ಜ್ಞಾನ ಭಾರತಿ ಕ್ಯಾಂಪಸ್ 
ರಾಜ್ಯ

ತೀವ್ರ ಚಳಿಯಿಂದ ಸಿಲಿಕಾನ್ ಸಿಟಿ ತತ್ತರ: 15 ಡಿಗ್ರಿಗೆ ಕುಸಿಯಲಿದೆ ಬೆಂಗಳೂರು ತಾಪಮಾನ!

ಮುಂದಿನ ಕೆಲವು ದಿನಗಳಲ್ಲಿ ರಾತ್ರಿಯ ತಾಪಮಾನವು ಸುಮಾರು 15°C ಗೆ ಇಳಿಯುವ ನಿರೀಕ್ಷೆಯಿದೆ, ಆದರೆ ನಿರಂತರ ಶುಷ್ಕ ಹವಾಮಾನದಿಂದಾಗಿ ಹಗಲಿನಲ್ಲಿ ತಾಪಮಾನ ಹೆಚ್ಚಲಿದೆ.

ಬೆಂಗಳೂರು: ರಾಜಧಾನಿ ಬೆಂಗಳೂರು ಪ್ರತಿ ದಿನ ಬೆಳಗ್ಗೆ ಮಂಜಿನ ನಗರಿಯಂತಾಗುತ್ತಿದೆ. ದಿನೇ ದಿನೇ ಚಳಿ ಹೆಚ್ಚಾಗುತ್ತಿದೆ. ನಗರವು ಬೆಳಗ್ಗಿನ ಜಾವ ಮಂಜಿನಿಂದ ಆವರಿಸಿಕೊಂಡಿರುವುದು, ಗಾಳಿ ಮಿಶ್ರಿತ ವಾತಾವರಣ, ಹಾಗೂ ಭಾಗಶಃ ಮೋಡ ಕವಿದ ಆಕಾಶ-ಎಲ್ಲವೂ ಸೇರಿ ಬೆಂಗಳೂರು ತನ್ನ ಕ್ಲಾಸಿಕ್ ಚಳಿಗಾಲದ ಹವಾಮಾನವನ್ನು ಮತ್ತೊಮ್ಮೆ ಅನುಭವಿಸಲಿದೆ.

ಮುಂದಿನ ಕೆಲವು ದಿನಗಳಲ್ಲಿ ರಾತ್ರಿಯ ತಾಪಮಾನವು ಸುಮಾರು 15°C ಗೆ ಇಳಿಯುವ ನಿರೀಕ್ಷೆಯಿದೆ, ಆದರೆ ನಿರಂತರ ಶುಷ್ಕ ಹವಾಮಾನದಿಂದಾಗಿ ಹಗಲಿನ ತಾಪಮಾನ ಹೆಚ್ಚಲಿದೆ. ದಿತ್ವಾ ಚಂಡಮಾರುತದ ಪ್ರಭಾವದಿಂದ ನಗರವು ಅನುಭವಿಸಿದ ಶೀತ ಹವಾಮಾನದಿಂದ ಅಸಾಮಾನ್ಯ ತಾಪಮಾನ ಬದಲಾವಣೆಗೆ ದಾರಿ ಮಾಡಿಕೊಟ್ಟಿದೆ.

ಬೆಂಗಳೂರು ಹಗಲಿನಲ್ಲಿ ಬೇಸಿಗೆಯಂತೆ ತಾಪಮಾನ ಮತ್ತು ರಾತ್ರಿ ತೀರಾ ತಂಪಾದ ವಾತಾವರಣವಿರಲಿದೆ. ಗರಿಷ್ಠ ತಾಪಮಾನವು 29°C ಅನ್ನು ತಲುಪುತ್ತಿದೆ, ಆದರೆ ವಾರದುದ್ದಕ್ಕೂ ಕನಿಷ್ಠ ತಾಪಮಾನವು 15°C ಯಷ್ಟು ಕಡಿಮೆಯಾಗುವ ಮುನ್ಸೂಚನೆ ಇದೆ.

ಬೆಂಗಳೂರಿನ ಭಾರತೀಯ ಹವಾಮಾನ ಇಲಾಖೆಯ (IMD) ಹಿರಿಯ ಹವಾಮಾನಶಾಸ್ತ್ರಜ್ಞ ಸಿ.ಎಸ್. ಪಾಟೀಲ್, ನಗರಕ್ಕೆ ಸಂಬಂಧಿಸಿದಂತೆ, ಮುಂದಿನ ಏಳು ದಿನಗಳಲ್ಲಿ ಸ್ಪಷ್ಟ ಆಕಾಶವನ್ನು ಸೂಚಿಸುತ್ತದೆ ಎಂದು ಹೇಳಿದರು. ನಗರದಲ್ಲಿ ರಾತ್ರಿ ತಾಪಮಾನವು ಸುಮಾರು 15 ರಿಂದ 17 ಡಿಗ್ರಿ ಇರಲಿದೆ.

ಶುಷ್ಟ ಹವಾಮಾನದಿಂದ ಹಗಲಿನ ತಾಪಮಾನವು ಬೆಚ್ಚಗಿರುತ್ತದೆ ಎಂದು ಅವರು ಹೇಳಿದರು. ಕಡಿಮೆ ತೇವಾಂಶದಿಂದಾಗಿ, ತಂಪಾಗಿಸುವಿಕೆ ಮತ್ತು ಬಿಸಿಯಾಗುವ ಪ್ರಕ್ರಿಯೆ ವೇಗವಾಗಿರುತ್ತವೆ" ಎಂದು ಅವರು ವಿವರಿಸಿದರು,

ಐಎಂಡಿ ದತ್ತಾಂಶದ ಪ್ರಕಾರ, ಮಂಗಳವಾರ ಗರಿಷ್ಠ ತಾಪಮಾನವು 29.2°C ಮತ್ತು ಬುಧವಾರ 27.6°C ದಾಖಲಾಗಿದೆ. ಮಂಗಳವಾರ ಕನಿಷ್ಠ ತಾಪಮಾನವು 16.1°C ಮತ್ತು ಬುಧವಾರ 17.5°C ಇತ್ತು.

ಮುಂದಿನ ಒಂದು ವಾರ ಕರ್ನಾಟಕದಲ್ಲಿ ಒಣ ಹವಾಮಾನ ಮುಂದುವರಿಯಲಿದ್ದು, ಹೆಚ್ಚಿನ ಜಿಲ್ಲೆಗಳಲ್ಲಿ ಆಕಾಶವು ಸ್ಪಷ್ಟವಾಗಿರುತ್ತದೆ ಎಂದು ಪಾಟೀಲ್ ತಿಳಿಸಿದ್ದಾರೆ. ಉತ್ತರದ ಒಳನಾಡಿನ ಹಲವು ಜಿಲ್ಲೆಗಳಲ್ಲಿ ರಾತ್ರಿ ತಾಪಮಾನವು 10 ರಿಂದ 12°C ಗೆ ಇಳಿಯಬಹುದು ಮತ್ತು ಕೆಲವು ಪ್ರದೇಶಗಳಲ್ಲಿ, ವಿಶೇಷವಾಗಿ ಕಲಬುರಗಿ ಪ್ರದೇಶದ ಸುತ್ತಲೂ 10°C ಗಿಂತ ಕಡಿಮೆಯಾಗಬಹುದು ಎಂದು ಐಎಂಡಿ ಮಾಹಿತಿ ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಚೇರಿಯಲ್ಲಿ ಐಟಿ ಶೋಧ ನಡೆಯುತ್ತಿದ್ದಾಗಲೇ ಶೂಟ್ ಮಾಡಿಕೊಂಡ ಸಿಜೆ ರಾಯ್; ಪೊಲೀಸ್ ಆಯುಕ್ತರು ಹೇಳಿದ್ದೇನು?

12 ರೋಲ್ಸ್ ರಾಯ್ಸ್‌ ಸೇರಿ ಹಲವು ಐಷಾರಾಮಿ ಕಾರು, ಸಾವಿರಾರು ಕೋಟಿ ಒಡೆಯ ಸಿಜೆ ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?

BIFF ನಲ್ಲಿ ಪ್ಯಾಲೆಸ್ತೀನ್ ಚಿತ್ರಗಳ ಪ್ರದರ್ಶನಕ್ಕೆ ಪ್ರಕಾಶ್ ರಾಜ್ ಒತ್ತಾಯ: ಬಿಜೆಪಿ ವಾಗ್ದಾಳಿ!

ಹಿಂದೂ ಧರ್ಮದ ಬದ್ಧತೆ ಸಾಬೀತುಪಡಿಸಲು ಗೋಮಾಂಸ ರಫ್ತು ನಿಲ್ಲಿಸಿ: ಸಿಎಂ ಯೋಗಿಗೆ ಶಂಕರಾಚಾರ್ಯ ಸವಾಲು

News headlines 30-01-2026 | ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಡಾ. ಸಿ.ಜೆ ರಾಯ್ ಆತ್ಮಹತ್ಯೆ; ದಾಳಿ: 4 ಲಕ್ಷ ಲಂಚ ಪಡೆಯುತ್ತಿದ್ದ ಇನ್ಸ್ ಪೆಕ್ಟರ್ ಲೋಕಾಯುಕ್ತ ಬಲೆಗೆ; ಬಂಧನದ ಬಳಿಕ ಹೈಡ್ರಾಮ; ರಾಜ್ಯ ಸರ್ಕಾರಿ ನೌಕರರಿಗೆ ಖಾದಿ ಬಟ್ಟೆ ಬಳಕೆ ಕಡ್ಡಾಯ

SCROLL FOR NEXT