ಬಿಡಿಎ 
ರಾಜ್ಯ

ಅಕ್ರಮವಾಗಿ ಬಿಡಿಎ ನಿವೇಶನ ಖರೀದಿಸುವವರಿಗೆ ಸರ್ಕಾರದಿಂದ ಶುಲ್ಕ ನಿಗದಿ

ಬಿಡಿಎ ನಿವೇಶನ ಹಂಚಿಕೆಯಾಗಿರುವವರಿಗೆ ವಿಧಿಸಲಾಗಿರುವ ನಿಬಂಧನೆಗಳ ಅವಧಿ ಪೂರ್ಣಗೊಳ್ಳುವ ಮುನ್ನವೇ ಅವರಿಂದ ಅಕ್ರಮವಾಗಿ ನಿವೇಶನ ಖರೀದಿಸುವವರಿಗೆ  ಸರ್ಕಾರದಿಂದ ಶುಲ್ಕ ನಿಗದಿಯಾಗಿದೆ.

ಬೆಂಗಳೂರು: ಬಿಡಿಎ ನಿವೇಶನ ಹಂಚಿಕೆಯಾಗಿರುವವರಿಗೆ ವಿಧಿಸಲಾಗಿರುವ ನಿಬಂಧನೆಗಳ ಅವಧಿ ಪೂರ್ಣಗೊಳ್ಳುವ ಮುನ್ನವೇ ಅವರಿಂದ ಅಕ್ರಮವಾಗಿ ನಿವೇಶನ ಖರೀದಿ-ಮಾರಾಟ ಮಾಡುವವರಿಗೆ ಸರ್ಕಾರದಿಂದ ಶುಲ್ಕ ನಿಗದಿಯಾಗಿದೆ.

ಸರ್ಕಾರದ ನಿರ್ಧಾರದಿಂದ ಸಾವಿರಾರು ಮಂದಿ ಖರೀದಿದಾರರಿಗೆ ಅನುಕೂಲವಾಗಲಿದೆ. ಅಕ್ರಮ ಸಕ್ರಮಕ್ಕಾಗಿ ಸರ್ಕಾರ ಬಿಡಿಎ (ನಿವೇಶನ ಹಂಚಿಕೆ) ನಿಯಮ 1984ರ ತಿದ್ದುಪಡಿಗೆ ಶೀಘ್ರವೇ ಗೆಝೆಟ್ ಅಧಿಸೂಚನೆ ಪ್ರಕಟಿಸಲಿದೆ.

ಬಿಡಿಎ ಆಯುಕ್ತ ಎನ್ ಜಯರಾಮ್ ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದು, "ಬಿಡಿಎ ನಿವೇಶನದ ಮಾಲಿಕರಿಗೆ ನಿವೇಶನ ಹಂಚಿಕೆಯಾಗಿ ಖರೀದಿ ಮಾಡಿದ ದಿನದಿಂದ 10 ವರ್ಷಗಳವರೆಗೆ ಬೇರೆಯವರಿಗೆ ಮಾರಾಟ ಮಾಡಬಾರದೆಂಬ ನಿಬಂಧನೆ ಇದೆ, ಆದರೆ ಈ ನಿಬಂಧನೆಗಳನ್ನು ಮೀರಿ ಕೆಲವು ಬಿಡಿಎ ಮಾಲಿಕರು ಈ ಹಿಂದೆ ನಿವೇಶನಗಳನ್ನು ಮಾರಾಟ ಮಾಡಿದ್ದಾರೆ. ಬಿಡಿಎ ಮಾಲಿಕರಿಗೆ ನಿವೇಶನ ಹಂಚಿಕೆ ಮಾಡುವಾಗ ಭೋಗ್ಯ-ಮಾರಾಟ ಡೀಡ್ ನ್ನು ನೀಡಲಾಗುತ್ತದೆ. ಆದಾಗ್ಯೂ, ಸೈಟ್‌ನ ಸಂಪೂರ್ಣ ಮಾರಾಟ ಪತ್ರವು ಇನ್ನೂ ಬಿಡಿಎ ಸ್ವಾಧೀನದಲ್ಲಿರುವುದರಿಂದ ಈ ಡೀಡ್ ಕಾನೂನುಬದ್ಧವಾಗಿ ಮಾನ್ಯವಾಗಿಲ್ಲ. ಖರೀದಿಸಿದ ಒಂದು ದಶಕದ ನಂತರ ಮಾತ್ರ ಇದನ್ನು ಮೂಲ ಮಾಲೀಕರಿಗೆ ಹಸ್ತಾಂತರಿಸಲಾಗುತ್ತದೆ ಎಂದು ವಿವರಿಸಿದ್ದಾರೆ.

ಹೊಸ ನಿಯಮಗಳ ಪ್ರಕಾರ, ಖರೀದಿದಾರರು ಸಂಪೂರ್ಣ ಸೇಲ್ ಡೀಡ್ ಪಡೆಯಲು ಬಿಡಿಎಗೆ ಸೈಟ್ ಖರೀದಿಯ ಸಮಯದಲ್ಲಿ ಪ್ರಚಲಿತದಲ್ಲಿರುವ ಮಾರ್ಗದರ್ಶಿ ಮೌಲ್ಯದ 25% ಪಾವತಿಸಬೇಕಾಗುತ್ತದೆ. ಈ ಡಾಕ್ಯುಮೆಂಟ್ ನಿವೇಶನದ ಕ್ರಮಬದ್ಧತೆಯನ್ನು ಖಚಿತಪಡಿಸುತ್ತದೆ.

“ನಿವೇಶನವನ್ನು ಕ್ರಮಬದ್ಧಗೊಳಿಸಲು ಕೋರುವ ಕಡತವು ಸರ್ಕಾರಕ್ಕೆ ಹೋಗುತ್ತದೆ ಮತ್ತು ಮೊತ್ತವನ್ನು ಅಂತಿಮಗೊಳಿಸಲು ಸಮಯ ತೆಗೆದುಕೊಳ್ಳುತ್ತದೆ. ಈ ಹೊಸ ನಿಯಮ ಸೈಟ್ ನ್ನು ಸಕ್ರಮಗೊಳಿಸಲು ಪಾವತಿಸಬೇಕಾದ ನಿಜವಾದ ಮೊತ್ತದ ಬಗ್ಗೆ ಖರೀದಿದಾರರಿಗೆ ಸ್ಪಷ್ಟ ಕಲ್ಪನೆಯನ್ನು ಹೊಂದಲು ಅನುವು ಮಾಡಿಕೊಡುತ್ತದೆ, "ಎಂದು ಅಧಿಕಾರಿಯೊಬ್ಬರು ವಿವರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT