ಅಪಘಾತ 
ರಾಜ್ಯ

ಬೆಂಗಳೂರು: ನೀರು ಕುಡಿಯಲು ಬೈಕ್ ನಿಂದ ಇಳಿದ ಮಹಿಳೆಗೆ ಲಾರಿ ಡಿಕ್ಕಿ; ಸ್ಥಳದಲ್ಲೇ ಸಾವು

ಮೃತಳನ್ನು ಪೊಲೀಸರು ಲಕ್ಷ್ಮಿ ಎಂದು ಗುರುತಿಸಲಾಗಿದೆ, ಆಕೆಯ ಪತಿ ಮತ್ತು ಆಕೆಯ ಎಂಟು ತಿಂಗಳ ಮಗು ಬದುಕುಳಿದಿದ್ದಾರೆ.

ಬೆಂಗಳೂರು: ಗುರುವಾರ ಮಧ್ಯಾಹ್ನ ಪೀಣ್ಯ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಹೆಸರಘಟ್ಟ ಕ್ರಾಸ್ ನಂತರ 8 ನೇ ಮೈಲಿ ಬಳಿ ಲಾರಿಯೊಂದು 21 ವರ್ಷದ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತಳನ್ನು ಪೊಲೀಸರು ಲಕ್ಷ್ಮಿ ಎಂದು ಗುರುತಿಸಲಾಗಿದೆ, ಆಕೆಯ ಪತಿ ಮತ್ತು ಆಕೆಯ ಎಂಟು ತಿಂಗಳ ಮಗು ಬದುಕುಳಿದಿದ್ದಾರೆ. ಮಗುವನ್ನು ಎತ್ತಿಕೊಂಡಿದ್ದ ಆಕೆಯ ಪತಿ ಅಂಬರೀಶ್, ಪತ್ನಿ ಸಾಯುವುದನ್ನು ನೋಡಿ ಪ್ರಜ್ಞೆ ತಪ್ಪಿದರು. ಅವರನ್ನು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಲಕ್ಷ್ಮಿ ನೀರು ಕುಡಿಯಲು ಬಯಸಿದ್ದರಿಂದ ನೆಲಮಂಗಲಕ್ಕೆ ಹೋಗುವ ದಾರಿಯಲ್ಲಿ ಕುಟುಂಬ ದ್ವಿಚಕ್ರ ವಾಹನ ನಿಲ್ಲಿಸಿತ್ತು. ಮದ್ಯದ ಅಮಲಿನಲ್ಲಿದ್ದ ಲಾರಿ ಚಾಲಕ, ಮಹಿಳೆ ನೀರು ಕುಡಿಯುತ್ತಿದ್ದಾಗ ಆಕೆಯ ಮೇಲೆ ಲಾರಿ ಹರಿಸಿದ್ದಾನೆ. ಆಕೆಯ ಪತಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಲಾರಿ ಚಾಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸಿದನು, ಆದರೆ ದಾರಿಹೋಕರು ಬೆನ್ನಟ್ಟಿ ಆತನನ್ನು ಹಿಡಿದಿದ್ದಾರೆ. ನಂತರ ಅವರು ಟ್ರಕ್ ಮೇಲೆ ಕಲ್ಲು ಎಸೆದರು. ಹರಿಯಾಣದ ಚಾಲಕ ಮೊಹಮ್ಮದ್ ಎಂಬಾಕನನ್ನು ಪೊಲೀಸರು ಬಂಧಿಸಿದರು.

ಆರಂಭದಲ್ಲಿ, ನೆಲಮಂಗಲ ಕಡೆಗೆ ಹೋಗುತ್ತಿದ್ದಾಗ ಟ್ರಕ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ಭಾವಿಸಿದ್ದರು. ಆದರೆ ಚೇತರಿಸಿಕೊಂಡ ನಂತರ, ಅಂಬರೀಶ್ ಪೊಲೀಸರಿಗೆ ತಿಳಿಸಿದ್ದು, ಪತ್ನಿ ನೀರು ಕುಡಿಯಲು ಬಯಸಿದ್ದರಿಂದ ದ್ವಿಚಕ್ರ ವಾಹನ ನಿಲ್ಲಿಸಿದ್ದೆವು ಎಂದು ತಿಳಿಸಿದ್ದಾರೆಯ. "ಆ ಕುಟುಂಬ ತುಮಕೂರಿನವರು. ಅಂಬರೀಶ್ ನೆಲಮಂಗಲ ಬಳಿಯ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಾರೆ" ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜೆಫ್ರಿ ಎಪ್ಸ್ಟೀನ್ ಜೊತೆಗೆ ಅಕ್ರಮ ಸಂಬಂಧ ಆಪಾದನೆ: ಪ್ರಿನ್ಸ್ ಆಂಡ್ರ್ಯೂ ಬಿರುದು ತೆಗೆದುಹಾಕಿ ಅರಮನೆಯಿಂದ ಹೊರಹಾಕಿದ King Charles III

ಧರ್ಮಸ್ಥಳ ಕೇಸ್'ಗೆ ಬಿಗ್ ಟ್ವಿಸ್ಟ್: ಮೂಲ ಪ್ರಕರಣ ರದ್ಧತಿಗೆ ಬುರುಡೆ ಗ್ಯಾಂಗ್ ಮನವಿ, ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ

'ಕಸ ಸುರಿಯುವ ಹಬ್ಬ'ದಲ್ಲಿ ಒಂದೇ ದಿನ 218 ಮನೆಗಳ ಮುಂದೆ ಕಸದ ರಾಶಿ: 2.80 ಲಕ್ಷ ದಂಡ ವಸೂಲಿ-Video

Women's World Cup 2025: ಜೆಮಿಮಾ ಭರ್ಜರಿ ಶತಕ, 5 ವಿಕೆಟ್ ಗಳಿಂದ ಆಸೀಸ್ ಸೋಲಿಸಿ, ಫೈನಲ್ ಗೆ ಲಗ್ಗೆ ಇಟ್ಟ ಭಾರತ!

ಮೋದಿ ಮತಕ್ಕಾಗಿ 'ಭರತ ನಾಟ್ಯ'ನೂ ಮಾಡ್ತಾರೆ: ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು!

SCROLL FOR NEXT