ಅಂಚೆ ಕಚೇರಿ (ಪ್ರಾತಿನಿಧಿಕ ಚಿತ್ರ) 
ರಾಜ್ಯ

ರಾಜ್ಯದ ಆಯ್ದ ನಗರಗಳಲ್ಲಿ ಇನ್ಮುಂದೆ ಭಾನುವಾರವೂ ಅಂಚೆ ಕಚೇರಿಗಳು ಓಪನ್!

ಕಚೇರಿಗೆ ತೆರಳುವವರ ಬೇಡಿಕೆಗೆ ಮಣಿದ ಕರ್ನಾಟಕ ಅಂಚೆ ಇಲಾಖೆಯು ಭಾನುವಾರದಂದು ರಾಜ್ಯದಾದ್ಯಂತ ಆಯ್ದ ಕೆಲವು ಅಂಚೆ ಕಚೇರಿಗಳನ್ನು ತೆರೆಯಲು ಚಿಂತನೆ ನಡೆಸಿದೆ. ವಾರದ ಯಾವುದೇ ಕೆಲಸದ ದಿನದಂದು ಅವುಗಳನ್ನು ಮುಚ್ಚಲಾಗುತ್ತದೆ. ಇದರಿಂದ ಸಾರ್ವಜನಿಕರು ವಾರದ ಎಲ್ಲಾ ದಿನಗಳಲ್ಲಿ ಕನಿಷ್ಠ ತಮ್ಮ ನಗರಗಳಲ್ಲಿ ಯಾವುದಾದರೂ ಸ್ಥಳದಲ್ಲಿ ಅಂಚೆ ಸೇವೆಗಳನ್ನು ಪಡೆಯಬಹುದು.

ಬೆಂಗಳೂರು: ಕಚೇರಿಗೆ ತೆರಳುವವರ ಬೇಡಿಕೆಗೆ ಮಣಿದ ಕರ್ನಾಟಕ ಅಂಚೆ ಇಲಾಖೆಯು ಭಾನುವಾರದಂದು ರಾಜ್ಯದಾದ್ಯಂತ ಆಯ್ದ ಕೆಲವು ಅಂಚೆ ಕಚೇರಿಗಳನ್ನು ತೆರೆಯಲು ಚಿಂತನೆ ನಡೆಸಿದೆ. ವಾರದ ಯಾವುದೇ ಕೆಲಸದ ದಿನದಂದು ಅವುಗಳನ್ನು ಮುಚ್ಚಲಾಗುತ್ತದೆ. ಇದರಿಂದ ಸಾರ್ವಜನಿಕರು ವಾರದ ಎಲ್ಲಾ ದಿನಗಳಲ್ಲಿ ಕನಿಷ್ಠ ತಮ್ಮ ನಗರಗಳಲ್ಲಿ ಯಾವುದಾದರೂ ಸ್ಥಳದಲ್ಲಿ ಅಂಚೆ ಸೇವೆಗಳನ್ನು ಪಡೆಯಬಹುದು.

ಹಿರಿಯ ಅಂಚೆ ಅಧಿಕಾರಿಯೊಬ್ಬರು ಟಿಎನ್ಐಇ ಜೊತೆಗೆ ಮಾತನಾಡಿ, 'ಅಂತಹ ಕ್ರಮವನ್ನು ಪರಿಚಯಿಸಲು ನಾವು ಸಾರ್ವಜನಿಕರಿಂದ ಸಲಹೆಗಳನ್ನು ಸ್ವೀಕರಿಸುತ್ತಿದ್ದೇವೆ. ಬೆಂಗಳೂರಿನ ಜಿಪಿಒನಲ್ಲಿ ಭಾನುವಾರ ಆರ್ಟಿಕಲ್ಸ್‌ಗಳನ್ನು ಬುಕ್ ಮಾಡುವ ಸೌಲಭ್ಯವಿದೆ. ಆದಾಗ್ಯೂ, ನಗದು ಠೇವಣಿ ಅಥವಾ ಉಳಿತಾಯ ಖಾತೆಗಳಿಂದ ಹಿಂತೆಗೆದುಕೊಳ್ಳುವಿಕೆ ಅಥವಾ ಮನಿ ಆರ್ಡರ್‌ಗಳ ಬುಕಿಂಗ್‌ನಂತಹ ಹಣಕಾಸಿನ ವಹಿವಾಟುಗಳನ್ನು ನೀಡಲಾಗುವುದಿಲ್ಲ ಎಂದರು.

