ಮಹಾದಾಯಿ (ಸಂಗ್ರಹ ಚಿತ್ರ) 
ರಾಜ್ಯ

ಸಮಿತಿ ಪುನರ್ ರಚನೆಗೂ ಮುನ್ನ ಮಹದಾಯಿ ಜಲಾನಯನ ಪ್ರದೇಶ ಪರಿಶೀಲನೆಗೆ ಗೋವಾ ಮುಂದು!

ನೀರು ಮತ್ತು ಸಾಮರಸ್ಯಕ್ಕಾಗಿ ಮಹದಾಯಿ ಪ್ರಗತಿಪರ ನದಿ ಪ್ರಾಧಿಕಾರವನ್ನು (ಪ್ರವಾಹ್) ಕೇಂದ್ರ ಸರ್ಕಾರವು ಪುನರ್ರಚಿಸಿ ಹೊಸ ಅಧ್ಯಕ್ಷರನ್ನು ನೇಮಿಸುವ ನಿರೀಕ್ಷೆಯಿದೆ.

ಬೆಳಗಾವಿ: ನೀರು ಮತ್ತು ಸಾಮರಸ್ಯಕ್ಕಾಗಿ ಮಹದಾಯಿ ಪ್ರಗತಿಪರ ನದಿ ಪ್ರಾಧಿಕಾರವನ್ನು (ಪ್ರವಾಹ್) ಕೇಂದ್ರ ಸರ್ಕಾರವು ಪುನರ್ರಚಿಸಿ ಹೊಸ ಅಧ್ಯಕ್ಷರನ್ನು ನೇಮಿಸುವ ನಿರೀಕ್ಷೆಯಿದೆ. ಆದರೆ ಅದಕ್ಕೂ ಮುನ್ನವೇ ಮಹದಾಯಿ ಜಲಾನಯನ ಪ್ರದೇಶವನ್ನು ಪಿಎಂ ಸ್ಕಾಟ್ ನೇತೃತದಲ್ಲಿ ಪರಿಶೀಲಿಸಲು ಗೋವಾ ಸರ್ಕಾರ ಉತ್ಸುಕವಾಗಿದೆ ಎಂದು ತಿಳಿದುಬಂದಿದೆ.

ಮಹದಾಯಿ ಜಲಾನಯನ ಪ್ರದೇಶವನ್ನು ಪರಿಶೀಲಿಸಲು ಗೋವಾ ಸರ್ಕಾರದ ತ್ರಿಪಕ್ಷೀಯ ಪ್ರಸ್ತಾವನೆಯು ಪ್ರವಾಹ್ ಪುನರ್ರಚನೆಗಾಗಿ ಕೇಂದ್ರ ನಡೆಸುತ್ತಿರುವ ಪ್ರಕ್ರಿಯೆಯನ್ನು ಗಮನಿಸಿದರೆ ಗೋವಾ ಸರ್ಕಾರದ ಪರಿಶೀಲನೆ ಕಾರ್ಯ ಅಸಂಭವ ಎಂದು ಬಲ್ಲ ಮೂಲಗಳು ತಿಳಿಸಿವೆ.ಗೋವಾ ಸರ್ಕಾರವು ಹಾಲಿ ಅಧ್ಯಕ್ಷ ಸ್ಕಾಟ್‌ಗೆ ಮನವಿ ಕಳುಹಿಸಲು ನಿರ್ಧರಿಸಿದೆ ಮತ್ತು ಸಮಿತಿಯನ್ನು ವಿಸರ್ಜಿಸುವ ಮೊದಲು ಸಭೆ ಕರೆದ ಪರಿಶೀಲನೆ ನಡೆಸುವಂತೆ ವಿನಂತಿಸಿದೆ ಎನ್ನಲಾಗಿದೆ.

ಜೂನ್ ಅಂತ್ಯದೊಳಗೆ ಅಧ್ಯಕ್ಷರ ಅವಧಿ ಮುಗಿಯಲಿದೆ, ಅದಕ್ಕೂ ಮೊದಲು, ಕನಿಷ್ಠ ಸಮಿತಿಯ ಸಭೆಯನ್ನು ನಡೆಸಬೇಕೆಂದು ಗೋವಾ ಸರ್ಕಾರ ಬಯಸುತ್ತಿದೆ. 2018 ರಲ್ಲಿ ಮಹದಾಯಿ ಜಲ ವಿವಾದ ನ್ಯಾಯಮಂಡಳಿ ನೀಡಿದ ಅಂತಿಮ ತೀರ್ಪಿನ ಅನುಷ್ಠಾನ ಸಕ್ರಿಯಗೊಳಿಸಲು ಜಲ ಶಕ್ತಿ ಸಚಿವಾಲಯವು ಮಹದಾಯಿ ಪ್ರವಾಹ್ ಅನ್ನು ಸ್ಥಾಪಿಸಿದೆ ಎಂಬುದನ್ನು ಇಲ್ಲಿ ಗಮನಿಸಬಹುದು.

ಪ್ರವಾಹ್ ಫೆಬ್ರವರಿಯಲ್ಲಿ ಗೋವಾದಲ್ಲಿ ತನ್ನ ಮೊದಲ ಮತ್ತು ಏಕೈಕ ಸಭೆಯನ್ನು ನಡೆಸಿತು, ಇದರಲ್ಲಿ ಪ್ರಾಧಿಕಾರವು ಸಮಸ್ಯೆಯನ್ನು "ಸೌಹಾರ್ದಯುತವಾಗಿ" ಪರಿಹರಿಸಲು ಮುಂದಾಯಿತು.

ಮಾರ್ಚ್‌ನಲ್ಲಿ ಕರ್ನಾಟಕವು ಕಣಕುಂಬಿಯಲ್ಲಿ ನಿರ್ಮಿಸಲಾದ ಕಾಲುವೆಗೆ ನೀರು ಹರಿಯಲು ಅನುವು ಮಾಡಿಕೊಡಲು ಆಳವಾದ ಕಾಲುವೆಗಳ ಕೆಲಸವನ್ನು ಪ್ರಾರಂಭಿಸಿದೆ. ಹೀಗಾಗಿ ಈ ವಿಷಯವಾಗಿ ಮಧ್ಯಪ್ರವೇಶಿಸಲು ಪ್ರವಾಹ್ ಅನ್ನು ಸಂಪರ್ಕಿಸಿದೆ ಮತ್ತು ಅದು ಏನೆಂದು ಖಚಿತಪಡಿಸಿಕೊಳ್ಳಲು ಸ್ಥಳ ಪರಿಶೀಲನೆಗೆ ಒತ್ತಾಯಿಸಿದೆ ಎಂದು ಮೂಲಗಳು ತಿಳಿಸಿವೆ.

ಗೋವಾದ ಒತ್ತಾಯದ ಮೇರೆಗೆ, ಪ್ರವಾಹ್ ಏಪ್ರಿಲ್‌ನಲ್ಲಿ, ನದಿ ಜಲಾನಯನ ಪ್ರದೇಶವನ್ನು ಅಧ್ಯಯನ ಮಾಡಲು ಜಂಟಿ ಪರಿಶೀಲನೆಯ ಕೋರಿಕೆಯನ್ನು ಒಪ್ಪಿಕೊಂಡಿತು. ಎಲ್ಲಾ ಮೂರು ನದಿಯ ರಾಜ್ಯಗಳಾದ ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರ ತಮ್ಮ ಅವಶ್ಯಕತೆಗೆ ಅನುಗುಣವಾಗಿ, ಪರಿಶೀಲನೆ ನಡೆಸಲು ದಿನಾಂಕಗಳನ್ನು ತಿಳಿಸಲು ಕೇಳಿಕೊಂಡಿದೆ. ಗೋವಾ ಕೂಡ ಏಪ್ರಿಲ್‌ನಲ್ಲಿ ತಪಾಸಣೆಯ ದಿನಾಂಕಗಳನ್ನು ಪ್ರಸ್ತಾಪಿಸಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಅದಾದ ನಂತರ ಗೋವಾ ಸರ್ಕಾರಕ್ಕೆ ಪ್ರವಾಹ್‌ ಕಡೆಯಿಂದ ಯಾವುದೇ ಸಂವಹನ ಬಂದಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT