ಸಾಂಕೇತಿಕ ಚಿತ್ರ 
ರಾಜ್ಯ

ನೀನು ಸತ್ತರೆ ನನ್ನ ಅಕ್ಕ ಚೆನ್ನಾಗಿರುತ್ತಾಳೆಂದ ಬಾಮೈದ: ಕತ್ತು ಕೊಯ್ದುಕೊಂಡು ವ್ಯಕ್ತಿ ಆತ್ಮಹತ್ಯೆಗೆ ಶರಣು..!

ಶುಕ್ರವಾರ ಮನೆಯಲ್ಲಿದ್ದ ಅಕ್ಕಿ ಮಾರಾಟ ಮಾಡಿ, ಸಾರಾಯಿ ಕುಡಿದು ಬಂದಿದ್ದ. ಈ ವೇಳೆ ಪತ್ನಿ ರೇಖಾ ಪತಿ ಮಲ್ಲಪ್ಪ ಜೊತೆಗೆ ಜಗಳಕ್ಕಿಳಿದಿದ್ದಳು.

ಬೆಳಗಾವಿ: ನೀನು ಸತ್ತರೆ ಅಕ್ಕ ಚೆನ್ನಾಗಿ ಇರುತ್ತಾಳೆ ಎಂಬ ಬಾಮೈದನ ಮಾತಿಗೆ ಸಿಟ್ಟಾದ ವ್ಯಕ್ತಿಯೊಬ್ಬ ಕುಡುಗೋಲಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಶರಣಾಗಿರುವ ಘಟನೆಯೊಂದು ಬೆಳಗಾವಿ ತಾಲೂಕಿನ ಹೊನ್ನಿಹಾಳ ಗ್ರಾಮದಲ್ಲಿ ಶನಿವಾರ ನಡೆದಿದೆ.

ಹೊನ್ನಿಹಾಳ‌ದ ಮಲ್ಲಪ್ಪ ಕಟಬುಗೋಳ (35) ಸಾವಿಗೀಡಾದವರು. ಸಾರಾಯಿ ದಾಸನಾಗಿದ್ದ ಮಲ್ಲಪ್ಪ, ಪತ್ನಿ ರೇಖಾ ಜೊತೆ ಪದೇಪದೇ ಜಗಳಕ್ಕಿಳುಯುತ್ತಿದ್ದ.

ಶುಕ್ರವಾರ ಮನೆಯಲ್ಲಿದ್ದ ಅಕ್ಕಿ ಮಾರಾಟ ಮಾಡಿ, ಸಾರಾಯಿ ಕುಡಿದು ಬಂದಿದ್ದ. ಈ ವೇಳೆ ಪತ್ನಿ ರೇಖಾ ಪತಿ ಮಲ್ಲಪ್ಪ ಜೊತೆಗೆ ಜಗಳಕ್ಕಿಳಿದಿದ್ದಳು.

ನಂತರ ಪತಿಗೆ ಬುದ್ದಿ ಹೇಳಲಿ ಎಂದು ಸಹೋದರ ಮಲ್ಲಿಕಾರ್ಜುನ್ ಬಡಕಪ್ಪನವರ್'ನನ್ನು ಮನೆಗೆ ಕರೆಸಿದ್ದಾಳೆ. ಮನೆಗೆ ಬಂದ ಮಲ್ಲಿಕಾರ್ಜುನ ಮಲ್ಲಪ್ಪ ಜೊತೆಗೆ ಜಗಳಕ್ಕಳಿದಿದ್ದು, ಮಾತಿನ ಚಕಮಕಿ ವೇಳೆ ಮಲ್ಲಪ್ಪ ಅವರಿಗೆ ಮರದ ಕೋಲಿನಿಂದ ಹೊರೆದಿದ್ದಾನೆ. ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಈ ವೇಳೆ ಮಲ್ಲಪ್ಪ ಕುಡುಗೋಲು ಎತ್ತಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ.

ಇದಕ್ಕೆ ಪ್ರತಿಯಾಗಿ ಮಲ್ಲಿಕಾರ್ಜುನ ಅವರು, ನೀನು ಸತ್ತರೆ, ನನ್ನ ಸಹೋದರಿ ಚೆನ್ನಾಗಿರುತ್ತಾಳೆಂದು ಹೇಳಿದ್ದಾನೆ. ಇದರಿಂದ ತೀವ್ರವಾಗಿ ಕೆಂಡಾಮಂಡಲಗೊಂಡ ಮಲ್ಲಪ್ಪ ಕೂಡಲೇ ಕುಡುಗೋಲಿನಿಂದ ಕತ್ತು ಕೊಯ್ದುಕೊಂಡಿದ್ದಾನೆ. ಬಳಿಕ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಘಟನೆಯ ನಂತರ, ಮಲ್ಲಿಕಾರ್ಜುನ ಸ್ಥಳದಿಂದ ಪರಾರಿಯಾಗಿದ್ದನು. ಮಾರಿಹಾಳ ಪೊಲೀಸರು ತಕ್ಷಣ ಆಗಮಿಸಿ, ಆರಂಭಿಕ ತನಿಖೆ ನಡೆಸಿ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಕ್ಕಾಗಿ ಮಲ್ಲಿಕಾರ್ಜುನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಪ್ರಕರಣದಲ್ಲಿ ತ್ವರಿತವಾಗಿ ಕ್ರಮ ಕೈಗೊಂಡ ಪೊಲೀಸರು, ಆರೋಪಿ ಮಲ್ಲಿಕಾರ್ಜುನನನ್ನು ಬಂಧಿಸಿ, ನಂತರ ಮಲ್ಲಪ್ಪನ ಶವವನ್ನು ಶವಪರೀಕ್ಷೆಗೆ ಕಳುಹಿಸಿದ್ದಾರೆ. ಬಳಿಕ ಅಂತಿಮ ಸಂಸ್ಕಾರಕ್ಕಾಗಿ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

SCROLL FOR NEXT