ತಹಸೀಲ್ದಾರ್ ಭೇಟಿ ಮಾಡಿದ ರೈತರು 
ರಾಜ್ಯ

ಗದಗ: ವಕ್ಫ್ ವಿರುದ್ಧ ಕಾನೂನು ಹೋರಾಟ ನಡೆಸಿ ಭೂಮಿ ವಾಪಸ್ ಪಡೆದ 315 ರೈತರು!

ಒಟ್ಟಾರೆಯಾಗಿ, 315 ರೈತರು ತಮ್ಮ ಜಮೀನುಗಳ ಮೇಲಿನ ಮಂಡಳಿಯ ಹಕ್ಕುಗಳ ವಿರುದ್ಧ ಸ್ಥಳೀಯ ನ್ಯಾಯಾಲಯದ ಮೊರೆ ಹೋಗಿದ್ದರು.

ಗದಗ: ತಮ್ಮ ಜಮೀನಿನ ಮೇಲಿನ ಸ್ಥಳೀಯ ವಕ್ಫ್ ಮಂಡಳಿಯ ಹಕ್ಕುಗಳ ವಿರುದ್ಧ 2022 ಆಗಸ್ಟ್‌ನಲ್ಲಿ ಕಾನೂನು ಹೋರಾಟ ನಡೆಸಿದ ಗದಗ ಜಿಲ್ಲೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ರೈತರು ಈಗ ತಮ್ಮ ಆಸ್ತಿಯನ್ನು ತಮ್ಮ ಹೆಸರಿಗೆ ಮರಳಿ ಪಡೆದಿದ್ದಾರೆ.

ಒಟ್ಟಾರೆಯಾಗಿ, 315 ರೈತರು ತಮ್ಮ ಜಮೀನುಗಳ ಮೇಲಿನ ಮಂಡಳಿಯ ಹಕ್ಕುಗಳ ವಿರುದ್ಧ ಸ್ಥಳೀಯ ನ್ಯಾಯಾಲಯದ ಮೊರೆ ಹೋಗಿದ್ದರು. ಅವರಲ್ಲಿ ಹಲವರು ಈಗ ಇದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿರುವ ಇತರ ರೈತರಲ್ಲಿ ಜಾಗೃತಿ ಮೂಡಿಸಲು ಅಭಿಯಾನವನ್ನು ಪ್ರಾರಂಭಿಸಿದ್ದಾರೆ.

ಜಮೀನುಗಳ ಒಡೆತನದ ಗಲಾಟೆಯಿಂದಾಗಿ ಹಲವರು ಬೆಳೆ ವಿಮೆ ಪರಿಹಾರ ಹಾಗೂ ಇತರೆ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಬಹುತೇಕ ಅನಕ್ಷರಸ್ಥರಾಗಿರುವ ರೈತರಿಗೆ ತಮ್ಮ ಜಮೀನು ವಕ್ಫ್ ಆಸ್ತಿ ಎಂದು ನಮೂದಿಸಿರುವುದರಿಂದ ಅವರ ಮಾಲೀಕತ್ವದ ಬಗ್ಗೆ ಏನಾಗುತ್ತಿದೆ ಎಂದು ತಿಳಿದಿರಲಿಲ್ಲ.

ಪೂರ್ವಜರಿಂದ ಪಡೆದ ನಮ್ಮ ಭೂಮಿ ವಕ್ಫ್ ಮಂಡಳಿ ಅಧೀನದಲ್ಲಿದೆ ಎಂಬುದು ಮಾರ್ಚ್ 21, 2019 ರಂದು ಹಲವರಿಗೆ ತಿಳಿಯಿತು. ಅನೇಕರು ತಮ್ಮ ಪೂರ್ವಜರಿಂದ ತಮ್ಮ ಭೂಮಿಯನ್ನು ಪಡೆದುಕೊಂಡಿದ್ದೇವೆ ಎಂದು ಹೇಳಿದರೆ, ಕೆಲವರು ಅದನ್ನು ಕಬ್ಜಾ ಎಂಬ ಒಪ್ಪಂದದ ಮೇಲೆ ತೆಗೆದುಕೊಂಡಿರುವುದಾಗಿ ಹೇಳಿದ್ದರು.

1974ರ ಭೂಸುಧಾರಣಾ ಕಾಯ್ದೆ ಆಧಾರಿತವಾಗಿ ಪಡೆದ ತಮ್ಮ ಜಮೀನುಗಳನ್ನು ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ ಎಂದು ತಿಳಿದ ರೈತರು ನ್ಯಾಯಾಲಯದ ಮೊರೆ ಹೋಗಿದ್ದರು. ಆಗಸ್ಟ್ 2022 ರಲ್ಲಿ, 315 ರೈತರು ತಮ್ಮ ಭೂಮಿಯನ್ನು ವಕ್ಫ್ ಮಂಡಳಿಯಿಂದ ಮರಳಿ ಪಡೆದರು. ಒಟ್ಟು 516 ರೈತರು ನ್ಯಾಯಾಲಯದ ಮೊರೆ ಹೋಗಿದ್ದರು. ಅವರಲ್ಲಿ 315 ರೈತರು ತಮ್ಮ ಭೂ ದಾಖಲೆಗಳಲ್ಲಿ ತಮ್ಮ ಹೆಸರನ್ನು ಮರಳಿ ಪಡೆದಿದ್ದಾರೆ. ಉಳಿದವರು ನ್ಯಾಯಾಲಯದ ಆದೇಶಕ್ಕಾಗಿ ಕಾಯುತ್ತಿದ್ದಾರೆ.

ಕಳೆದ ಆರು ವರ್ಷಗಳಿಂದ ಕಾನೂನು ಹೋರಾಟ ನಡೆಸುತ್ತಿದ್ದೇವೆ. ಕೆಲವರಿಗೆ ತಮ್ಮ ಜಮೀನಿಗೆ ಸಂಬಂಧಿಸಿದಂತೆ ತಾಂತ್ರಿಕ ಮತ್ತು ಇತರೆ ಸಮಸ್ಯೆಗಳಿವೆ. ನಮ್ಮ ಭೂಮಿಯನ್ನು ಮರಳಿ ಪಡೆಯುವುದು ನಮಗೆ ಖಚಿತವಾಗಿದೆ ಎಂದು ರೈತರ ಗುಂಪು TNIE ಗೆ ತಿಳಿಸಿದರು. ಇದೇ ವೇಳೆ ಗದಗ ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯರೊಬ್ಬರು ಮಾತನಾಡಿ, ಖರೀದಿದಾರರು ಖರೀದಿಸುವ ಮುನ್ನ ಜಮೀನಿನ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಬೇಕು ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ತ್ರಿಪುರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ: ಉನಕೋಟಿಯಲ್ಲಿ ಮಸೀದಿ-ಮುಸ್ಲಿಂ ಅಂಗಡಿಗಳಿಗೆ ಬೆಂಕಿ

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

Tubelight in his head: ಹಿಮಂತಾ ಬಿಸ್ವಾ ಶರ್ಮಾ ವಿರುದ್ಧ AIMIM ಮುಖ್ಯಸ್ಥ ಓವೈಸಿ ಕಿಡಿ! ಏನಿದು ವಿವಾದ?

SCROLL FOR NEXT