ಸಾಂದರ್ಭಿಕ ಚಿತ್ರ 
ರಾಜ್ಯ

KSRTC ಸಿಬ್ಬಂದಿಗಳ ಸ್ವಾಭಾವಿಕ ಮರಣ: ಪರಿಹಾರ ಹಣ ದುಪ್ಪಟ್ಟು ನಿಗದಿ; ಸೆಪ್ಟೆಂಬರ್ 1 ರಿಂದ ಜಾರಿ

ಸೆಪ್ಟೆಂಬರ್ 1 ರಿಂದ, ಮೃತ ಸಿಬ್ಬಂದಿ ಕುಟುಂಬಗಳು 20 ಲಕ್ಷ ರೂ.ಗಳನ್ನು ಪಡೆಯಲಿದ್ದಾರೆ. KSRTC ಈಗಾಗಲೇ ಆಕಸ್ಮಿಕ ಸಾವುಗಳಿಗೆ ಒದಗಿಸುವ 1 ಕೋಟಿ ನೀಡುತ್ತಿದೆ.

ಬೆಂಗಳೂರು: ಅಪಘಾತಗಳನ್ನು ಹೊರತುಪಡಿಸಿ ಇತರ ಕಾರಣಗಳಿಂದ ಸಾವನ್ನಪ್ಪುವ ನೌಕರರ ಕುಟುಂಬಸ್ಥರಿಗೆ ನೀಡಲಾಗುವ ಪರಿಹಾರ ಹಣವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ದ್ವಿಗುಣಗೊಳಿಸಿದೆ.

ಸೆಪ್ಟೆಂಬರ್ 1 ರಿಂದ, ಮೃತ ಸಿಬ್ಬಂದಿ ಕುಟುಂಬಗಳು 20 ಲಕ್ಷ ರೂ.ಗಳನ್ನು ಪಡೆಯಲಿದ್ದಾರೆ. ನಿಗಮದ ಪರಿಷ್ಕೃತ ನೌಕರರ ಕುಟುಂಬ ಕಲ್ಯಾಣ ಯೋಜನೆಯಡಿಯಲ್ಲಿ 14 ಲಕ್ಷ ರೂ.ಗಳು ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಿಂದ 6 ಲಕ್ಷ ರೂ. ಹಣವನ್ನು ಪರಿಹಾರವಾಗಿ ನೀಡಲಾಗುತ್ತದೆ. KSRTC ಈಗಾಗಲೇ ಆಕಸ್ಮಿಕ ಸಾವುಗಳಿಗೆ ಒದಗಿಸುವ 1 ಕೋಟಿ ರೂ.ಗಳ ವಿಮಾ ರಕ್ಷಣೆಯ ಜೊತೆಗೆ, ಸರ್ಕಾರಿ ಸ್ವಾಮ್ಯದ ನಿಗಮಗಳಲ್ಲಿ ನೌಕರರ ಕಲ್ಯಾಣಕ್ಕಾಗಿ ಹೊಸ ಮಾನದಂಡ ರೂಪಿಸಿದೆ.

ಅಕ್ಟೋಬರ್ 2023 ರಲ್ಲಿ, ಹೃದಯಾಘಾತ ಮತ್ತು ಮೂತ್ರಪಿಂಡ ವೈಫಲ್ಯದಿಂದ ಕ್ಯಾನ್ಸರ್ ವರೆಗೆ ಆಕಸ್ಮಿಕವಲ್ಲದ ಸಾವುಗಳಿಗೆ ಪರಿಹಾರವನ್ನು 3 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗಳಿಗೆ ಹೆಚ್ಚಿಸಲಾಯಿತು. ಅಂದಿನಿಂದ, 157 ಕುಟುಂಬಗಳಿಗೆ ಪರಿಹಾರ ಸಿಕ್ಕಿದೆ. ಈಗ, 20 ಲಕ್ಷ ರೂ.ಗಳಿಗೆ ಏರಿಕೆಯಾಗಿರುವುದು KSRTC ಕಾರ್ಮಿಕರಿಗೆ "ಐತಿಹಾಸಿಕ ಕ್ಷಣ" ಎಂದು ಹೇಳಲಾಗುತ್ತಿದೆ.

ನಮ್ಮ ಕೆಎಸ್‌ಆರ್‌ಟಿಸಿಯಲ್ಲಿ 33,000 ಸಿಬ್ಬಂದಿ ಇದ್ದಾರೆ ಮತ್ತು ಪ್ರತಿ ವರ್ಷ 35 ರಿಂದ 50 ಅಪಘಾತರಹಿತ ಸಾವುಗಳು ಸಂಭವಿಸುತ್ತವೆ. ಈ ಹಿಂದೆ ಕಾರ್ಮಿಕ ಆಯುಕ್ತರಾಗಿ ಸೇವೆ ಸಲ್ಲಿಸಿರುವುದರಿಂದ, ಕುಟುಂಬಗಳು ಅನುಭವಿಸುವ ನೋವು ನನಗೆ ತಿಳಿದಿದೆ. ಈ ಪರಿಷ್ಕರಣೆಯು ಅವರಿಗೆ ಘನತೆ ಮತ್ತು ಭದ್ರತೆ ಒದಗಿಸುತ್ತದೆ. ಈ ನಿರ್ಧಾರ ನೌಕರರ ಕಲ್ಯಾಣ ಕ್ರಮವೆಂದು ಪ್ರಶಂಸಿಸಲಾಗುತ್ತಿದೆ, ಇದರಿಂದಾಗಿ ನೌಕರರ ಕುಟುಂಬ ಸಮಸ್ಯೆಯಲ್ಲಿ ಸಿಲುಕಲು ಬಿಡುವುದಿಲ್ಲ ಎಂದು ಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ ಪಸೈದ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್