ಭಾನುವಾರ ಕಾರ್ಯನಿರ್ವಹಿಸುವ ಅಂಚೆ ಕಚೇರಿಗಳಲ್ಲಿ ಹಣಕಾಸಿನ ಸೇವೆಗಳ ಅಗತ್ಯತೆಯನ್ನು ಸಾರ್ವಜನಿಕರು ಬಯಸುತ್ತಿದ್ದಾರೆ. ಆದ್ದರಿಂದ ನಾವು ಈಗ ಈ ಕ್ರಮದ ಕುರಿತು ಆಲೋಚಿಸುತ್ತಿದ್ದೇವೆ. ಈಗಾಗಲೇ ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿಯಂತಹ ಬಹು ಅಂಚೆ ಕಚೇರಿಗಳನ್ನು ಹೊಂದಿರುವ ಪ್ರಮುಖ ನಗರಗಳಲ್ಲಿ ಈ ವ್ಯವಸ್ಥೆಯನ್ನು ಮಾಡಲಾಗುತ್ತದೆ.

'ಬೆಂಗಳೂರಿನಲ್ಲಿ, ನಾವು ಭಾನುವಾರ ಐದು ಅಂಚೆ ಕಚೇರಿಗಳ ಬಾಗಿಲು ತೆರೆಯಲು ಯೋಜಿಸಿದ್ದೇವೆ. ನಗರದ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮದಲ್ಲಿ ತಲಾ ಒಂದು ಮತ್ತು ಕೇಂದ್ರ ವ್ಯಾಪಾರ ಜಿಲ್ಲೆಯಲ್ಲಿ ಒಂದನ್ನು ತೆರೆಯುವುದು ಸದ್ಯದ ನಮ್ಮ ಯೋಜನೆಯಾಗಿದೆ. ಇದಲ್ಲದೆ, ಈ ಅಂಚೆ ಕಚೇರಿಗಳನ್ನು ಬುಧವಾರದಂದು ಮುಚ್ಚಲು ನಾವು ಯೋಜಿಸಿದ್ದೇವೆ' ಎಂದು ಅಧಿಕಾರಿ ಹೇಳಿದರು.

'ರಾಜ್ಯದಾದ್ಯಂತ ನಿರ್ದಿಷ್ಟ ಅಂಚೆ ಕಚೇರಿಗಳನ್ನು ಗುರುತಿಸುವ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ. ನಾವು ಈ ಯೋಜನೆಯೊಂದಿಗೆ ಮುಂದುವರಿಯುವ ಮೊದಲು ಗ್ರಾಹಕರಿಂದ ಹೆಚ್ಚಿನ ಪ್ರತಿಕ್ರಿಯೆಯನ್ನು ಪಡೆಯಲು ಮುಂದಾಗಿದ್ದೇವೆ' ಎಂದು ಅವರು ಹೇಳಿದರು.

ಕರ್ನಾಟಕ ಪೋಸ್ಟಲ್ ಸಾರ್ವಜನಿಕರಿಗೆ ನವೀನ ರೀತಿಯ ಸೌಲಭ್ಯಗಳನ್ನು ನೀಡುವಲ್ಲಿ ಉನ್ನತ ಸ್ಥಾನದಲ್ಲಿದೆ. ಧಾರವಾಡ ಮತ್ತು ಬೆಂಗಳೂರಿನಲ್ಲಿ ಕ್ರಮವಾಗಿ ನವೆಂಬರ್ 2022 ಮತ್ತು ಜನವರಿ 2023 ರಲ್ಲಿ ಸಂಜೆ ಅಂಚೆ ಕಚೇರಿಗಳನ್ನು ಪ್ರಾರಂಭಿಸಲಾಗಿದೆ ಎಂದು ಇನ್ನೊಬ್ಬ ಅಧಿಕಾರಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

IPL 2026: MI vs RCB; ವಾಂಖೆಡೆ ಕ್ರೀಡಾಂಗಣದಲ್ಲಿ ಇತಿಹಾಸ ಬರೆದ ಬೆಂಗಳೂರು, ಅತ್ಯಧಿಕ ಮೊತ್ತ!

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

SCROLL FOR NEXT