ಬಸವೇಶ್ವರ ಬಸ್ ಟರ್ಮಿನಲ್, ಪೀಣ್ಯ 
ರಾಜ್ಯ

'ಬಿಳಿಯಾನೆ'ಯಂತಾದ ಪೀಣ್ಯ ಬಸ್‌ ಟರ್ಮಿನಲ್‌: ಮಳಿಗೆಗಳು ಖಾಲಿ ಖಾಲಿ, ಆದಾಯ ಶೂನ್ಯ!

ತುಮಕೂರು ರಸ್ತೆಯ ಪೀಣ್ಯದಲ್ಲಿರುವ ಬಸವೇಶ್ವರ ಬಸ್ ಟರ್ಮಿನಲ್ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಅತಿದೊಡ್ಡ ಬಿಳಿ ಆನೆಯಂತಾಗಿದೆ.

ಬೆಂಗಳೂರು: ತುಮಕೂರು ರಸ್ತೆಯ ಪೀಣ್ಯದಲ್ಲಿರುವ ಬಸವೇಶ್ವರ ಬಸ್ ಟರ್ಮಿನಲ್ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಅತಿದೊಡ್ಡ ಬಿಳಿ ಆನೆಯಂತಾಗಿದೆ.

ಟರ್ಮಿನಲ್ ಅನ್ನು ಎಲೆಕ್ಟ್ರಿಕ್ ಬಸ್ ಡಿಪೋ ಆಗಿ ಪರಿವರ್ತಿಸಲು ಈ ಹಿಂದೆ ಯೋಜಿಸಲಾಗಿತ್ತು, ಆದರೆ, ಈಗ, ಬಸ್ ಟರ್ಮಿನಲ್ ಅನ್ನು ವಾಣಿಜ್ಯ ಬಾಡಿಗೆದಾರರಿಗೆ ನೀಡಲು ನಿಗಮವು ಗಮನಹರಿಸಿದೆ. ಟರ್ಮಿನಲ್ ನಿರ್ಮಿಸಿದ ಉದ್ದೇಶ ಈಡೇರದ ಕಾರಣ ನಿಗಮ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.

ಉತ್ತರ ಕರ್ನಾಟಕಕ್ಕೆ ಸಂಚರಿಸುವ ಬಸ್ಸುಗಳನ್ನು ಮೆಜೆಸ್ಟಿಕ್‌ ಬದಲಾಗಿ ಪೀಣ್ಯ ಟರ್ಮಿನಲ್‌ನಿಂದಲೇ ಕಾರ್ಯಾಚರಿಸುವ ಉದ್ದೇಶ ಹೊಂದಲಾಗಿತ್ತು. ಕೆಲ ದಿನ ಈ ಪ್ರಯೋಗ ನಡೆಯಿತಾದರೂ ಯಶಸ್ಸು ಕಾಣಲಿಲ್ಲ. ನಿಗಮಕ್ಕೆ ಹೊರೆಯಾಗಲು ಆರಂಭಿಸಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು.

ಕೆಂಪೇಗೌಡ ಬಸ್ ಟರ್ಮಿನಲ್‌ನಲ್ಲಿ ದಟ್ಟಣೆಯನ್ನು ಸುಗಮಗೊಳಿಸುವ ಏಕೈಕ ಉದ್ದೇಶದಿಂದ 2014 ರಲ್ಲಿ 6 ಎಕರೆ ಜಾಗದಲ್ಲಿ 40 ಕೋಟಿ ರೂಪಾಯಿ ವೆಚ್ಚದಲ್ಲಿ ಬಸ್ ಟರ್ಮಿನಲ್ ನಿರ್ಮಿಸಲಾಗಿದೆ. ಈ ಟರ್ಮಿನಲ್‌ನಿಂದ ಉತ್ತರ ಕರ್ನಾಟಕ ಕಡೆಗೆ ಹೋಗುವ ಎಲ್ಲಾ ಬಸ್‌ಗಳನ್ನು ಓಡಿಸುವ ಪ್ರಯತ್ನ ವಿಫಲವಾಯಿತು, ಏಕೆಂದರೆ ಸಾರ್ವಜನಿಕರಿಂದ ಯಾವುದೇ ಪ್ರೋತ್ಸಾಹ ದೊರೆಯಲಿಲ್ಲ.

KSRTC ವ್ಯವಸ್ಥಾಪಕ ನಿರ್ದೇಶಕ ವಿ ಅನ್ಬುಕುಮಾರ್ ನಿಷ್ಕ್ರಿಯ ಬಸ್ ಟರ್ಮಿನಲ್ ಅನ್ನು ಬಳಕೆಗೆ ತರಲು ಹಲವು ರೀತಿಯ ಕ್ರಮ ಕೈಗೊಂಡರು. ಟರ್ಮಿನಲ್ ಯಾವುದೇ ಉದ್ದೇಶವನ್ನು ಪೂರೈಸಲು ವಿಫಲವಾಗಿದೆ ಮತ್ತು ಅದು ಬಿಳಿ ಆನೆಯಂತಾಗಿದೆ ಎಂದು ಅವರು ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಾಗ ಅವರಿಗೆ ಮನವರಿಕೆಯಾಯಿತು.

ಹೆಚ್ಚಿನ ಇ-ಬಸ್‌ಗಳನ್ನು ಖರೀದಿಸುತ್ತಿರು ಕೆಎಸ್ ಆರ್ ಟಿಸಿ ಈ ನಿಷ್ಕ್ರಿಯ ಬಸ್ ಟರ್ಮಿನಲ್ ಅನ್ನು ಎಲೆಕ್ಟ್ರಿಕ್ ಬಸ್ ಡಿಪೋ ಆಗಿ ಪರಿವರ್ತಿಸಲು ಚರ್ಚೆಗಳು ನಡೆದಿವೆ. ಕೆಎಸ್‌ಆರ್‌ಟಿಸಿ ಈ ಟರ್ಮಿನಲ್ ನಿರ್ವಹಣೆಗಾಗಿ ತಿಂಗಳಿಗೆ 7 ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡುತ್ತಿದೆ, ಟರ್ಮಿನಲ್ ನಿರ್ವಹಿಸಲು ಇತರ ನಿರ್ವಹಣಾ ಸಂಬಂಧಿತ ವೆಚ್ಚಗಳ ಜೊತೆಗೆ ಭದ್ರತಾ ಸಿಬ್ಬಂದಿಯ ವೇತನವೂ ಸೇರಿದೆ. ಇದಕ್ಕಾಗಿಯೇ ನಾವು ವಾಣಿಜ್ಯ ಬಾಡಿಗೆದಾರರನ್ನು ಹುಡುಕುತ್ತಿದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT