ಫ್ರೀಡಂ ಪಾರ್ಕ್ ನಲ್ಲಿ ನಡೆದ ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಲೇಖಕ ಚೇತನ್ ಭಗತ್  online desk
ರಾಜ್ಯ

ದಂಪತಿಗಳಿಗೆ ಈಗ ಖಚಿತತೆ ಇಲ್ಲ: ಈಗಿನದ್ದೆಲ್ಲಾ situationship ಅಷ್ಟೇ: ಚೇತನ್ ಭಗತ್

ಇಂತಹ ಪರಿಸ್ಥಿತಿ ಇತ್ತೀಚಿನ ಕಾದಂಬರಿ '12 ಇಯರ್ಸ್: ಮೈ ಮೆಸ್ಡ್-ಅಪ್ ಲವ್ ಸ್ಟೋರಿ' ಬರೆಯಲು ಪ್ರೇರೇಪಿಸಿದೆ ಎಂದು ಹೇಳಿದ್ದಾರೆ.

ಬೆಂಗಳೂರು: ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಮಾತನಾಡಿರುವ, ಲೇಖಕ ಚೇತನ್ ಭಗತ್ ಭಾರತದಲ್ಲಿ ಪ್ರಣಯ ಸಂಬಂಧಗಳ ಸ್ವರೂಪದ ಬಗ್ಗೆ ಮಾತನಾಡಿದ್ದು, ಪ್ರಣಯ ಮತ್ತು ಪ್ರೀತಿಯ ಪರಿಕಲ್ಪನೆಯು ವರ್ಷಗಳಲ್ಲಿ ತೀವ್ರವಾಗಿ ಬದಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಂತಹ ಪರಿಸ್ಥಿತಿ ಇತ್ತೀಚಿನ ಕಾದಂಬರಿ '12 ಇಯರ್ಸ್: ಮೈ ಮೆಸ್ಡ್-ಅಪ್ ಲವ್ ಸ್ಟೋರಿ' ಬರೆಯಲು ಪ್ರೇರೇಪಿಸಿದೆ ಎಂದು ಹೇಳಿದ್ದಾರೆ.

ಸಾಂಪ್ರದಾಯಿಕ ಪ್ರೇಮಕಥೆಗಳಲ್ಲಿ ಕುಟುಂಬಗಳು ಮುಖ್ಯ ಅಡಚಣೆಯಾಗಿದ್ದವು, ಆದರೆ ಇದಕ್ಕೆ ಭಿನ್ನವಾಗಿ, ಆಧುನಿಕ ಸಂಬಂಧಗಳು ಭಾವನಾತ್ಮಕ ಅನಿಶ್ಚಿತತೆಯಿಂದ ರೂಪುಗೊಳ್ಳುತ್ತವೆ ಎಂದು ಚೇತನ್ ಭಗತ್ ವಿವರಿಸಿದ್ದಾರೆ.

"ಹಿಂದೆ, ಪೋಷಕರಿಗೆ ಖಚಿತವಿರಲಿಲ್ಲ. ಇಂದು, ದಂಪತಿಗಳಿಗೆ ಪರಸ್ಪರರ ಬಗ್ಗೆ ಖಚಿತವಿರುವುದಿಲ್ಲ. ಇದು ನಾವು ವಾಸಿಸುವ ಭಾರತದ situationship" ಎಂದು ಚೇತನ್ ಭಗತ್ ಹೇಳಿದ್ದಾರೆ.

ಮೈ ಮೆಸ್ಡ್-ಅಪ್ ಲವ್ ಸ್ಟೋರಿ ಪುಸ್ತಕ 21 ವರ್ಷದ ಮಹಿಳೆ ಮತ್ತು 33 ವರ್ಷದ ಪುರುಷನ ನಡುವಿನ ಪ್ರೇಮಕಥೆಯಾಗಿದೆ ಎಂದು ಚೇತನ್ ಹೇಳಿದ್ದಾರೆ. ಮುಖ್ಯಪಾತ್ರಗಳ ನಡುವಿನ 12 ವರ್ಷದ ವಯಸ್ಸಿನ ಅಂತರವು ಉದ್ದೇಶಪೂರ್ವಕ ಆಯ್ಕೆಯಾಗಿದೆ ಎಂದು ಲೇಖಕರು ಹೇಳಿದ್ದಾರೆ.

"ಜನರು ನೈತಿಕವಾಗಿ ಗೊಂದಲಕ್ಕೊಳಗಾಗುವ ವಸ್ತುವನ್ನು ನಾನು ಬಯಸಿದ್ದೆ. ಅರ್ಧದಷ್ಟು ಜನರು ಅದು ಸರಿ ಎಂದು ಭಾವಿಸುತ್ತಾರೆ, ಅರ್ಧದಷ್ಟು ಜನರು ಅದು ಸಂಪೂರ್ಣವಾಗಿ ತಪ್ಪು ಎಂದು ಭಾವಿಸುತ್ತಾರೆ" ಎಂದು ಅವರು ಹೇಳಿದರು, ಅಂತಹ ನಿಶ್ಚಿತತೆ ಇಲ್ಲದ ಪ್ರದೇಶಗಳು ಇಂದಿನ ಯುವಕರು ಎದುರಿಸುತ್ತಿರುವ ನಿಜ ಜೀವನದ ಸಂದಿಗ್ಧತೆಗಳನ್ನು ಪ್ರತಿಬಿಂಬಿಸುತ್ತವೆ ಎಂದು ಚೇತನ್ ಭಗತ್ ತಿಳಿಸಿದ್ದಾರೆ.

ಭಗತ್ ತಮ್ಮ ಪುಸ್ತಕದಲ್ಲಿ ಸಾಂಸ್ಕೃತಿಕ ವೈರುಧ್ಯಗಳನ್ನು, ವಿಶೇಷವಾಗಿ ಸಂಪ್ರದಾಯವಾದಿ ಜೈನ ಮನೆತನದ ಯುವತಿಯ ಜೀವನವನ್ನು ಚಿತ್ರಿಸುವ ಬಗ್ಗೆಯೂ ಮಾತನಾಡಿದರು. ಅನೇಕ ಯುವ ಭಾರತೀಯರು ಮನೆಯಲ್ಲಿ ಒಂದು ರೀತಿಯಲ್ಲಿ ಮತ್ತು ಹೊರಗಿನ ಪ್ರಪಂಚದಲ್ಲಿ ಇನ್ನೊಂದು ರೀತಿಯಲ್ಲಿ ವರ್ತಿಸುತ್ತಾ "ದ್ವಿ ಜೀವನ" ನಡೆಸುತ್ತಾರೆ ಎಂದು ಅವರು ಹೇಳಿದರು. "ಮನೆಯಲ್ಲಿ, ಹುಡುಗರಿಲ್ಲ, ಮದ್ಯವಿಲ್ಲ, ಸ್ವಾತಂತ್ರ್ಯವಿಲ್ಲ. ಹೊರಗೆ, ಅವರು ಸ್ವತಂತ್ರರು ಮತ್ತು ಮಹತ್ವಾಕಾಂಕ್ಷೆಯುಳ್ಳವರು" ಎಂದು ಅವರು ಹೇಳಿದರು.

ಚಲನಚಿತ್ರ ರೂಪಾಂತರಗಳ ಕುರಿತು, ಭಗತ್ ಚಲನಚಿತ್ರಗಳು ಇನ್ನು ಮುಂದೆ ತಮ್ಮ ಅಂತಿಮ ಗುರಿಯಲ್ಲ ಎಂದು ಹೇಳಿದರು. "ಚಲನಚಿತ್ರಗಳು ಅಂತಿಮ ಬಹುಮಾನವಲ್ಲ. 2025 ರಲ್ಲಿ ಜನರು ಇನ್ನೂ ಓದುವಂತೆ ನಾನು ಪುಸ್ತಕಗಳನ್ನು ಬರೆಯುತ್ತೇನೆ" ಎಂದು ಅವರು ಹೇಳಿದರು, ಅವರು ಈಗ ಬರವಣಿಗೆಯನ್ನು ಶಿಸ್ತಿನ ಅಭ್ಯಾಸವಾಗಿ ಪರಿಗಣಿಸುತ್ತಾರೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಖಾಸಗಿ ಶಾಲೆಗಳ ಮಾನ್ಯತೆ: ನಿಯಮಗಳ ಪರಿಷ್ಕರಣೆಗೆ ಸದನ ಸಮಿತಿ ರಚನೆ- ಸಚಿವ ಮಧು ಬಂಗಾರಪ್ಪ

ಕೊಲೆ ಪ್ರಕರಣ: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಜಾ!

ದೇಶಕ್ಕೆ ಸ್ವಾತಂತ್ರ್ಯ ಬಂದ 79 ವರ್ಷಗಳ ನಂತರ 'ವಂದೇ ಮಾತರಂ' ಚರ್ಚೆಯ ಅಗತ್ಯವೇನಿತ್ತು?: ಪ್ರಿಯಾಂಕಾ ಗಾಂಧಿ; Video

ಪೂಮಾದಿಂದ 300 ಕೋಟಿ ಆಫರ್ ಕೈಬಿಟ್ಟ ಕೊಹ್ಲಿ: ತನ್ನದೇ ಬ್ರ್ಯಾಂಡ್ ಗಾಗಿ ಹೊಸ ಡೀಲ್, 40 ಕೋಟಿ ರೂ. ಹೂಡಿಕೆ!

ಮಳೆ, ಚಳಿಯಿಂದಾಗಿ ಕರ್ನಾಟಕದಲ್ಲಿ ಬಿಯರ್ ಮಾರಾಟದಲ್ಲಿ ಶೇ. 19.55ರಷ್ಟು ಕುಸಿತ: ಸಚಿವ ತಿಮ್ಮಾಪುರ

SCROLL FOR NEXT