ರಾಜ್ಯ

ಕಿಡಿಗೇಡಿಗಳಿಂದ ತುಷಾರ್ ಗಿರಿನಾಥ್ ಹೆಸರಿನಲ್ಲಿ ಅಧಿಕಾರಿಗಳಿಗೆ ವಾಟ್ಸಾಪ್ ಸಂದೇಶ!

ಶುಕ್ರವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಮುಖ್ಯ ಇಂಜಿನಿಯರ್ ವಿಜಯಕುಮಾರ್ ಹರಿದಾಸ್ ಅವರಿಗೆ ಅಪರಿಚಿತ ಸಂಖ್ಯೆ 94280 53334 ರಿಂದ ಸಂದೇಶ ಬಂದಿದ್ದು, ಅಧಿಕಾರಿಗಳನ್ನು ಎಲ್ಲಿದ್ದೀರಾ ಎಂದು ಕೇಳಿದ್ದಾರೆ.

ಬೆಂಗಳೂರು: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೆಸರಿನಲ್ಲಿ ಕಿಡಿಗೇಡಿಗಳು ಶುಕ್ರವಾರ ಮಹಾನಗರ ಪಾಲಿಕೆಯಲ್ಲಿ ಕೆಲಸ ಮಾಡುವ ಇತರ ಅಧಿಕಾರಿಗಳಿಗೆ ವಾಟ್ಸಾಪ್‌ನಲ್ಲಿ ಸಂದೇಶಗಳನ್ನು ಕಳುಹಿಸಿದ್ದಾರೆ. ಅಪರಾಧದ ಬಗ್ಗೆ ತಿಳಿದ ಬಿಬಿಎಂಪಿ ಐಟಿ ಸೆಲ್‌ನ ಉಪ ಮುಖ್ಯ ಮಾಹಿತಿ ಅಧಿಕಾರಿ ಪ್ರಭಾಕರ್ ಅವರು ಪೊಲೀಸ್ ಕೇಂದ್ರ ವಿಭಾಗದ ಸಿಇಎನ್ ಪೊಲೀಸರಿಗೆ ದೂರು ನೀಡಿದ್ದಾರೆ. ಶುಕ್ರವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಮುಖ್ಯ ಇಂಜಿನಿಯರ್ ವಿಜಯಕುಮಾರ್ ಹರಿದಾಸ್ ಅವರಿಗೆ ಅಪರಿಚಿತ ಸಂಖ್ಯೆ 94280 53334 ರಿಂದ ಸಂದೇಶ ಬಂದಿದ್ದು, ಅಧಿಕಾರಿಗಳನ್ನು ಎಲ್ಲಿದ್ದೀರಾ ಎಂದು ಕೇಳಿದ್ದಾರೆ.

ಅದನ್ನು ಪರಿಶೀಲಿಸಿದಾಗ, ವಾಟ್ಸಾಪ್ ಡಿಸ್ಪ್ಲೇ ನಲ್ಲಿ ಗಿರಿನಾಥ್ ಅವರ ಮುಖ, ಹೆಸರು, ಹುದ್ದೆ ಬಂದಿದೆ. ಇಂತಹ ಸಂದೇಶಗಳಿಗೆ ಪ್ರತಿಕ್ರಿಯಿಸದಂತೆ ಹಾಗೂ ತಕ್ಷಣವೇ ವರದಿ ನೀಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತರು ಎಲ್ಲ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇಂದು ಬೆಳಿಗ್ಗೆ ಸಂದೇಶ ಬಂದಿತು ಮತ್ತು ಇದು ನಕಲಿ ಸಂದೇಶವಿರಬಹುದೆಂಬ ಶಂಕೆ ವ್ಯಕ್ತವಾಯಿತು. ಮುಖ್ಯ ಆಯುಕ್ತರು ಏಕೆ ಗುಡ್ ಮಾರ್ನಿಂಗ್ ಹೇಳ್ತಾರೆ! ಎಲ್ಲಿದ್ದೀರಿ? ಎನು ಮಾಡುತ್ತಿದ್ದೀರಿ? ಎಂದು ವಾಟ್ಸಾಪ್‌ನಲ್ಲಿ ಕೇಳುತ್ತಾರೆ? ಅನಿಸಿತು. ನನ್ನಂತೆಯೇ ಇನ್ನೂ ಕೆಲವು ಅಧಿಕಾರಿಗಳು ಅಂತಹ ಸಂದೇಶಗಳನ್ನು ಸ್ವೀಕರಿಸಿದ್ದಾರೆ. ಹೀಗಾಗಿ ಈ ಸಂಬಂಧ ಬಿಬಿಎಂಪಿ ಮಾಹಿತಿ ತಂತ್ರಜ್ಞಾನ ಅಧಿಕಾರಿ ಪ್ರಭಾಕರ್ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಹರಿದಾಸ್ ಹೇಳಿದ್ದಾರೆ.

ಘಟನೆಯ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಇಂತಹ ಘಟನೆ ನಡೆದಿರುವುದು ಎರಡನೇ ಬಾರಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರ ಹೆಸರನ್ನು ಈ ಹಿಂದೆಯೂ ದುರುಪಯೋಗಪಡಿಸಲಾಗಿದೆ ಮತ್ತು ಎರಡು ವರ್ಷಗಳ ಹಿಂದೆ ನನ್ನ ಹೆಸರನ್ನೂ ಕೆಲವು ಕಿಡಿಗೇಡಿಗಳು ಬಳಸಿದ್ದರು. ಈಗ ಅಧಿಕಾರಿಗಳಿಗೆ ಸಂದೇಶಗಳನ್ನು ರವಾನಿಸಲು ಮತ್ತೆ ನನ್ನ ಹೆಸರು ಮತ್ತು ಫೋಟೋವನ್ನು ಬಳಸಲಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT