ಕರ್ನಾಟಕ ಹಕ್ಕಿಹಬ್ಬ 
ರಾಜ್ಯ

ಬಾಗಲಕೋಟೆ: ಚಿಕ್ಕಸಂಗಮ ಪಕ್ಷಿಧಾಮ ಬಳಿಯ ಆಲಮಟ್ಟಿ ಹಿನ್ನೀರಿನಲ್ಲಿ 'ಕರ್ನಾಟಕ ಹಕ್ಕಿ ಹಬ್ಬ'

ಜನವರಿ 26-28ರವರೆಗೆ ನಡೆಯಲಿರುವ ಈ ಬಾರಿಯ ಹಕ್ಕಿ ಹಬ್ಬ ವಿಭಿನ್ನವಾಗಿರಲಿದೆ. ಈ ಸ್ಥಳ ಚಿಕ್ಕಸಂಗಮ ಪಕ್ಷಿಧಾಮದ ಸಮೀಪದಲ್ಲಿದೆ.

ಬೆಂಗಳೂರು: ಜನವರಿ 26-28ರವರೆಗೆ ನಡೆಯಲಿರುವ ಈ ಬಾರಿಯ ಹಕ್ಕಿ ಹಬ್ಬ ವಿಭಿನ್ನವಾಗಿರಲಿದೆ. ಈ ಸ್ಥಳ ಚಿಕ್ಕಸಂಗಮ ಪಕ್ಷಿಧಾಮದ ಸಮೀಪದಲ್ಲಿದೆ. ಇಲ್ಲಿ ಪ್ರತಿವರ್ಷ ಚಳಿಗಾಲದಲ್ಲಿ ಗ್ರೇಟರ್ ಫ್ಲೆಮಿಂಗೊಗಳು ಹಿಂಡು ಹಿಂಡು ಆಗಮಿಸುತ್ತವೆ. ಹಕ್ಕಿ ಹಬ್ಬಕ್ಕೆ ಆಗಮಿಸುವ ಪಕ್ಷಿ ಪ್ರಿಯರು ಬಾಗಲಕೋಟೆಯ ಆಲಮಟ್ಟಿ ಹಿನ್ನೀರಿನಲ್ಲಿ ನೆನೆಯುವ ಗುಲಾಬಿ ವಲಸೆ ಸುಂದರಿಯರನ್ನು ವೀಕ್ಷಿಸಬಹುದು.

ಈ ಬಾರಿ  ಹಕ್ಕಿ ಉತ್ಸವದ 10ನೇ ಆವೃತ್ತಿ ಚಿಕ್ಕಸಂಗಮ ಪಕ್ಷಿಧಾಮದ ಸಮೀಪದಲ್ಲಿದೆ. ಇಲ್ಲಿ ಗ್ರೇಟರ್ ಫ್ಲೆಮಿಂಗೊಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ. ಆದ್ದರಿಂದ ಈ ಬಾರಿ ಉತ್ಸವದ ಲಾಂಛನವಾಗಿ ಗ್ರೇಟರ್ ಫ್ಲೆಮಿಂಗೊವನ್ನು ಆಯ್ಕೆ ಮಾಡಲಾಗಿದೆ ಎಂದು  ಅರಣ್ಯ, ವನ್ಯಜೀವಿಗಳ ಹೆಚ್ಚುವರಿ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಮತ್ತು ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ (ಕೆಇಡಿಬಿ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕುಮಾರ್ ಪುಷ್ಕರ್ ಟಿಎನ್‌ಐಇಗೆ ತಿಳಿಸಿದರು.

ಚಿಕ್ಕಸಂಗಮ ಪಕ್ಷಿ ಸಂರಕ್ಷಿತ ತಾಣ, ಹೆರಕಲ್‌, ಬೀರಕಬ್ಬಿ ಸೇರಿದಂತೆ 8 ಪ್ರಮುಖ ಸ್ಥಳಗಳಲ್ಲಿಪಕ್ಷಿ ವೀಕ್ಷಣೆಗೆ ಅವಕಾಶವಿದೆ. ಕೊಕ್ಕೆರೆಬೆಳ್ಳೂರು ಅಥವಾ ರಂಗನತಿಟ್ಟು ಅಥವಾ ಇತರ ಸ್ಥಳಗಳಂತೆಯೇ ಇದು ವಲಸೆ ಹಕ್ಕಿಗಳ ಒಂದು ತಾಣವಾಗಿದೆ.ಈ ಬಾರಿ ಇಲ್ಲಿ ಉತ್ಸವ ನಡೆಯದ ಕಾರಣ ಬಾಗಲಕೋಟೆಯನ್ನು ಆಯ್ಕೆ ಮಾಡಲಾಗಿದೆ ಎಂದು ಕೆಇಡಿಬಿಯ ಮತ್ತೊಬ್ಬ ಅಧಿಕಾರಿ ತಿಳಿಸಿದರು.

ರಾಜ್ಯದಲ್ಲಿ 2013 ರಿಂದ ಹಕ್ಕಿ ಹಬ್ಬ ಆಚರಿಸಲಾಗುತ್ತಿದೆ. ಹಕ್ಕಿ ಸಂರಕ್ಷಣೆಯ ಕುರಿತು ಹೆಚ್ಚಿನ ಅರಿವು ಮೂಡಿಸಲು ವಿಶಿಷ್ಟವಾದ ಹಕ್ಕಿ ಮತ್ತು ಜೀವವೈವಿಧ್ಯವನ್ನು ಆಯ್ಕೆ ಮಾಡಲಾಗುತ್ತದೆ. ಇದು ಯುವ ವನ್ಯಜೀವಿ ಉತ್ಸಾಹಿಗಳಲ್ಲಿ ಹಕ್ಕಿಗಳು ಮತ್ತು ಅವುಗಳ ಆವಾಸ ಸ್ಥಾನವನ್ನು ಕಲಿಯಲು ಮತ್ತು ಪ್ರೀತಿಸಲು ಆಸಕ್ತಿಯನ್ನು ಬೆಳೆಸುತ್ತದೆ ಎಂದು ಅವರು ತಿಳಿಸಿದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT