಧಿಕಾರಿ ರವಿನಂದನ್ ಬಿಎಂ ಅವರನ್ನು ವೃದ್ಧಾಶ್ರಮದಲ್ಲಿ ಭೇಟಿಯಾದಾಗ ಆಕೆಯ ಜೀವನದಲ್ಲಿ ಮಹತ್ವದ ತಿರುವು ಸಿಕ್ಕಿದೆ.

ಬೆಂಗಳೂರು: 23 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ 50ರ ಹರೆಯದ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರಿಗೆ ಮತ್ತೆ ಕುಟುಂಬದವರ ಜೊತೆ ಸಂಗಮವಾಗುವ ಸೌಭಾಗ್ಯ ಸಿಕ್ಕಿದೆ. ಹಿಮಾಚಲ ಪ್ರದೇಶದ ಮಂಡಿಯಲ್ಲಿರುವ ವೃದ್ಧಾಶ್ರಮದಲ್ಲಿ ಸಾಕಮ್ಮ ಪತ್ತೆಯಾಗಿದ್ದಾರೆ. ಇವರು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಡಣನಾಯಕನಕೆರೆ ಗ್ರಾಮದವರು.

ಕೆಲವು ದಿನಗಳ ಹಿಂದೆ ಹಾಸನದ ಪ್ರೊಬೇಷನರಿ ಐಪಿಎಸ್ ಅಧಿಕಾರಿ ರವಿನಂದನ್ ಬಿಎಂ ಅವರನ್ನು ವೃದ್ಧಾಶ್ರಮದಲ್ಲಿ ಭೇಟಿಯಾದಾಗ ಆಕೆಯ ಜೀವನದಲ್ಲಿ ಮಹತ್ವದ ತಿರುವು ಸಿಕ್ಕಿದೆ. ಬೆಂಗಳೂರಿನಲ್ಲಿ ತನ್ನ ಸ್ನೇಹಿತ ವಿಜಯ್ ಕುಮಾರ್ ಅವರೊಂದಿಗೆ ಸಾಕಮ್ಮನ ವೀಡಿಯೊವನ್ನು ಹಂಚಿಕೊಂಡ ಅವರು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ, ಸಮಾಜ ಕಲ್ಯಾಣ ಇಲಾಖೆಗೆ ಟ್ಯಾಗ್ ಮಾಡಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ತರಗತಿಗಳನ್ನು ನಡೆಸುವ ವಿಜಯ್ ಕುಮಾರ್, ಟಿಎನ್‌ಐಇ ಜೊತಗೆ ಮಾತನಾಡಿ, ವೃದ್ಧಾಶ್ರಮವನ್ನು ನಡೆಸುವವರು ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಕೆಲಸ ಮಾಡುವ ರವಿನಂದನ್‌ಗೆ ತಿಳಿಸಿದ್ದರು. ಒಬ್ಬ ಮಹಿಳೆ ಇದ್ದು, ಅವರು ಕನ್ನಡ ಮಾತ್ರ ಮಾತನಾಡುತ್ತಾರೆ ಎಂದರು. ರವಿನಂದನ್ ಸಾಕಮ್ಮ ಅವರನ್ನು ಭೇಟಿ ಮಾಡಿ ವಿಡಿಯೋ ರೆಕಾರ್ಡ್ ಮಾಡಿದ್ದು, ಅದರಲ್ಲಿ ತಾನು ಬಳ್ಳಾರಿ ಜಿಲ್ಲೆಯ ಹೊಸಪೇಟೆಯ (ಈಗ ವಿಜಯನಗರ ಜಿಲ್ಲೆ) ಡಣನಾಯಕನಕೆರೆ ಗ್ರಾಮದವಳು ಎಂದು ಹೇಳಿಕೊಂಡಿದ್ದರು.

ತನ್ನ ಊರಿನಲ್ಲಿ ನಡೆದ ಕೌಟುಂಬಿಕ ಕಾರ್ಯಕ್ರಮವೊಂದರಲ್ಲಿ ನಾಪತ್ತೆಯಾದ ಬಳಿಕ ಸಾಕಮ್ಮ ಭಿಕ್ಷೆ ಬೇಡುತ್ತಾ ವಿವಿಧ ಪಟ್ಟಣ, ನಗರಗಳ ಬೀದಿಗಳಲ್ಲಿ ಬದುಕಿ ಕೊನೆಗೆ ಎರಡು ವರ್ಷಗಳ ಹಿಂದೆ ರೈಲಿನಲ್ಲಿ ಹಿಮಾಚಲ ಪ್ರದೇಶ ತಲುಪಿದ್ದರು.

ಸಾಕಮ್ಮ ತನ್ನ ಸಹೋದರ, ಕುಟುಂಬದ ಹೆಸರು ಮತ್ತು ವಾಸವಿರುವ ವಿಳಾಸ ಹೇಳಿಕೊಂಡರು. ರವಿನಂದನ್ ಅವರು ವೀಡಿಯೊವನ್ನು ಕುಮಾರ್‌ಗೆ ಕಳುಹಿಸಿದರು, ಅವರು ಆರಂಭದಲ್ಲಿ ಅದನ್ನು ತಮ್ಮ ವಿದ್ಯಾರ್ಥಿಗಳು ಮತ್ತು ಅವರ ವಾಟ್ಸಾಪ್ ಗುಂಪುಗಳೊಂದಿಗೆ ಹಂಚಿಕೊಂಡರು, ಬಳ್ಳಾರಿಯಿಂದ ಯಾರಾದರೂ ಅವರನ್ನು ಗುರುತಿಸುತ್ತಾರೆಯೇ ಎಂದು ನೋಡಿದರು.

ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಕುಮಾರ್ ಅವರು ಡಿಸೆಂಬರ್ 13 ರಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ ಮಣಿವಣ್ಣನ್ ಮತ್ತು ಇಲಾಖೆಯ ಸಹಾಯವಾಣಿ ಸಂಖ್ಯೆಯನ್ನು ಟ್ಯಾಗ್ ಮಾಡಿದ್ದರು.

ಮಣಿವಣ್ಣನ್ ಅವರು ಶೀಘ್ರವೇ ಪ್ರತಿಕ್ರಿಯಿಸಿದರು. ಬಳ್ಳಾರಿ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸಮನ್ವಯಗೊಳಿಸಿದರು. ಸ್ಥಳೀಯ ಅಧಿಕಾರಿಗಳು ಸಾಕಮ್ಮ ಅವರ ಕುಟುಂಬ ಸದಸ್ಯರನ್ನು ಪತ್ತೆಹಚ್ಚಿದ ನಂತರ, ಮೂವರನ್ನು ವಿಮಾನ ಮೂಲಕ ಬೆಂಗಳೂರಿಗೆ ಕರೆತರಲಾಯಿತು.

ನಿನ್ನೆ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ, ಸಾಕಮ್ಮ ಅವರನ್ನು ಕುಟುಂಬದೊಂದಿಗೆ ಮತ್ತೆ ಸೇರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಕುಮಾರ್ ಅವರನ್ನು ಶ್ಲಾಘಿಸಿದರು.

ಸಾಕಮ್ಮ ಅವರ ಮೂರನೇ ಮಗ, ದಿನಗೂಲಿ ನೌಕರ ವಿಕ್ರಂ ತಾಯಿ ಸಿಕ್ಕಿದ ಬಗ್ಗೆ ಖುಷಿಪಟ್ಟಿದ್ದಾರೆ. 23 ವರ್ಷಗಳ ನಂತರ ತಾಯಿಯನ್ನು ನೋಡುತ್ತಿರುವುದು ತುಂಬಾ ಸಂತೋಷವಾಗಿದೆ. ಕೌಟುಂಬಿಕ ಕಾರ್ಯಕ್ರಮದ ವೇಳೆ ಆಕೆಯನ್ನು ಕಳೆದುಕೊಂಡೆವು. ಅವಳಿಗಾಗಿ ನಾವು ಒಂದು ವಾರದ ಹುಡುಕಾಟವು ವ್ಯರ್ಥವಾದ ನಂತರ, ನನ್ನ ತಂದೆ ಪೊಲೀಸರಿಗೆ ದೂರು ನೀಡಿದರು. ನಂತರ ನಾವು ಭರವಸೆ ಕಳೆದುಕೊಂಡೆವು. ಎರಡು ವರ್ಷಗಳ ಹಿಂದೆ, ಅವಳು ಇನ್ನಿಲ್ಲ ಎಂದು ನಂಬಿ ಅಂತ್ಯಕ್ರಿಯೆ ಮಾಡಿದ್ದೇವೆ. ಆದರೆ ಕೆಲವು ದಿನಗಳ ಹಿಂದೆ ಬಳ್ಳಾರಿಯ ಅಧಿಕಾರಿಗಳು ನನ್ನ ಚಿಕ್ಕಮ್ಮನಿಗೆ ವೀಡಿಯೊ ತೋರಿಸಿದಾಗ ಗುರುತಿಸಿದರು. ಅಮ್ಮ ನೆನಪಿನ ಶಕ್ತಿ ಕಳೆದುಕೊಂಡಿದ್ದರೂ, ನಮ್ಮನ್ನು ಗುರುತು ಹಿಡಿಯುವ ಸ್ಥಿತಿಯಲ್ಲಿಲ್ಲದಿದ್ದರೂ ಕೂಡ ನಮಗೆ ಮರಳಿ ಸಿಕ್ಕಿದ್ದು ತುಂಬಾ ಖುಷಿ ತಂದಿದೆ. ಇನ್ನು ಮುಂದೆ ಜೋಪಾನವಾಗಿ ನೋಡಿಕೊಳ್ಳುತ್ತೇವೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT