ಕಾವೇರಿ ನದಿ 
ರಾಜ್ಯ

ಎಲ್ಲೆಡೆ, ಎಲ್ಲೆಂದರಲ್ಲಿ ನೀರು, ಆದರೆ ಬೆಳೆಗೆ ಒಂದು ಹನಿಯೂ ಇಲ್ಲ? 'ದೀಪದ ಕೆಳಗೆ ಕತ್ತಲು' ಎಂಬಂತಾಯ್ತು ರೈತರ ಬದುಕು!

ಕಳೆದ ವರ್ಷದ ಭೀಕರ ಬರಗಾಲದ ಪರಿಣಾಮ ಮತ್ತು ತಮಿಳುನಾಡಿನೊಂದಿಗೆ ನಡೆಯುತ್ತಿರುವ ನೀರಿನ ಜಗಳ ಕಾವೇರಿ ಜಲಾನಯನ ಪ್ರದೇಶದ ರೈತರ ಉತ್ಸಾಹವನ್ನು ಕುಗ್ಗಿಸಿದೆ.

ಮೈಸೂರು: ಎರಡು ವರ್ಷಗಳ ನಂತರ ಕೃಷ್ಣರಾಜ ಸಾಗರ ಜಲಾಶಯ ತುಂಬಿ ತುಳುಕುತ್ತಿದ್ದು, ಕೊಡಗು ಜಿಲ್ಲೆ ಹಾಗೂ ಕಬಿನಿ ಜಲಾನಯನ ಪ್ರದೇಶದ ವಯನಾಡು ಭಾಗದಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಭೀಕರ ಬರಗಾಲ ಹಾಗೂ ಬೇಸಿಗೆಯಿಂದ ಕಂಗಾಲಾಗಿದ್ದ ಜನತೆಗೆ ಸಂತಸ ತಂದಿದೆ. ನಿರಂತರ ಮಳೆ ಮತ್ತು ಜಲಾಶಯಗಳು ತುಂಬಿದ್ದರೂ ರೈತರು ತಮ್ಮ ಹೊಲಗಳಿಗೆ ಮರಳಲು ಉತ್ಸುಕರಾಗಿಲ್ಲ.

ಕಳೆದ ವರ್ಷದ ಭೀಕರ ಬರಗಾಲದ ಪರಿಣಾಮ ಮತ್ತು ತಮಿಳುನಾಡಿನೊಂದಿಗೆ ನಡೆಯುತ್ತಿರುವ ನೀರಿನ ಜಗಳ ಕಾವೇರಿ ಜಲಾನಯನ ಪ್ರದೇಶದ ರೈತರ ಉತ್ಸಾಹವನ್ನು ಕುಗ್ಗಿಸಿದೆ. ದಕ್ಷಿಣ ಕರ್ನಾಟಕದ ಜೀವನಾಡಿ ಕಾವೇರಿಯಲ್ಲಿ ಪೂರ್ಣ ಪ್ರಮಾಣದ ನೀರು ಹರಿದು ಬರುತ್ತಿದ್ದು, ಕೆಆರ್ ಎಸ್ ಅಣೆಕಟ್ಟೆ ಯಾವಾಗ ಬೇಕಾದರೂ ಭರ್ತಿಯಾಗುವ ಸಂಭವವಿದ್ದರೂ ಬೆಳೆಗಳಿಗೆ ನೀರು ಬಿಡುವ ಬಗ್ಗೆ ಇನ್ನೂ ಅನಿಶ್ಚಿತತೆ ಇರುವುದರಿಂದ ರೈತ ಸಮುದಾಯದಲ್ಲಿ ಸಂಭ್ರಮ ಸಡಗರವಿಲ್ಲ.

ಕಾವೇರಿ ಜಲಾನಯನ ಪ್ರದೇಶಕ್ಕೆ ಭೇಟಿ ನೀಡಿ ಇದುವರೆಗೆ ಬಿತ್ತನೆಗೆ ಭೂಮಿಯನ್ನು ಸಿದ್ಧಪಡಿಸದ ರೈತರ ಸಂಕಷ್ಟವನ್ನು ಪ್ರದರ್ಶಿಸಿದರು. ಈ ವರ್ಷದ ಆರಂಭದಲ್ಲಿ ಅನೇಕರು ಭತ್ತ ಮತ್ತು ಕಬ್ಬು ಬೆಳೆಯಲು ಪ್ರಯತ್ನಿಸಿದರು. ಸರ್ಕಾರವು ಲೋಕಸಭಾ ಚುನಾವಣೆಯ ಸಮಯದಲ್ಲಿ ನೀರು ಬಿಡುತ್ತದೆ ಎಂದು ಆಶಿಸಿದ್ದರೂ, ಆದರೆ ಸರ್ಕಾರವು ಕಠಿಣವಾದ ನಿಲುವು ತೆಗೆದುಕೊಂಡು ನೀರು ಪೂರೈಕೆ ಮಾಡದ ಕಾರಣ ಅವರ ಭರವಸೆ ಹುಸಿಯಾಯಿತು. ಸಬ್ಬನಕುಪ್ಪೆಯ ರೈತ ಸಿದ್ದೇಗೌಡ ಅವರು ಈಗಾಗಲೇ ಮೂರು ಎಕರೆಯಲ್ಲಿನ ಕಬ್ಬು ಬೆಳೆ ಕಳೆದುಕೊಂಡಿರುವುದರಿಂದ ರಿಸ್ಕ್ ತೆಗೆದುಕೊಳ್ಳುವ ಮನಸ್ಥಿತಿಯಲ್ಲಿಲ್ಲ. ಜಲಾಶಯದಲ್ಲಿ ಸಾಕಷ್ಟು ನೀರಿದ್ದರೂ ಸರ್ಕಾರ ಕಳೆದ ವರ್ಷ ಬೆಳೆದ ಬೆಳೆಗಳಿಗೆ ನೀರು ನೀಡದಿರುವಾಗ ನಾನು ಇನ್ನು ಮುಂದೆ ಹೇಗೆ ಸಾಲ ಮಾಡಿ ಮತ್ತೆ ಕೃಷಿಗೆ ಹೂಡಿಕೆ ಮಾಡುವುದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.

ಒಣಗಿರುವ ಕಬ್ಬಿನ ಬೆಳೆ ತೆಗೆಯಲು ಖರ್ಚು ಮಾಡಿ ಮತ್ತೆ ಗದ್ದೆ ಉಳುಮೆ ಮಾಡಿ ಭತ್ತದ ನಾಟಿಗೆ ತಯಾರಿ ನಡೆಸಬೇಕಾಗಿರುವುದರಿಂದ ಇದು ದುಪ್ಪಟ್ಟು ಹಣ ಬೇಕಾಗುತ್ತದೆ ಎನ್ನುತ್ತಾರೆ ಸಿದ್ದೇಗೌಡ. ಅಧಿಕಾರಿಗಳು ಭತ್ತದ ಬೆಳೆಗೆ ನೀರು ಕೊಡುತ್ತಾರೆ ಎಂಬುದಕ್ಕೆ ಏನು ಗ್ಯಾರಂಟಿ ಎಂಬ ಪ್ರಶ್ನೆ ಅವರನ್ನು ಕಾಡುತ್ತಿದೆ. ಕೆ ಶೆಟ್ಟಹಳ್ಳಿಯ ತಮ್ಮಣ್ಣಾಚಾರಿ ಅವರು ತುಂಬಿ ತುಳುಕುತ್ತಿರುವ ಜಲಾಶಯದಿಂದ ಉತ್ಸುಕರಾಗಿಲ್ಲ, ನೀರಾವರಿ ಸಲಹಾ ಸಮಿತಿಯ ಅಧಿಕೃತ ಘೋಷಣೆಗೆ ಕಾಯುತ್ತಿದ್ದಾರೆ. ನೀರಾವರಿ ಇಲಾಖೆ ಕೃಷಿಗೆ ನೀರು ಕೊಡಲು ಹಿಂದೇಟು ಹಾಕಿದ್ದರಿಂದ ಹಿಂದಿನ ವರ್ಷ ನಾವು ಬೆಳೆಗಳನ್ನು ಬೆಳೆಯಲಿಲ್ಲ. ಕನಿಷ್ಠ ಒಂದು ಬೆಳೆಗಾದರೂ ನೀರು ಕೊಡಬಹುದೆಂಬ ಭರವಸೆಯಿಂದ ಕೃಷಿ ಚಟುವಟಿಕೆ ಆರಂಭಿಸಿದ್ದೇನೆ ಎಂದ ಹೇಳಿದ್ದಾರೆ.

ವಿಳಂಬವಾದ ಮುಂಗಾರು ತಮ್ಮ ಸಂಕಷ್ಟವನ್ನು ಹೆಚ್ಚಿಸಿದೆ ಎಂದು ರೈತರು ಒಪ್ಪಿಕೊಳ್ಳುತ್ತಾರೆ ಮತ್ತು ತಮಿಳುನಾಡು ತನ್ನ ಪಾಲಿನ ನೀರನ್ನು ಪ್ರತಿದಿನ ಬಿಡುಗಡೆ ಮಾಡುವಂತೆ ಕೇಂದ್ರ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿತ್ತು. ಕಳೆದ ವಾರ ನಡೆದ ನೀರಾವರಿ ಸಮಾಲೋಚನಾ ಸಮಿತಿಯು ಅಚ್ಚುಕಟ್ಟಿನ ಕೆರೆಗಳನ್ನು ತುಂಬಿಸಲು ನೀರು ಬಿಡಲು ನಿರ್ಧರಿಸಿದೆ. ‘ಆನ್ ಆ್ಯಂಡ್ ಆಫ್’ ವ್ಯವಸ್ಥೆಯಲ್ಲಿ ಬೆಳೆಗಳಿಗೆ ನೀರು ಪೂರೈಸುವ ನಿರ್ಧಾರ ಕೈಗೊಂಡು ರೈತರ ಆಶಾಭಾವನೆಯನ್ನು ಮತ್ತಷ್ಟು ಹೆಚ್ಚಿಸಿದೆ. ಕೃಷಿ ಸಚಿವ ಎನ್‌ಎಂ ಚಲುವರಾಯಸ್ವಾಮಿ ಅವರು ಖಾರಿಫ್‌ ಬೆಳೆಗಳಿಗೆ ಕೆಆರ್‌ಎಸ್‌ ಅಚ್ಚುಕಟ್ಟಿನಲ್ಲಿ ನೀರಾವರಿಗೆ ನೀರು ಹರಿಸುವುದಾಗಿ ಹೇಳಿದ್ದರೂ ಈವರೆಗೆ ನೀರಾವರಿ ಸಮಾಲೋಚನಾ ಸಮಿತಿ ಸಭೆ ನಡೆಸದೆ ಹಾಗೂ ಆಯಾ ಪ್ರದೇಶದ ಸಂಬಂಧಪಟ್ಟವರ ಜತೆ ಸಭೆ ನಡೆಸಿ ನೀರು ಬಿಡುವ ಕುರಿತು ಸ್ಪಷ್ಟ ಚಿತ್ರಣ ನೀಡಿಲ್ಲ ಇದಿ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.

ಕೆರಗೋಡಿನ ರೈತ ಶಿವಣ್ಣ ಮಾತನಾಡಿ, ಕಳೆದ ಹಂಗಾಮಿನಲ್ಲಿ ಕೆಆರ್‌ಎಸ್ ನೀರಿನ ಮಟ್ಟ 92 ಅಡಿ ಇದ್ದಾಗ ಸರ್ಕಾರ ನೀರಾವರಿಗೆ ನೀರು ಹರಿಸದ ಕಾರಣ ಭತ್ತ ಮತ್ತು ಕಬ್ಬು ಬೆಳೆ ಕಳೆದುಕೊಂಡು ರೈತರು ಕೋಟಿಗಟ್ಟಲೆ ನಷ್ಟ ಅನುಭವಿಸಿದ್ದಾರೆ. ಸ್ಥಳೀಯ ರೈತರ ಅಗತ್ಯಗಳನ್ನು ಪೂರೈಸುವುದಕ್ಕಿಂತಲೂ ತಮಿಳುನಾಡಿನ ನೀರಿನ ಬೇಡಿಕೆಯನ್ನು ಪೂರೈಸಲು ಅಂದಿನ ಸರ್ಕಾರವು ಕಾವೇರಿ ನಿಯಂತ್ರಣ ಪ್ರಾಧಿಕಾರದ ಆದೇಶ ಪಾಲಿಸಲುಹೆಚ್ಚು ಗಮನಹರಿಸಿತ್ತು ಎಂದು ಆರೋಪಿಸಿದ್ದಾರೆ.

ಸಕ್ಕರೆ ಬಟ್ಟಲು ಎಂದೇ ಹೆಸರಾದ ಮಂಡ್ಯದಲ್ಲಿ ಕೃಷಿ ಚಟುವಟಿಕೆಗಳು ಹಿನ್ನಡೆ ಕಂಡಿದ್ದು, ಕಳೆದ ವರ್ಷ ಭೀಕರ ಬರಗಾಲದಿಂದ ಅನುಭವಿಸಿದ ನಷ್ಟದಿಂದಾಗಿ ಬಹುತೇಕರಿಗೆ ಬೀಜ, ಗೊಬ್ಬರ ಖರೀದಿಸಲು ಸಂಪನ್ಮೂಲವೇ ಇಲ್ಲದ ಕಾರಣ ಭತ್ತದ ಕೃಷಿಗೆ ಹಿನ್ನಡೆಯಾಗಿದೆ. ರೈತರಿಗೆ ದೊಡ್ಡ ಮೊತ್ತದ ಸಾಲ ಬಾಕಿ ಇರುವುದರಿಂದ ಬ್ಯಾಂಕ್‌ಗಳು ಹೊಸದಾಗಿ ಸಾಲ ನೀಡಲು ಹಿಂದೇಟು ಹಾಕುತ್ತಿವೆ. ಕಬ್ಬು ಬೆಳೆಗಾರ ಕೃಷ್ಣ ಮಾತನಾಡಿ, ಕ್ರಷಿಂಗ್ ಪುನರಾರಂಭಗೊಂಡ ಐದು ಸಕ್ಕರೆ ಕಾರ್ಖಾನೆಗಳಿಗೆ ದಿನಕ್ಕೆ 30,000 ಟನ್ ಕಬ್ಬು ಬೇಕು. 45,000 ಹೆಕ್ಟೇರ್‌ನಿಂದ 30,000 ಹೆಕ್ಟೇರ್‌ ಕಬ್ಬು ಬೆಳೆದಿರುವುದರಿಂದ ಅವರ ಅವಶ್ಯಕತೆಗಳನ್ನು ಪೂರೈಸುವುದು ಕಷ್ಟಕರವಾಗಿದೆ ಎಂದು ಹೇಳಿದರು.

ಕೃಷಿ ವೆಚ್ಚ, ಕೂಲಿ ಮತ್ತು ಕೃಷಿ ಒಳಹರಿವಿನ ಹೆಚ್ಚಳ ಮತ್ತು ಇಳುವರಿ ಕುಸಿತವು ಈಗಾಗಲೇ ಬರದಿಂದ ತತ್ತರಿಸಿರುವ ರೈತರ ಗಾಯದ ಮೇಲೆ ಉಪ್ಪು ಸವರಿದೆ. ರೈತರು ಕೃಷಿ ಮಾಡಲು ಇಚ್ಛಿಸುವುದಿಲ್ಲ ಮತ್ತು ಮರುಪಾವತಿ ಸಾಮರ್ಥ್ಯ ಹೊಂದಿಲ್ಲ ಎಂದು ತಿಳಿದ ಖಾಸಗಿ ಲೇವಾದೇವಿಗಾರರು ಅವರಿಗೆ ಸಾಲ ನೀಡುವ ಮನಸ್ಥಿತಿಯಲ್ಲಿಲ್ಲ ಎಂದು ತಿಳಿಸಿದ್ದಾರೆ. ಆದರೆ, ಸಕ್ಕರೆ ಕಾರ್ಖಾನೆಗಳು ಕ್ರಷಿಂಗ್, ಹಣ ಪಾವತಿ ಮತ್ತು ನೀರಾವರಿ ಸಮಾಲೋಚನಾ ಸಮಿತಿ ರೈತರಿಗೆ ಅರೆ ಒಣ ಬೆಳೆಗಳನ್ನು ಬೆಳೆಯಲು ಸಲಹೆ ನೀಡುವ ಬದಲು ಭತ್ತದ ಕೃಷಿಗೆ ನೀರಿನ ಭರವಸೆ ನೀಡಿದ ನಂತರ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಚುರುಕಾಗಬಹುದು ಎಂದು ಕೃಷ್ಣ ಅಭಿಪ್ರಾಯಪಟ್ಟರು. ಕಾವೇರಿ ಜಲಾನಯನ ಪ್ರದೇಶದಲ್ಲಿ ಕಬ್ಬಿನ ಕೊರತೆಯಿಂದಾಗಿ ಕಬ್ಬಿನ ಬೆಲೆ ಏರಿಕೆಯಾಗಬಹುದು ಎಂದು ರೈತರು ಭಾವಿಸುತ್ತಾರೆ ಮತ್ತು ಬೆಲ್ಲ ಘಟಕಗಳು ಸ್ಪರ್ಧಾತ್ಮಕ ಮಟ್ಟದಲ್ಲಿ ಟನ್‌ಗೆ 2800 ರು. ಪಾವತಿಸಿ ಖರೀದಿಸುತ್ತಿವೆ.

65,000 ಹೆಕ್ಟೇರ್‌ನಲ್ಲಿ ಭತ್ತ ಬೆಳೆಯುವ ಮಂಡ್ಯ ಜಿಲ್ಲೆಯಲ್ಲಿ 35,000 ಹೆಕ್ಟೇರ್‌ನಲ್ಲಿ ಭತ್ತದ ಬೆಳೆಯನ್ನು ಬೆಳೆಯಲಾಗಿದೆ. ಇದರಿಂದ ಹೆಚ್ಚಿನ ರೈತರು ನಷ್ಟ ಅನುಭವಿಸಿದ್ದಾರೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಕಬಿನಿ ಜಲಾಶಯ ತುಂಬಿ ತುಳುಕುತ್ತಿದ್ದು, ಈ ಭಾಗದ ರೈತರಿಗಿಂತ ತಮಿಳುನಾಡಿಗೆ ಹೆಚ್ಚು ಅಗತ್ಯಗಳನ್ನು ಪೂರೈಸಿದೆ. ಯಳಂದೂರು, ಕೊಳ್ಳೇಗಾಲ, ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲೂಕಿನ ಕೆಲವು ಭಾಗಗಳಲ್ಲಿ ನೀರಾವರಿ ಪ್ರದೇಶವನ್ನು ವಿಸ್ತರಿಸುವ ಕಬಿನಿ ಎರಡನೇ ಹಂತಕ್ಕೆ ಬೇಡಿಕೆ ಬಂದಿಲ್ಲ. ಕೆರೆ ತುಂಬಿಸುವ ಯೋಜನೆಯಡಿ 38 ಕೆರೆಗಳನ್ನು ತುಂಬಿಸಲಾಗಿದ್ದರೂ, ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಹೆಚ್ಚಿನ ಕೆರೆಗಳನ್ನು ತುಂಬಿಸಬೇಕೆಂಬ ಬೇಡಿಕೆಯಿದೆ. ಚಿಕ್ಕಹೊಳೆ-ಸುವರ್ಣಾವತಿ ಜಲಾಶಯಗಳನ್ನು ಜೋಡಿಸುವ ಮತ್ತು ಬರಪೀಡಿತ ಚಾಮರಾಜನಗರ ಜಿಲ್ಲೆಯ ಬಹುಪಾಲು ಕೆರೆಗಳಿಗೆ ನೀರು ತುಂಬಿಸುವ ಪ್ರಸ್ತಾವನೆಯು ಈ ಪ್ರದೇಶದಲ್ಲಿ ಕೃಷಿ-ಆರ್ಥಿಕತೆಯನ್ನು ಬಲಪಡಿಸುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಳಗಾವಿ ಎಂದಿಗೂ ಮಹಾರಾಷ್ಟ್ರಕ್ಕೆ ಸೇರುವುದಿಲ್ಲ; ಮಹಾಜನ ಸಮಿತಿ ವರದಿಯೇ ಅಂತಿಮ

ಹಣೆಗೆ ಗನ್ ಇಟ್ಟು ಪಕ್ಷದಲ್ಲಿ ಉಳಿಸಿಕೊಳ್ಳಲು ಸಾಧ್ಯವಿಲ್ಲ: BJP ನಾಯಕ ಅಣ್ಣಾಮಲೈ ಸ್ಫೋಟಕ ಹೇಳಿಕೆ!

RSS ನಿಷೇಧಿಸಬೇಕು: ಖರ್ಗೆ ಹೇಳಿಕೆಗೆ ದತ್ತಾತ್ರೇಯ ಹೊಸಬಾಳೆ ಹೇಳಿದ್ದೇನು?

Nehru-Patel Correspondence: ಭಾರತ ದೊಂದಿಗೆ ಕಾಶ್ಮೀರ ವಿಲೀನ, ನೆಹರು-ಪಟೇಲ್ ಪತ್ರ ವ್ಯವಹಾರ ಓದಿ, ಮೋದಿಗೆ ಖರ್ಗೆ ತಿರುಗೇಟು!

ಕೇಂದ್ರ ಕನ್ನಡವನ್ನು ನಿರ್ಲಕ್ಷಿಸಿ ಹಿಂದಿ ಹೇರುತ್ತಿದೆ; ಆದ್ರೆ ರಾಜ್ಯದ ಮದರಸಗಳಲ್ಲೂ ಕನ್ನಡ ಕಲಿಕೆ

SCROLL FOR NEXT