ಕೊಪ್ಪಳ: ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಸಮೀಪದ ಹೊಸಲಿಂಗಪುರ ಗ್ರಾಮದಲ್ಲಿರುವ ವಿದ್ಯುತ್ ಗುತ್ತಿಗೆದಾರ ವೀರನಗೌಡ ಪಾಟೀಲ್ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ.
ಪಾಟೀಲ್ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಆಪ್ತರು ಎನ್ನಲಾಗಿದೆ. ಬೆಂಗಳೂರಿನ 8 ಸ್ಥಳಗಳಲ್ಲಿ ದಾಳಿ ನಡೆಸಿದ ಐಟಿ ಅಧಿಕಾರಿಗಳು, ಗೋವಾ ಮತ್ತು ಹುಬ್ಬಳ್ಳಿಯಲ್ಲೂ ದಾಳಿ ನಡೆಸಿ ಇಡೀ ದಿನ ದಾಖಲೆಗಳನ್ನು ಪರಿಶೀಲಿಸಿದರು.
ಬೆಂಗಳೂರಿನಲ್ಲಿ 8ಕ್ಕೂ ಹೆಚ್ಚು ಸ್ಥಳಗಳಲ್ಲಿ, ಬಳ್ಳಾರಿಯ ಎರಡು ಸ್ಥಳಗಳಲ್ಲಿ ಮತ್ತು ಕೊಪ್ಪಳ ಪಟ್ಟಣದ ಸಮೀಪದ ಹೊಸಲಿಂಗಪುರದಲ್ಲಿ ಐಟಿ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ.
ಇದನ್ನು ಓದಿ: ಬಿಜೆಪಿ ನಾಯಕರ ತಿರುಚಿದ ಫೋಟೋ ಹಂಚಿಕೆ: ಡಿಕೆ ಶಿವಕುಮಾರ್, ಬಿಆರ್ ನಾಯ್ಡು ವಿರುದ್ಧ FIR ದಾಖಲಿಸಲು ಕೋರ್ಟ್ ಸೂಚನೆ
ಬುಧವಾರ ಬೆಳಗ್ಗೆಯಿಂದ ಪಾಟೀಲ್ ಅವರ ಮನೆ, ಕಚೇರಿ ಸ್ಥಳಗಳಲ್ಲಿ ಅಧಿಕಾರಿಗಳು ಶೋಧ ನಡೆಸುತ್ತಿದ್ದು, ಹಲವು ಆಸ್ತಿಗಳ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದ್ದು, ಗುರುವಾರವೂ ದಾಳಿ ಮುಂದುವರಿಯುವ ನಿರೀಕ್ಷೆ ಇದೆ.
ಪಾಟೀಲ್ ಅವರ ನಿವಾಸದಲ್ಲಿ ಈವರೆಗೆ 16 ಐಷಾರಾಮಿ ಕಾರುಗಳನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಇತ್ತೀಚಿಗೆ ಗವಿಮಠದ ವಾರ್ಷಿಕ ಜಾತ್ರೆಯ ವೇಳೆ ಶಿವಕುಮಾರ್ ಅವರೊಂದಿಗೆ ಪಾಟೀಲ್ ಕಾಣಿಸಿಕೊಂಡ ನಂತರವೇ ಅವರು ಉಪಮುಖ್ಯಮಂತ್ರಿಯವರ ಆಪ್ತ ಎಂಬುದು ಹಲವರಿಗೆ ಗೊತ್ತಾಗಿದೆ.
ಡಿಸಿಎಂ ಭೇಟಿಯ ನಂತರ ಪಾಟೀಲ್ ಪ್ರಚಾರಕ್ಕೆ ಬಂದಿದ್ದು, ದಾಳಿಗೆ ಕಾರಣವಾಗಿರಬಹುದು ಎಂದು ಮೂಲಗಳು ತಿಳಿಸಿವೆ.
ಪಾಟೀಲ್ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಆಪ್ತರಾಗಿದ್ದು, ಕಳೆದ ವಾರ ಕೊಪ್ಪಳದ ಗವಿಮಠದ ಜಾತ್ರೆಗೆ ಆಗಮಿಸಿದ್ದ ಸಂದರ್ಭದಲ್ಲಿ ಪಾಟೀಲ್ ಅವರ ಶಾರದ ಇಂಟರ್ನ್ಯಾಶನಲ್ ಸ್ಕೂಲ್ಗೆ ಡಿಸಿಎಂ ಭೇಟಿ ನೀಡಿದ್ದರು.