ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ  
ರಾಜ್ಯ

ಮಂಗಳೂರು: ಜೆರೋಸಾ ಶಾಲೆ ಶಿಕ್ಷಕಿ ಕೇಸು, ಐವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

Sumana Upadhyaya

ಬೆಂಗಳೂರು: ಮಂಗಳೂರಿನ ಸೇಂಟ್ ಜೆರೋಸಾ ಹೈಸ್ಕೂಲ್ ಘಟನೆಗೆ ಸಂಬಂಧಿಸಿದಂತೆ ಮಾಜಿ ಮತ್ತು ಹಾಲಿ ಸಂಸದರು/ಶಾಸಕರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯವು ಮಂಗಳೂರಿನ ಇಬ್ಬರು ಶಾಸಕರು, ಇಬ್ಬರು ಕಾರ್ಪೊರೇಟರ್‌ಗಳು ಮತ್ತು ವಿಹೆಚ್ ಪಿ ಮುಖಂಡರೊಬ್ಬರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಆರೋಪಿಗಳು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಮಂಗಳೂರು ಉತ್ತರ ಶಾಸಕ ಡಾ ವೈ ಭರತ್ ಶೆಟ್ಟಿ, ವಿಹೆಚ್ ಪಿ ಮುಖಂಡ ಶರಣ್ ಕುಮಾರ್ ಅಲಿಯಾಸ್ ಶರಣ್ ಪಂಪ್‌ವೆಲ್ ಮತ್ತು ಮಂಗಳೂರು ಮಹಾನಗರ ಪಾಲಿಕೆ ಕಾರ್ಪೊರೇಟರ್‌ಗಳಾದ ಸಂದೀಪ್ ಮತ್ತು ಭರತ್ ಕುಮಾರ್ ಆಗಿದ್ದಾರೆ.

ಶಾಲೆಯ ಶಿಕ್ಷಕಿ ಸಿಸ್ಟರ್ ಪ್ರಭಾ ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎಂಬುದು ಆರೋಪವಾಗಿದೆ. ಫೆಬ್ರವರಿ 12 ರಂದು, ಜನರು ಧಾರ್ಮಿಕ ಭಾವನೆಗಳ ಮೇಲೆ ಪ್ರಚೋದನೆಗೆ ಕಾರಣರಾದ ಅರ್ಜಿದಾರರ ಬೆಂಬಲದೊಂದಿಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರತಿಭಟನೆ ನಡೆಸಿದರು. ಘಟನೆಯ ಎರಡು ದಿನಗಳ ನಂತರ, ಫೆಬ್ರವರಿ 14 ರಂದು ಅನಿಲ್ ಜೆರಾಲ್ಡ್ ಲೋಬೋ ಎಂಬುವವರು ಎಫ್‌ಐಆರ್ ದಾಖಲಿಸಿದ್ದರು.

ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಸಾಕ್ಷಿಗಳ ಮೇಲೆ ಸಿಸ್ಟರ್ ಪ್ರಭಾ ಅವರು ಹಿಂದೂ ಸಮುದಾಯ ಬಗ್ಗೆ ಅವಹೇಳನಕಾರಿ ಮಾತುಗಳನ್ನು ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಶಾಲೆಯ ಮುಂದೆ ಗಲಾಟೆ ನಡೆದಿತ್ತು ಎಂದು ನ್ಯಾಯಾಧೀಶರಾದ ಸಂತೋಷ ಗಜಾನನ ಭಟ್ ಗಮನಕ್ಕೆ ತಂದರು.

ಅರ್ಜಿದಾರರ ಮೇಲಿನ ಆರೋಪಗಳನ್ನು ತಳ್ಳಿಹಾಕಿದ ಹಿರಿಯ ವಕೀಲ ಅರುಣ್ ಶ್ಯಾಮ, ಸಾರ್ವಜನಿಕರನ್ನು ಸಮಾಧಾನಪಡಿಸಲು ಮಾತ್ರ ಶಾಲಾ ಆವರಣಕ್ಕೆ ಭೇಟಿ ನೀಡಿದ್ದು, ಸ್ಥಳದಲ್ಲಿದ್ದ ಪೊಲೀಸರು ಯಾವುದೇ ದೂರು ದಾಖಲಿಸದ ಕಾರಣ ಅರ್ಜಿದಾರರು ಘಟನೆಗೆ ಜವಾಬ್ದಾರರಲ್ಲ ಎಂದು ವಾದಿಸಿದರು. ಘಟನೆ ನಡೆದ ಎರಡು ದಿನಗಳ ನಂತರ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದರು, ಆದರೆ ಶಾಲೆಯ ಅಧಿಕಾರಿಗಳು ಅಲ್ಲ ಎಂದರು.

ಜಾಮೀನು ಅರ್ಜಿಯನ್ನು ವಿರೋಧಿಸಿದ ಸರ್ಕಾರಿ ಅಭಿಯೋಜಕರು ಅರ್ಜಿದಾರರು ಜನಪ್ರತಿನಿಧಿಗಳಾಗಿದ್ದು, ಕೀಳಾಗಿ ವರ್ತಿಸಬಾರದು, ಸಾರ್ವಜನಿಕರನ್ನು ಪ್ರಚೋದಿಸಬಾರದು ಮತ್ತು ವಿದ್ಯಾರ್ಥಿಗಳ ಮೇಲೆ ಗಂಭೀರ ಪರಿಣಾಮ ಬೀರುವ ಗಲಭೆಗಳನ್ನು ಸೃಷ್ಟಿಸಬಾರದು ಎಂದು ವಾದಿಸಿದರು. ಆದಾಗ್ಯೂ, ಅರ್ಜಿದಾರರು ಶಾಲೆಯ ಬಳಿ ಗಲಾಟೆ ಮಾಡಲು ಜನರನ್ನು ಪ್ರಚೋದಿಸಲು ಅಥವಾ ಸಿಸ್ಟರ್ ಪ್ರಭಾಗೆ ಬೆದರಿಕೆ ಹಾಕಲು ಅಥವಾ ಯಾವುದೇ ತಪ್ಪಿಲ್ಲದೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸದ ಹೊರತು ಜಾಮೀನು ನಿರಾಕರಿಸಲಾಗುವುದಿಲ್ಲ ಎಂದು ನ್ಯಾಯಾಲಯ ಗಮನಿಸಿತು.

SCROLL FOR NEXT