ಸಂಡೂರು ಅರಣ್ಯದಲ್ಲಿ ಸುರಂಗ ಮಾರ್ಗ ಪತ್ತೆ 
ರಾಜ್ಯ

ಸಂಡೂರು ಅರಣ್ಯದಲ್ಲಿ ಬ್ರಿಟಿಷರ ಕಾಲದ ಗಣಿಗಾರಿಕೆ ಸುರಂಗ ಮಾರ್ಗ ಪತ್ತೆ!

ಸುರಂಗದ ಪ್ರವೇಶದಲ್ಲಿ ಒಂದು ದೊಡ್ಡ ದ್ವಾರವಿದೆ, ಇದು ಗುಹೆಯಂತೆ ಕಾಣುತ್ತದೆ ಎಂದು ತಂಡದ ತಜ್ಞರೊಬ್ಬರು ತಿಳಿಸಿದ್ದಾರೆ.

ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಸಂಡೂರಿನ ಕಾಡುಗಳಲ್ಲಿ ಆರಂಭಿಕ ಮಾನವ ಆವಾಸಸ್ಥಾನಗಳನ್ನು ಪತ್ತೆಹಚ್ಚುವಲ್ಲಿ ತೊಡಗಿರುವ ತಜ್ಞರ ತಂಡವು ಇತ್ತೀಚೆಗೆ ಬ್ರಿಟಿಷರ ಕಾಲದ 200 ವರ್ಷಗಳಷ್ಟು ಹಳೆಯದಾದ ಒಂದು ಕಿ.ಮೀ ಸುರಂಗ ಮಾರ್ಗ ಪತ್ತೆ ಹಚ್ಚಿದೆ.

ಸಂಡೂರಿನ ಕಾಡುಗಳಲ್ಲಿ ಅನೇಕ ದೊಡ್ಡ ಮತ್ತು ಚಿಕ್ಕ ಗುಹೆಗಳಿದ್ದು, ತಜ್ಞರ ತಂಡವು ಕೆಲವು ಸಮಯದ ಹಿಂದೆ ತನ್ನ ಅಧ್ಯಯನವನ್ನು ಪ್ರಾರಂಭಿಸಿತು. ಪುರಾತತ್ವ ಪೂರ್ವ ಇತಿಹಾಸ ವಸ್ತುಸಂಗ್ರಹಾಲಯದ ಗೌರವ ನಿರ್ದೇಶಕ ಪ್ರೊ.ರವಿ ಕೋರಿಶೆಟ್ಟರ್ ಮತ್ತು ಬಳ್ಳಾರಿಯ ವನ್ಯಜೀವಿ ತಜ್ಞರಾದ ಸಮದ್ ಕೊಟ್ಟೂರು ಮತ್ತು ಸಂತೋಷ್ ಮಾರ್ಟಿನ್ ನೇತೃತ್ವದ ತಂಡವು ಸುರಂಗವನ್ನು ಕಂಡುಹಿಡಿದಿದೆ.

ತಂಡಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ನೆರವು ನೀಡಿದ್ದಾರೆ. ಸ್ಥಳೀಯ ಅರಣ್ಯ ಸಿಬ್ಬಂದಿಗೆ ಸುರಂಗದಂತಹ ರಚನೆಯ ಬಗ್ಗೆ ತಿಳಿದಿತ್ತು, ಆದರೆ ಅದರೊಳಗೆ ಹೋಗುವ ಸಾಹಸ ಮಾಡಲಿಲ್ಲ. ಭಾನುವಾರ, ತಂಡವು ಸುರಂಗದೊಳಗೆ ಸುಮಾರು 100 ಮೀಟರ್ ಕ್ರಮಿಸುವಲ್ಲಿ ಯಶಸ್ವಿಯಾಗಿದೆ. ಸುರಂಗದ ಎತ್ತರವು ಕಡಿಮೆಯಾಗುತ್ತಾ ಸಾಗುತ್ತದೆ. ಅದು ಕೆಲವು ಸ್ಥಳಗಳಲ್ಲಿ ನಾಲ್ಕು ಅಡಿಗಳಷ್ಟು ಹತ್ತಿರದಲ್ಲಿದೆ. ಸುರಂಗದ ಪ್ರವೇಶದಲ್ಲಿ ಒಂದು ದೊಡ್ಡ ದ್ವಾರವಿದೆ, ಇದು ಗುಹೆಯಂತೆ ಕಾಣುತ್ತದೆ ಎಂದು ತಂಡದ ತಜ್ಞರೊಬ್ಬರು ತಿಳಿಸಿದ್ದಾರೆ.

ಸಂಡೂರು ಅರಣ್ಯದಲ್ಲಿ ಸುರಂಗ ಮಾರ್ಗ ಪತ್ತೆ

ದೇವದಾರಿ ಬೆಟ್ಟಗಳ ಮೇಲಿರುವ ಸುರಂಗದ ಕುರಿತು ಸ್ಥಳೀಯವಾಗಿ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಕಬ್ಬಿಣದ ಅದಿರನ್ನು ಅನ್ವೇಷಿಸಲು ಬ್ರಿಟಿಷ್ ಆಳ್ವಿಕೆಯಲ್ಲಿ ಈ ಸುರಂಗವನ್ನು ನಿರ್ಮಿಸಲಾಗಿದೆ. ಗಣಿಗಾರಿಕೆ ಕ್ಷೇತ್ರದ ತಜ್ಞರು ಅದರ ಮೇಲೆ ಹೆಚ್ಚಿನ ಬೆಳಕು ಚೆಲ್ಲಬಹುದು. ಸಮುದ್ರ ಮಟ್ಟದಿಂದ 900 ಮೀಟರ್ ಎತ್ತರದಲ್ಲಿ ಸುರಂಗವನ್ನು ನೋಡುವುದು ಆಸಕ್ತಿದಾಯಕವಾಗಿದೆ ಎಂದು ತಂಡದ ಸದಸ್ಯರೊಬ್ಬರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

ನಾಳೆ ಜಗತ್ತಿನಾದ್ಯಂತ ಯಶ್ ನಟನೆಯ 'Toxic' ಚಿತ್ರ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!

ಬೆಂಗಳೂರು: ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ, ಹೇರ್ ಸ್ಟೈಲಿಸ್ಟ್ ಸಾವು; Video

BPSC ಪರೀಕ್ಷೆ ವಿವಾದ: ಬಿಹಾರ ಸಿಎಂ ನಿವಾಸದ ಬಳಿ ಬ್ಯಾರಿಕೇಡ್ ಮುರಿದ ವಿದ್ಯಾರ್ಥಿಗಳು, ಜಲಫಿರಂಗಿಗೆ ಜಗ್ಗದೆ ರೇನ್ ಡ್ಯಾನ್ಸ್ ಮಾಡಿ ಪ್ರತಿಭಟನೆ!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!